ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಅಪ್ಪಾಜಿ ಗೌಡರ ನಿವಾಸಕ್ಕೆ ಭೇಟಿ ನೀಡಿದ ಬಜರಂಗದಳದ ಕಾರ್ಯಕರ್ತರು, ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಂತಾಪ ಸೂಚಿಸಿದರು.
ಬಜರಂಗದಳದ ಜಿಲ್ಲಾ ಮತ್ತು ತಾಲೂಕು ಸಂಚಾಲಕರು ಹಾಗೂ ನಗರ ಮತ್ತು ಗ್ರಾಮಾಂತರ ಸಂಚಾಲಕರ ನೇತೃತ್ವದಲ್ಲಿ ಕಾರ್ಯಕರ್ತರು ಮಾಜಿ ಶಾಸಕರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.
ಜಿಲ್ಲಾ ಸಂಚಾಲಕ ಸುನಿಲ್ ಕುಮಾರ್ ಮಾತನಾಡಿ, ಎಂ.ಜೆ. ಅಪ್ಪಾಜಿ ಗೌಡರು ಹುಟ್ಟು ಹೋರಾಟಗಾರರು. ಸಾಮಾನ್ಯ ಜನರೊಡನೆ ಬೆರತು ಜನನಾಯಕರಾಗಿ ಹೊರ ಬಂದವರು. ಭದ್ರಾವತಿ ಭವಿಷ್ಯದ ಬೆಳವಣಿಗೆಯ ಬಗ್ಗೆ ಭಗೀರಥನಂತೆ ಕನಸು ಕಂಡಿದ್ದಂತಹ ಮಹಾ ನಾಯಕನನ್ನು ನಾವು ಕಳೆದುಕೊಂಡಿದ್ದು ಅತ್ಯಂತ ದುಃಖಕರ ಸಂಗತಿ. ಅವರ ಕುಟುಂಬ ವರ್ಗದವರಿಗೆ ದೇವರ ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ನಿಮ್ಮ ಜೊತೆ ನಾವುಗಳು ಇರುತ್ತೇವೆ ಎಂದರು.
ನಿಮ್ಮ ರಾಶಿಗೆ ಅನುಗುಣವಾಗಿ ಈ ವಾರದ ಭವಿಷ್ಯವಾಣಿ ನೋಡಿ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ...
ಜ್ಯೋತಿಷ್ಯ ಹಾಗೂ ಆಧ್ಯಾತ್ಮ ಕುರಿತಾಗಿನ ಎಲ್ಲ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಬಜರಂಗದಳದ ತಾಲೂಕು ಸಂಚಾಲಕರಾದ ವಡಿವೇಲು ಮಾತನಾಡಿ, ಪ್ರಕೃತಿಯಲ್ಲಿ ಹುಟ್ಟು ಸಾವು ಸಹಜ. ಆದರೆ ನಮ್ಮ ನಾಯಕರಾದ ಎಂ.ಜೆ ಅಪ್ಪಾಜಿ ಗೌಡರ ಅಕಾಲಿಕ ಮರಣ ನಮ್ಮ ಭದ್ರಾವತಿಯ ಜನತೆಗೆ ತುಂಬಲಾರದ ನಷ್ಟವಾಗಿದೆ. ಆದರೂ ಸಹ ಭದ್ರಾವತಿಯ ಜನರ ಮನಸ್ಸಿನಲ್ಲಿ ಹಚ್ಚ ಹಸಿರಿನಂತೆ ನಮ್ಮ ಅಪ್ಪಾಜಿ ಗೌಡರ ಹೆಸರು ಅಜರಾಮರ ವಾಗಿರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಅಪ್ಪಾಜಿ ಗೌಡರ ಜನಸೇವೆ ಸಂಘಟನೆ ಮತ್ತು ಅವರ ವಿಚಾರಧಾರೆಗಳನ್ನು ಕುಟುಂಬಸ್ಥರು ಸಹ ಮುಂದುವರೆಸಿಕೊಂಡ ಹೋಗಬೇಕು. ನಿಮ್ಮ ಬೆಂಬಲಕ್ಕೆ ಭದ್ರಾವತಿಯ ಜನತೆ ಪೂರಕವಾಗಿರುತ್ತಾರೆ ಎಂದು ಧೈರ್ಯ ತುಂಬಿದರು.
ಒಂದು ನಿಮಿಷದ ಮೌನಾಚರಣೆ ಮಾಡಿ ನಂತರ ಶಾಂತಿ ಮಂತ್ರದೊಂದಿಗೆ ಸಂತಾಪ ಸೂಚಿಸಲಾಯಿತು.
Get In Touch With Us info@kalpa.news Whatsapp: 9481252093
Discussion about this post