Sunday, June 8, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ದೇಶದ ಪ್ರತಿಯೊಬ್ಬ ಪ್ರಜೆಯು ಈಗ ಸಾವಿನೊಡನೆ ಹೋರಾಡಬೇಕಿದೆ

ಬದಲಿ ಕೊಳ್ಳುವವರೆಗೂ ತೀರಾ ಅಗತ್ಯವಿದ್ದರೆ ಮಾತ್ರ ಚೀನಾ ವಸ್ತುಗಳನ್ನು ಬಳಸಿ

June 18, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಂತು ಚೀನಾದಿಂದ ಬಂದ ಕೊರೊನಾ ಸುದ್ದಿ ಚೀನಾ ಯುದ್ಧದಿಂದ ಸ್ವಲ್ಪ ಬದಿಗೆ ಸರಿಯಿತು ಅಂತ ಅಂದ್ಕೊಂಡ್ರೆ ಏನೋ ಅಭಿಯಾನ ಅಂತೆ.. ಆ ವಸ್ತು ತೊಗೊಬಾರದಂತೆ.. ಈ ಫೋನ್ ಆ್ಯಪ್ ಬಳಸಬಾರದಂತೆ.. ದೇಶದ ಆರ್ಥಿಕತೆಯಂತೆ… ಏನೋಪ್ಪಾ.. ಗೋಳೇ ಮುಗೀತಿಲ್ಲ..

ನಾವಾಯಿತು.. ನಮ್ಮ ಕೆಲಸ ಆಯಿತು.. ನೀವು ಹೇಳಿದ್ದನ್ನೆಲ್ಲ ಕೇಳಿಕೊಂಡು ಮಾಡುತ್ತಾ ಕೂತಿದ್ದರೆ ನಮ್ಮ ಹೊಟ್ಟೆ ಯಾರು ತುಂಬಿಸುತ್ತಾರೆ? ನಾವು ದುಡಿಯಲೇಬೇಕು. ನಮ್ಮ ಕೆಲಸವನ್ನು ಮಾಡಲೇಬೇಕು. ನಮ್ಮ ಅಗತ್ಯಕ್ಕೆ ಬೇಕಾದ ವಸ್ತುಗಳನ್ನು ನಾವು ಎಲ್ಲಿಂದಾದರೂ ಕಂಡುಕೊಳ್ಳುತ್ತೇವೆ. ಯಾವುದು ಕಡಿಮೆ ಬೆಲೆಗೆ ಸಿಗುತ್ತೆ? ನಮ್ಮ ದುಡಿಮೆ ಇರುವುದು ಎಷ್ಟು?

ಅಗ್ಗದ ಪದಾರ್ಥಗಳಂತೆ ಕೊಂಡು ಬದುಕಿದರೆ ನಾಳೆ ಸ್ವಲ್ಪ ಸೇವಿಂಗ್ ಮಾಡಬಹುದು. ಉಪಯೋಗಿಸುವುದಕ್ಕೆ ವಸ್ತುಗಳು ಎಲ್ಲಿಂದ ಬಂದರೇನು? ಯಾರು ಮಾಡಿದರೇನು ?

ದುಡ್ಡು ಕೊಟ್ಟದ್ದಕ್ಕೆ ಅಗತ್ಯ ವಸ್ತು ಸಿಗುತ್ತೆ ಅನ್ನೋದಷ್ಟೇ ಮುಖ್ಯ. ಇದೊಂದು ಬಗೆಯ ಚಿಂತನಾ ಲಹರಿ. ಇನ್ನು ಕೆಲವರು ಇನ್ನೊಂದು ರೀತಿ ಈ ವಿಷಯದ ಬಗ್ಗೆ ಮಾತಾಡ್ತಾರೆ. ಚೀನಾವನ್ನು ಎದುರಿಸಿಕೊಂಡು ಬದುಕುವುದು ಸಾಧ್ಯವೇ? ಎಷ್ಟು ದೊಡ್ಡ ದೇಶ. ದೇಶದ ನಡುವೆ ಮಾತು ಬರುತ್ತೆ ಹೋಗುತ್ತೆ.  ಅವರ್ಯಾರೋ ಜಗಳವಾಡಿದರು ಅಂತ ನಮ್ಮ ವ್ಯವಹಾರವನ್ನು ನಾವು ಬಿಡಲಾದೀತೆ? ನಾವು ಅಂದುಕೊಂಡ ರೀತಿಯ ಸುಖದ ಬದುಕನ್ನು ಅವರ ವಸ್ತುಗಳಿಂದ ಪಡೆಯುವುದು ಸುಲಭ ಇದೆ ಅದಕ್ಕಾಗಿ ಬಳಸುತ್ತಿರುವೆವು. ಸಿಗುವ ವಸ್ತುಗಳನ್ನು ಬಿಟ್ಟು ನಾವ್ಯಾಕೆ ಕಷ್ಟ ಪಡಬೇಕು? ಹೊಸ ವಸ್ತುವನ್ನು ತಯಾರಿಸುವ ಕಷ್ಟಕ್ಕೆ ನಾವು ನಮ್ಮನ್ನು ಒಡ್ಡಿಕೊಳ್ಳಬೇಕು? ನಾವ್ಯಾಕೆ ಕೈ ಸುಟ್ಟುಕೊಳ್ಳಬೇಕು?

ಇನ್ನು ಕೆಲವು ದುಡುಕರ ಆರ್ಭಟಗಳು ಕಿವಿಗೆ ಅಪ್ಪಳಿಸುತ್ತಿದ್ದವು. ಗನ್ ಇರೋದು ಶತ್ರುಗಳ ಎದೆ ಸೀಳಲು. ಪೂಜೆ ಮಾಡಲಿಕ್ಕಲ್ಲ. ನುಗ್ಗಿ ಗುದ್ದೋಡಿ ಸೇಡು ತೀರಿಸುವುದೆ ಸರಿಯಾದ ದಾರಿ. ಏನು ಮಾಡುತ್ತಿದ್ದಾರೆ ಮಂತ್ರಿಗಳು ದಂಡಾಧಿಕಾರಿಗಳು. ಕತ್ತೆ ಕಾಯ್ತಾ ಇದ್ದಾರಾ? ನಾವು ನಮ್ಮ ಪುಂಡರ ಸಂಘದಿಂದ ತೀವ್ರ ಹೋರಾಟ ಮಾಡೋಣ. ನನ್ನ ಹತ್ರ ಇರೋ ತರಹದ ಬಾಯ್ಕಾಟ್ ಚೀನಾ ಬರಹದ ಟೀಶರ್ಟ್ ಹಾಕೊಂಡು ಹೋಗೋಣ. ಹೀಗೆ ಪುಂಖಾನುಪುಂಖವಾಗಿ ಮಾತುದುರಿಸುತ್ತಿದ್ದ ಧಡಿಯ ಸಿಆರ್’ಪಿ ಲೇಬಲ್’ನ ಆ ಟೀ ಶರ್ಟ್ ಹಾಕಿಕೊಂಡು ಆಫೀಸ್ ಕಡೆಗೆ ಸಾಗಿದ. (ಬಾಯ್ಕಾಟ್ ಚೀನಾ ಬರಹದ ಶರ್ಟ್ ಕೂಡ ಚೀನವೆ ಬಿಡುಗಡೆ ಮಾಡಿದೆ. ಅದೂ ಅವರಿಗೊಂದು ವ್ಯಾಪಾರ. ನಮ್ಮನ್ನು ಬಿಟ್ಟು ಬದುಕುವ ಶಕ್ತಿಯನ್ನು ಕಸಿದಿದ್ದೇವೆ. ನಾಚಿಕೆ ಇಲ್ಲದ ಸೋಂಬೇರಿಗಳು ಭಾರತೀಯರು ಹೀಗೆಂದು ಅಲ್ಲಿಯ ಪತ್ರಿಕೆಯೆ ಪ್ರಕಟಿಸಿತ್ತು.)

ಹೀಗೆ ನೂರಾರು ತರ್ಕಗಳ ನಡುವೆ ಚೀನಾದ ಕುಹಕ ನಮ್ಮ ಆಹ್ವಾನವನ್ನು ಮನ್ನಿಸಿ ನಮ್ಮನ್ನೆ ಗೆದ್ದು ಬಿಡುತ್ತದೆ. ಹಲವು ದೃಷ್ಟಿಕೋನದಿಂದ ಚೀನಾ ನಮ್ಮನ್ನು ಕಟ್ಟಿಹಾಕುವ ಪ್ರಯತ್ನವನ್ನು ಮಾಡುತ್ತಿದೆ.

ಜಾತಿ, ಭಾಷೆ, ಮತ, ಜನಾಂಗ, ಪಕ್ಷಗಳ ಒಡಕನ್ನು ಕೆಣಕುವ ವಿಚಾರವ್ಯಾಧಿಗಳನ್ನು ಸಾಕಿ ಸಲಹಿ ನಮ್ಮ ನಡುವೆ ಛೂಬಿಟ್ಟು ಗೆಲುವಿನ ಮುಸಿಮುಸಿ ನಗುವಿಗಾಗಿ ಹಾತೊರೆಯಿತ್ತಿದೆ.

ನಮ್ಮ ಅಗತ್ಯವಸ್ತುಗಳನ್ನೆಲ್ಲ ದೀರ್ಘ ಬಾಳದ, ಬಳಸಿದ ಬಳಿಕ ವಿಲೇವಾರಿಗೆ ತೊಡಕಾಗುವ, ಆದರೆ ವಿರೋಧಿಸಲಾಗದ ಸುಲಭ ಬೆಲೆಗೆ ಕೊಟ್ಟು ನಮ್ಮ ಆರ್ಥಿಕತೆಯ ಮೇಲೆ ಪ್ರಭುತ್ವ ಸಾಧಿಸುವ ಹಂಬಲ ಮೂಗಿನವರೆಗಿದೆ. ಚೀನಾ ಗಡಿಕ್ಯಾತೆಯನ್ನು ಮುಂದಿಟ್ಟುಕೊಂಡು ತನ್ನೊಳಗಿನ ಸರ್ವಾಧಿಕಾರದ ಬಿಕ್ಕಟ್ಟನ್ನು ಶಮನಗೊಳಿಸುವ ಇಕ್ಕಟ್ಟಿನಲ್ಲಿದೆ. ಜಪಾನ್ ತೈವಾನ್’ಗಳೂ ತಿರುಗಿಬಿದ್ದಿವೆ.

ಚೀನಾ ಅಸ್ತ್ರವಿಲ್ಲದೆ ಜಗತ್ತಿನ ಮೇಲೆ ಸಾರಿದ ಸಮರ ಬಹ್ವಂಶ ಫಲಿಸಿದೆ. ಭಾರತವೊಂದನ್ನು ಬಿಟ್ಟು. ಹೀಗೆ ಭಾರತ ಸಶಕ್ತಗೊಳ್ಳುವುದನ್ನು ಸಹಿಸಲಾಗದೆ ನೇಪಾಳ ಬಂಗಾಳ ಪಾಕಿಗಳನ್ನು ಪ್ರಚೋದಿಸುತ್ತಿದೆ.

ಇದು ಸರಿಯಾದ ಸಮಯ ನಮ್ಮತನವನು ಹೊರಗೆಡಹಲು. ಭಾರತ ಎಂದಿಗೂ ತಾನು ಸಹಾಯ ಕೊಡಬಲ್ಲ ರಾಷ್ಟ್ರ ಹೊರತು ಕೈನೀಡಿ ಪಡೆಯುವ ದುಸ್ಥಿತಿಯಲ್ಲಿಲ್ಲ. ಇದನ್ನು ಚೀನಾಕ್ಕೆ ಅರಿವಾಗಿಸಲು ಕಾಲ ಬಂದಿದೆ. ಐಷಾರಾಮದ ಬದುಕಿಗೆ ಬೇಕಿರುವ ಚೀನಾವಸ್ತುಗಳನ್ನು ಮೊದಲು ದೂರಮಾಡೋಣ. ತಂದಿಟ್ಟುಕೊಂಡಿರುವಂತದ್ದಾದರೆ ಹಾಳಾಗುವ ತನಕ ಬಳಸೋಣ. ಸದ್ಯ ತೀರಾ ಅಗತ್ಯದ ವಸ್ತುಗಳು ಬೇರೆ ಆಯ್ಕೆ ಇಲ್ಲದಾಗ ಸ್ವೀಕರಿಸುತ್ತಲೇ ಬದಲಿ ವ್ಯವಸ್ಥೆ ಅರಸುವಿಕೆ ನಡೆಸುತ್ತಿರೋಣ. ಆ ಬದಲಿ ವಸ್ತು ಭಾರತದ್ದಾಗಿರಲಿ. ಅಷ್ಟಾಗದಿದ್ದರೆ ಚೀನಾದ್ದಂತು ಆಗದಿರಲಿ.

ದೇಶದ ಪ್ರತಿಯೊಬ್ಬ ಪ್ರಜೆಯು ಈಗ ಸಾವಿನೊಡನೆ ಹೋರಾಡಬೇಕಿದೆ. ದುಡಿಯದ ಕೈಗೆ ಮೊಸರೆಂತು ಅಂಟೀತು. ಆರ್ಥಿಕತೆಯ ಬೆನ್ನೆಲುಬೆ ದುಡಿಮೆ. ನಮಗಾಗಿ, ನಮ್ಮವರಿಗಾಗಿ, ನಾಳೆಯ ತಲೆಯೆತ್ತಿ ನಿಲ್ಲಬೇಕಾದ ಭಾರತಕ್ಕಾಗಿ ದುಡಿಯುವ ಪ್ರತಿಯೊಬ್ಬ ಸೇವಕನೂ ಸೈನಿಕನೆ. ನಮ್ಮ ಪಾಲಿನ ಕರ್ಮ ನಡೆಸುವುದೇ ಜಯದ ಮರ್ಮ.

ಜೈಹಿಂದ್


Get In Touch With Us info@kalpa.news Whatsapp: 9481252093

Tags: ChinaCoronavirusIndiaJapanKannadaNewsWebsiteKrishnaraja KuthpadiLatestNewsKannadaSpecialArticleಕೃಷ್ಣರಾಜ ಕುತ್ಪಾಡಿಜಪಾನ್ಭಾರತ
Previous Post

ಕೆಂಪು ದೈತ್ಯ ಚೀನಾ ಒಡೆದು ಚೂರಾಗಿ ಹೋಗಲಿದೆಯೇ?

Next Post

ನೆಲ್ಲಿಕಾರು ಜೈನ ಬಸದಿಯ ವಿಶೇಷತೆ, ಐತಿಹ್ಯ ನಿಮಗೆ ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನೆಲ್ಲಿಕಾರು ಜೈನ ಬಸದಿಯ ವಿಶೇಷತೆ, ಐತಿಹ್ಯ ನಿಮಗೆ ಗೊತ್ತಾ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!