ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಐಎಸ್’ಎಲ್ ನಿವೃತ್ತ ನೌಕರರ ಮನೆಯ ಬಾಡಿಗೆಯನ್ನು ಇಳಿಕೆ ಮಾಡುವ ಕುರಿತಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಯತ್ನಗಳನ್ನು ಮಾಡಿದ್ದು, ಇದರ ಭಾಗವಾಗಿ ಇಂದು ವಿಐಎಸ್’ಎಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆ.ಎಲ್. ರಾವ್ ಅವರನ್ನು ಭೇಟಿ ಮಾಡಿ ಹೆಚ್ಚಿಸಿರುವ ಮನೆ ಬಾಡಿಗೆ ಇಳಿಸುವ ಕುರಿತು ಚರ್ಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿದ ಸಂಸದರು, ವಿಐಎಸ್’ಎಲ್’ಗೆ ತತಕ್ಷಣಕ್ಕೆ ಅಗತ್ಯವಿರುವ ಸುಮಾರು 20 ಕೋಟಿ ಬಂಡವಾಳದ ಬಗ್ಗೆ ಈಗಾಗಲೇ ಸೈಲ್ ನ ಚೇರ್ಮನ್ ಬಳಿ ಮಾತನಾಡಿರುವುದು, ಎಂಪಿಎಂನ ಪುನರುಜ್ಜೀವನದ ಬಗ್ಗೆ ಖಾಸಗಿ ಕಂಪನಿಯವರ ಸಹಭಾಗಿತ್ವದಲ್ಲಿ ಪುನರಾರಂಭ ಮಾಡುವ ಚರ್ಚೆ ಪ್ರಾರಂಭಿಸಿರುವುದು, ಸುಮಾರು 3500 ಕಬ್ಬು ಬೆಳೆಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ 2010 -11 ರ ಪ್ರತಿ ಟನ್’ಗೆ ಹೆಚ್ಚುವರಿ ನೂರು ರೂಪಾಯಿಗಳನ್ನು ಕೊಡಿಸುವ ಪ್ರಸ್ತಾವನೆ ಈಗಾಗಲೇ ಅಂತಿಮಗೊಂಡಿರುವ ವಿಷಯ, ಎಂಪಿಎಂ ನ ಕಾರ್ಮಿಕರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇನ್ನು ಕೆಲವೇ ದಿನಗಳಲ್ಲಿ ಪರಿಹಾರ ದೊರಕಿಸಿಕೊಡುವ ಪ್ರಯತ್ನಗಳ ವಿಷಯವನ್ನು ಗಮನಕ್ಕೆ ತಂದರು.
ಕಾರ್ಮಿಕ ಮುಖಂಡರುಗಳು ಈ ಕೊರೋನಾ ಸಂಕಷ್ಟ ಸಮಯದಲ್ಲಿ ಭದ್ರಾವತಿಗೆ ಆಗಮಿಸಿ ನಿವೃತ್ತ ಕಾರ್ಮಿಕರ ಅಳಲನ್ನು ಸರಿ ಪಡಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸಿದರು.
ಮುಖ್ಯ ವ್ಯವಸ್ಥಾಪಕರಾದ ವಿಶ್ವನಾಥ್, ನಿವೃತ್ತ ಕಾರ್ಮಿಕ ಮುಖಂಡರುಗಳಾದ ಹನುಮಂತರಾವ್ ರಾಮಲಿಂಗಯ್ಯ, ನರಸಿಂಹಮೂರ್ತಿ, ಎಸ್.ಎನ್. ಬಾಲಕೃಷ್ಣ, ಚಂದ್ರಹಾಸ್, ಜಗದೀಶ್, ಅಮೃತ್ ಬಿಜೆಪಿ ಮುಖಂಡರುಗಳಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮ ಪ್ರಸಾದ್, ಮಂಡಲ ಅಧ್ಯಕ್ಷರು ಪ್ರಭಾಕರ್, ಕದಿರೇಶ್, ಮಂಗೋಟೆ ರುದ್ರೇಶ್ ಮಂಜುನಾಥ್ ಕದಿರೇಶ್ ಹಾಜರಿದ್ದರು.
Get In Touch With Us info@kalpa.news Whatsapp: 9481252093
Discussion about this post