ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಕೆಕೆಕೆ ಸಿನಿಮಾ ಚಿತ್ರೀಕರಣಕ್ಕೆ ಶಾಸಕ ಟಿ. ರಘುಮೂರ್ತಿ ಚಾಲನೆ ನೀಡಿದರು.
ಬಳ್ಳಾರಿ ರಸ್ತೆಯಲ್ಲಿರುವ ಶ್ರೀವಿರಭದ್ರಸ್ವಾಮಿ ದೇವಸ್ಥಾನದಲ್ಲಿ ಸಿನಿಮಾ ತಂಡ ವಿಶೇಷ ಪೂಜೆ ಸಲ್ಲಿಸಿತು. ನಂತರ ಶಾಸಕ ರಘುಮೂರ್ತಿಯವರು ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ವಂಡರ್ ಬ್ಲೂ ಫಿಲ್ಮ ಫ್ಯಾಕ್ಟರಿ ವತಿಯಿಂದ ನಿರ್ಮಾಣವಾಗುತ್ತಿರುವ ಕೆ.ಕೆ.ಕೆ(ಕಿಂಗ್ ಮೇಕರ್ ಕೈಂಡ್) ಎನ್ನುವ ಕನ್ನಡ ಚಲನಚಿತ್ರ ನಗರದ ಮೈರಾಡ್ ಕಾಲೋನಿ, ಅಭಿಶೇಕ್ ನಗರ, ಗಾಂಧಿನಗರ ಹಾಗೂ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ 30 ದಿನಗಳ ಕಾಲ ಚಿತ್ರಕರಣ ನಡೆಸಲು ಸಿನಿಮಾ ತಂಡ ಸಜ್ಜಾಗಿದ್ದು ಬುಡಕಟ್ಟು ಆಚರಣೆಗಳ ಮೂಲಕ ತನ್ನದೇ ಆದ ವಿಶಿಷ್ಠ ನೆಲೆಯನ್ನು ಹೊಂದಿರುವ ಭೋಗೊಳಿಕ, ಸಾಂಸ್ಕೃತಿಕತೆಯನ್ನು ಸಾರುವ ಚಳ್ಳಕೆರೆಯ ಸುತ್ತಮುತ್ತಲಿನ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ.
ಕೆಪಿಪಿಸಿ ವಕ್ತಾರ ಹಾಗೂ ಮಾಜಿ ಸಂಸದ ಬಿ.ಎಂ. ಚಂದ್ರಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಜ್ಯೋತಿ ಬೆಳಗಿಸುವುದರ ಮೂಲಕ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.
ಈ ಸಮಯದಲ್ಲಿ ನಗರಸಭೆ ಸದಸ್ಯರಾದ ರಮೇಶಗೌಡ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಹಿರಿಯೂರಿನ ನಗರಸಭೆ ಸದಸ್ಯ ಗುಂದೇಶ, ಮಂಜುನಾಥ, ನಿವೃತ್ತ ಐಎಎಸ್ ಅಧಿಕಾರಿ ಬಲದೇವ ಕೃಷ್ಣ, ನಿರ್ಮಾಪಕ ಪಾಲವ್ವನಹಳ್ಳಿ ಕರಿಯಪ್ಪ ನಿರ್ದೇಶಕ ಅರುಣ ಕೃಷ್ಣ, ದೇವಪುತ್ರ, ಸಿನಿಮಾದ ಕಲಾತಂಡ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post