ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಈ ಬಾರಿಯ ಹಿಂದೂ ಮಹಾಸಭಾ ಗಣೇಶೋತ್ಸವದ ರಾಜಬೀದಿ ಉತ್ಸವವನ್ನು ರದ್ದುಪಡಿಸಲಾಗಿದೆ.
ಹಿಂದೂ ಸಂಘಟನೆ ಮಹಾಮಂಡಳಿ ಅಧ್ಯಕ್ಷ ಎಂ.ಕೆ. ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೋವಿಡ್19 ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಗಣಪತಿ ರಾಜಬೀದಿ ಉತ್ಸವವನ್ನು ರದ್ದುಪಡಿಸಲಾಗಿದೆ. ಚೌತಿಯಿಂದ ಗಣೇಶನಿಗೆ ಪ್ರತಿನಿತ್ಯ ಪೂಜೆ ನಡೆಯುತ್ತದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಅಲ್ಲದೇ, ಈ ಬಾರಿ ಚಂದಾ ಸಹ ಸಂಗ್ರಹ ಮಾಡುವುದಿಲ್ಲ ಎಂದು ತೀಮಾರ್ನಿಸಿದೆ.
ಸಭೆಯಲ್ಲಿ ಪದಾಧಿಕಾರಿಗಳಾದ ಶ್ರೀಧರ ರಾವ್ ಸರಾಫ್, ಎಸ್.ಎನ್. ಚನ್ನಬಸಪ್ಪ, ದತ್ತಾತ್ರೇಯ ರಾವ್, ನಿರ್ದೇಶಕರುಗಳಾದ ಎಸ್.ಎನ್. ನಂಜುಂಡಸ್ವಾಮಿ, ರಾಜಶೇಖರ್ ಅಲಸೆ, ಎ.ಎನ್. ಸತ್ಯನಾರಾಯಣ, ಶ್ರೀಪಾದರಾವ್, ನಿರಂಜನ, ಚೇತನ್, ಲಕ್ಷ್ಮೀನಾರಾಯಣ, ಟಿ.ಆರ್. ಶ್ರೀಧರ, ಎಂ.ಆರ್. ಪ್ರಕಾಶ, ಹರಿಗೆ ಗೋಪಾಲಸ್ವಾಮಿ, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.
Get In Touch With Us info@kalpa.news Whatsapp: 9481252093
Discussion about this post