No Result
View All Result
Elderly Woman Found Dead
English Articles

Elderly Woman Found Dead in Decomposed State in Shivamogga

by ಕಲ್ಪ ನ್ಯೂಸ್
June 13, 2026
0

Kalpa Media House  |  Shivamogga  | An elderly woman and her pet dog were found dead in a decomposed state...

Read moreDetails
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
  • Advertise With Us
  • Grievances
  • About Us
  • Contact Us
Saturday, June 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಪುನೀತ್ ಜಿ. ಕೂಡ್ಲೂರು

ವಿದ್ಯಾಗಮಕ್ಕೆ ಕಲ್ಲು ಹಾಕಿ ಸಾಧಿಸಿದ್ದಾದರು ಏನು?

ಮಕ್ಕಳ ಭವಿಷ್ಯದ ದೃಷ್ಠಿಯಿಂದ ಸಹೃದಯಿ ಶಿಕ್ಷಣ ಸಚಿವರಿಗೆ ಕೆಲವು ಸಲಹೆಗಳು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 9, 2020
in ಪುನೀತ್ ಜಿ. ಕೂಡ್ಲೂರು
0
ವಿದ್ಯಾಗಮಕ್ಕೆ ಕಲ್ಲು ಹಾಕಿ ಸಾಧಿಸಿದ್ದಾದರು ಏನು?

Internet file image

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮಾರ್ಚ್ 2020 ರಿಂದ ಭಾರತಾದ್ಯಂತ ಕೊರೋನಾದ ಆತಂಕ ಹಾವಳಿ ಮರಣ ಮೃದಂಗ ರಣಕೇಕೆ ಎಲ್ಲಾ ವರ್ಗದ ವೃತ್ತಿ ಬದುಕಿನ ಜನ ಅನುಭವಿಸಿದ ಕಷ್ಟ ಹೇಳತೀರದು, ಸತತ ಆರು ತಿಂಗಳ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ನಾವು ಖಂಡಿತ ವಿಫಲರಾದೆವು.

ಶಿಕ್ಷಣ ಅತ್ಯಂತ ಪವಿತ್ರವಾದ ಮತ್ತು ಅಮೂಲ್ಯವಾದ ಒಂದು ಶಕ್ತಿ, ಮಕ್ಕಳಿಗೆ ಅದರ ಅವಶ್ಯಕತೆ ಮತ್ತು ಅನಿವಾರ್ಯತೆ ಬಹಳವಿದೆ. ಕೊರೋನಾ ಆರಂಭದಿಂದ ಈ ವಿಚಾರದಲ್ಲಿ ಆದ ಗೊಂದಲಗಳು ಚರ್ಚೆಗಳು ಆರೋಗ್ಯ ಇಲಾಖೆಯಲ್ಲೂ ಆಗಲಿಲ್ಲವೇನೋ? ಶಾಲೆಗೆ ಪ್ರವೇಶ ಪಡೆಯುವುದರಿಂದ ಹಿಡಿದು ಪರೀಕ್ಷೆ ಬರೆಯುವ ತನಕ ಎಲ್ಲವೂ ಗೋಜಲೇ, ಎಲ್ಲದಕ್ಕೂ ಮಾನ್ಯ ಶಿಕ್ಷಣ ಸಚಿವರೇ ಸ್ಪಷ್ಟನೆ ಕೊಡಬೇಕು, ಅಧಿಕಾರಿಗಳು ನಾಪತ್ತೆಯಾಗಿದ್ದರೋ ಅಥವಾ ಅವರಿಗೆ ಅಧಿಕಾರವಿರಲಿಲ್ಲವೋ ಎಂಬುದು ಯಕ್ಷಪ್ರಶ್ನೆ.

ಎಸ್’ಎಸ್’ಎಲ್’ಸಿ ಪರೀಕ್ಷೆ ವಿಚಾರದಲ್ಲಿ ಮಾತ್ರ ಸಚಿವರ ಕಾಳಜಿ ಮತ್ತು ಜವಾಬ್ದಾರಿ ಮೆಚ್ಚುವಂತದ್ದು, ಕೊರೋನಾ ಉತ್ತುಂಗದಲ್ಲಿದ್ದಾಗ ನಿರಾತಂಕವಾಗಿ ಪರೀಕ್ಷೆ ನಡೆಸಿ ಮಾದರಿಯಾದರು. ಆದರೆ ಶಾಲೆ ತೆರೆಯುವ ವಿಚಾರದಲ್ಲಿ ಅಥವಾ ವಿದ್ಯಾಗಮದ ತಾತ್ಕಾಲಿಕ ಸ್ಥಗಿತದ ವಿಚಾರದಲ್ಲಿ ಇಲಾಖೆಯೇ ಖುದ್ದಾಗಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಸಚಿವರ ತಾಳ್ಮೆ ಮತ್ತು ಜಾಣ್ಮೆಯನ್ನು ಪ್ರತಿಹಂತದಲ್ಲೂ ಪರೀಕ್ಷಿಸುವಂತಿದೆ ಈ ವಿಚಾರ.

ಖಾಸಗಿ ಶಾಲೆಗಳು ಮಕ್ಕಳನ್ನು ಆನ್-ಲೈನ್ ತರಗತಿ ಅಂತ ಕೂರಿಸಿ ಒಂದಷ್ಟು ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿ ಆರಂಭಿಸಿದವು. ಪೋಷಕರೂ ಸಹ ವಿದ್ಯೆಯ ಮಹತ್ವ ಅರಿತು ಕೊರೋನಾ ಸಂಕಷ್ಟದಲ್ಲೂ ಸಾಲ ಸೋಲ ಮಾಡಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಟ್ಯಾಬ್’ಗಳನ್ನು ಮತ್ತು ಅದಕ್ಕೆ ಪೂರಕವಾಗಿ ಬೇಕಾದಂತ ಇನಂಟರ್‌ನೆಟ್ ಒದಗಿಸಿದರು. ಖಾಸಗಿ ಶಾಲೆಗಳೆಲ್ಲವೂ ಅಲ್ಲದೇ ಹೋದರು ಸರಿ ಸುಮಾರು ಶೇ.60 ರಷ್ಟು ಶಾಲೆಗಳು ಅತಿ ವೇಗವಾಗಿ ನೂತನ ಶಿಕ್ಷಣಪದ್ದತಿಗಳನ್ನು ಅಳವಡಿಸಿಕೊಂಡರು.

ಮತ್ತೊಂದಷ್ಟು ಶಾಲೆಗಳು ಕೊರೋನಾ ಅದು ಇದು ಅಂತ ಕಾರಣ ಹೇಳುತ್ತಾ ಶಿಕ್ಷಕರಿಗೆ ಸರಿಯಾಗಿ ಸಂಬಳವನ್ನು ನೀಡದೆ ಅವರ ಬದುಕನ್ನು ಆತಂಕಕ್ಕೆ ದೂಡಿತು. ಸರ್ಕಾರ ಶಿಕ್ಷಕರಿಗೆ ಮಾನವೀಯತೆಯ ಪಾಠಮಾಡಿತು ಸಮಸ್ಯೆ ಬಗೆಹರಿಯಲಿಲ್ಲ. ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆನೋ ಪಾಠ ಪ್ರವಚನ ನಡೆಯಿತು. ಆದರೆ ಸರ್ಕಾರಿ ಶಾಲೆ ಮಕ್ಕಳು, ಗ್ರಾಮೀಣ ಮಕ್ಕಳ ಕಥೆಯೇನು? ಆನ್‌ಲೈನ್ ತರಗತಿಗಳಿಗೆ ಹಳ್ಳಿಮಕ್ಕಳಿಗೆ ಮೊಬೈಲ್ ಸಿಕ್ಕರೂ ನೆಟ್‌ವರ್ಕ್ ಸಿಗಬೇಕಲ್ಲಾ? ಅಪ್ಪಿತಪ್ಪಿ ಮನೆಯೊಳಗೆ ನೆಟ್‌ವರ್ಕ್ ಸಿಕ್ಕರೂ ವೇಗದ ಇಂಟರ್ ನೆಟ್ ಸಿಗುವುದು ಕನಸಿನ ಮಾತು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಆನ್‌ಲೈನ್ ತರಗತಿಯಲ್ಲಿ ಕಲಿಯುವುದಾದರೂ ಹೇಗೆ? ಒಮ್ಮೆ ಇವೆಲ್ಲಾ ಒದಗಿದರೂ ಮಕ್ಕಳು ಮೇಷ್ಟ್ರ ಬೆತ್ತದ ಏಟಿನ ಭಯವಿಲ್ಲದೆ ಏಕಾಗ್ರತೆಯಿಂದ ಪಾಠ ಕಲಿಯುವುದು ಒಂದು ಸವಾಲಿನ ಪ್ರಶ್ನೆ. ಇದನ್ನು ಅರಿತ ಸರ್ಕಾರವು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾಗಮವೆಂಬ ನೂತನ ಪದ್ದತಿಯನ್ನು ಜಾರಿಗೊಳಿಸಿತು. ಆದರೆ ಅದರ ಅನುಷ್ಠಾನವನ್ನು ಸ್ವಲ್ಪ ಜಾಗರೂಕತೆಯಿಂದ ಮಾಡಬಹುದಿತ್ತು. ದೇವಸ್ಥಾನ, ಒಠಾರ, ಮೈದಾನಗಳಲ್ಲಿ ಪಾಠ ಮಾಡುವ ಬದಲು ಮಕ್ಕಳನ್ನು ಶಾಲೆಯ ಆವರಣದಲ್ಲೇ ಕೂರಿಸಿ ಮಾಡಬಹುದಿತ್ತು.

ಉಪಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿಗಳೀರ್ವರು ಸರ್ಕಾರವನ್ನು ದೂಷಿಸಲು ಆಯ್ಕೆ ಮಾಡಿಕೊಂಡಿದ್ದೇ ಪಾಪ ಬಡಮಕ್ಕಳ ವಿದ್ಯೆಗೆ ಆಸರೆಯಾಗಿದ್ದ ವಿದ್ಯಾಗಮವನ್ನು, ಮಾನ್ಯ ಸಚಿವರ ಸರ್ವಶ್ರಮವನ್ನು ನೀರುಪಾಲು ಮಾಡಲು ಸಂಚು ಹಾಕಿದರು. ಚುನಾವಣೆ ಸಂದರ್ಭದಲ್ಲಿ ಯಾರೋ ಒಂದಿಬ್ಬರು ಕೊರೋನಾಕ್ಕೆ ಬಲಿಯಾದ ಕಾರಣ ಹಿಡಿದು ಜರಿಯಬಹುದೆಂದು ಭಾವಿಸಿ ಸರ್ಕಾರವೂ ವಿದ್ಯಾಗಮವನ್ನು ಸ್ಥಗಿತಗೊಳಿಸಿತು. ತಿಂಗಳುಗಳ ಗಟ್ಟಲೆ ಮಕ್ಕಳು ಶಿಕ್ಷಣದಿಂದ ವಿಮುಖರಾದರೆ ಅಂತಹ ಮಕ್ಕಳನ್ನು ಮತ್ತೆ ಶಿಕ್ಷಣದ ಕಡೆಗೆ ತರುವುದು ಬಹಳ ಕಷ್ಟಕರವಾದ ಕೆಲಸ. ಕುಟುಂಬದಲ್ಲಿ ಬಡತನವಿದ್ದರೆ ಮಕ್ಕಳನ್ನು ಪೋಷಕರೇ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಪ್ರೌಢಶಿಕ್ಷಣದ ಹಂತದಲ್ಲಿನ ವಿದ್ಯಾರ್ಥಿ/ನಿ ಒಮ್ಮೆ ದುಡಿಮೆಗೆ ಹೋಗಿ ನಾಲ್ಕು ಕಾಸು ಸಂಪಾದಿಸದರೆ ಮುಂದಿನ ಅವರ ಗುರಿ ಸಂಪಾದನೆಯೇ ಆಗಿರುತ್ತದೆಯೇ ಹೊರೆತು ಶಿಕ್ಷಣವಲ್ಲ ಎಂಬುದು ಸತ್ಯ.

ಶಾಲೆಗಳಿಲ್ಲ ಎಂಬ ಕುಂಟುನೆಪವೊಡ್ಡಿ ಕೆಲವರು ಬಾಲ್ಯವಿವಾಹಕ್ಕೆ ಮುಂದಾಗುತ್ತಾರೆ. ಶಾಲೆ ಇಲ್ಲದಿದ್ದರೆ ಬಾಲಕಾರ್ಮಿಕರ ವರ್ಗವೇ ಮುಂದಿನ ದಿನಗಳಲ್ಲಿ ದೊಡ್ದದಾಗಿರುತ್ತದೆ. ಮಕ್ಕಳು ಮನೆಯಲ್ಲಿ ಸುರಕ್ಷಿತವಾಗಿರಲಿ ಒಂದು ವರ್ಷವೆಂದು ನಾವು ಅವರನ್ನು ಶಾಲೆಗೆ ಕಳುಹಿಸಲು ಅಥವಾ ಶಿಕ್ಷಣ ಕೊಡಿಸಲು ಹಿಂಜರಿದರೆ ಅದರ ಅಡ್ಡಪರಿಣಾಮವನ್ನು ಸರಿದಾರಿಗೆ ತರಲು ಹಲವು ವರ್ಷಗಳೇ ಬೇಕಾಗುತ್ತದೆ ಎಂಬುದು ಮಾತ್ರ ಸತ್ಯ.

ಸರ್ಕಾರವು ಶಾಲೆಗಳನ್ನು ತೆರೆಯುವ ಬಗ್ಗೆ ಯಾವುದೇ ದೃಢ ನಿರ್ಧಾರಕ್ಕೆ ಬಾರದಿರುವುದು ವಿಷಾದನೀಯ. ಅಂದರೆ ಶಾಲೆಯನ್ನು ನಾಳೆಯೇ ತೆರೆಯಬೇಕೆಂದಲ್ಲ, ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಬೇಕು. ಅದೆಷ್ಟು ಬಾರಿ ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು? ಈ ಶೈಕ್ಷಣಿಕ ವರ್ಷ ಶಾಲೆಗಳು ತೆರೆಯುವುದಿಲ್ಲ, ವಿವಿಧ ಮಾಧ್ಯಮದ ಮೂಲಕ ಶಿಕ್ಷಣ ನಡೆಯುತ್ತದೆ ಹಾಗೂ ಎಂದಿನಂತೆ ಪರೀಕ್ಷೆಗಳು ನಡೆಯುತ್ತದೆ, ಇಲ್ಲಾ ಜನವರಿಯ ತನಕ ಶಾಲೆಗಳಿಗೆ ಪ್ರವೇಶವಿಲ್ಲ, ವ್ಯಾಕ್ಸಿನ್ ಬಂದನಂತರ ಮುಂದಿನ ನಿರ್ಧಾರ ತಿಳಿಸಲಾಗುವುದು. ಈ ವರ್ಷ ಪರೀಕ್ಷಾ ರಹಿತ ವರ್ಷ ಎಲ್ಲರನ್ನು ಉತ್ತೀರ್ಣ ಮಾಡಲಾಗುವುದು ಅಥವಾ ಶಾಲೆಯನ್ನು ಇಂತಹ ತಾರೀಖಿನಿಂದ ತೆರೆಯುತ್ತೇವೆ. ನಿಮ್ಮ ಜಾಗರೂಕತೆಯಲ್ಲಿ ಶಾಲೆಗೆ ಹಾಜರಾಗುವುದು, ಈ ವರ್ಷದ ಪಠ್ಯವನ್ನು ಸ್ವಲ್ಪ ಕಡಿತಗೊಳಿಸಲಾಗುವುದು, ಇಷ್ಟು ಮಾತ್ರ ಇಲಾಖೆಗೆ ಇರುವ ಆಯ್ಕೆಗಳು ಇದನ್ನು ಹೇಳುವುದು ಬಿಟ್ಟು ಹಗ್ಗ ಜಗ್ಗಿದಂತೆ ಮಾಧ್ಯಮದ ವರದಿ ತಪ್ಪು, ಇಲಾಖೆಯ ನಿರ್ಧಾರವಲ್ಲ, ಸುಳ್ಳು ಸುದ್ದಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಬದಲು ನಿರ್ಧಾರ ಪ್ರಕಟಿಸಿದರೆ ಪೋಷಕರಿಗೂ ನೆಮ್ಮದಿ ಮಾಧ್ಯಮದವರಿಗೂ ಬೇರೆ ಸುದ್ದಿ ಬಗ್ಗೆ ಗಮನಕೊಡಲು ಅನುವು ಮಾಡಿಕೊಂಟ್ಟಂತೆ ಆಗುತ್ತದೆ ಅನ್ನಿಸುತ್ತದೆ.

ರಾಜಕೀಯ ಲೆಕ್ಕಚಾರದಲ್ಲಿ ವಿದ್ಯಾಗಮ ನಿಲ್ಲಿಸಿದ್ದರೆ ಅದು ಅಕ್ಷಮ್ಯ ಅಪರಾಧ. ಸಹೃದಯಿಯಾದ ಶಿಕ್ಷಣ ಸಚಿವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆ ತೆರೆಯುವ ತನಕ ವಿದ್ಯಾಗಮ ಪದ್ದತಿ, ದೂರದರ್ಶನ ಹಾಗೂ ಆಕಾಶವಾಣಿಗಳನ್ನು ಸಾಮಾಜಿಕ ಜಾಲತಾಣಗಳೊಂದಿಗೆ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು. ಸೋಮಾರಿ ಶಿಕ್ಷಕರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೆ ಆಯಾ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರನ್ನು ಬಳಸಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಬಹುದು. ಪ್ರತಿ ತರಗತಿಯ ಪಾಠಗಳನ್ನು ಉತ್ತಮ ಶಿಕ್ಷಕರಿಂದ ಪಾಠ ಮಾಡಿಸಿ ಅದನ್ನು ರೆಕಾರ್ಡ್ ಮಾಡಿ ಶಿಕ್ಷಣ ಇಲಾಖೆಯ ವೆಬ್‌ಸೈಟ್’ನಲ್ಲಿ ಹಾಕಬಹುದು. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಎಲ್ಲಾ ಶಿಕ್ಷಕರಿಗೂ ಅನುಕೂಲವಾಗುತ್ತದೆ. ವಿದ್ಯಾವಂತ ಯುವಕರು ಆ ವಿಡೀಯೋಗಳನ್ನು ನೋಡಿ ತಮ್ಮ ಗ್ರಾಮದ ಮಕ್ಕಳಿಗೆ ಪಾಠ ಮಾಡಬಹುದು, ಆ ಯುವಕರಿಗೆ ಮಾಸಿಕ ಇಷ್ಟು ಅಂತ ಗೌರವ ಧನ ನೀಡಿ, ಇದಕ್ಕೆ ಸ್ವಯಂ ಸೇವಕರಾಗಿ ನೊಂದಾಯಿಸಿಕೊಳ್ಳಲು ಒಂದು ಅಂತರ್ಜಾಲವನ್ನು ತೆರೆಯಿರಿ, ಆ ಯುವಕರಿಗೂ ಸಮಯ ಸಾಗುತ್ತದೆ ಮತ್ತು ಈ ಕಷ್ಟದ ಸಂದರ್ಭದಲ್ಲಿ ಒಂದಷ್ಟು ಹಣವೂ ಸಿಗುತ್ತದೆ, ಮಕ್ಕಳಿಗೆ ಶಿಕ್ಷಣವೂ ಸಿಗುತ್ತದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Department of HealthKannada News WebsiteLatest News KannadaOnline ClassPrivate SchoolPuneeth G Koodluruvidyagama schemeಆನ್ ಲೈನ್ ತರಗತಿಆರೋಗ್ಯ ಇಲಾಖೆಕೊರೋನಾ ಲಾಕ್’ಡೌನ್ಖಾಸಗಿ ಶಾಲೆಪುನೀತ್ ಜಿ ಕೂಡ್ಲೂರುವಿದ್ಯಾಗಮಶಾಲೆ
Share207Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

150 ಬಡ ಕುಟುಂಬಗಳಿಗೆ ನವ್ಯ ಫೌಂಡೇಶನ್ ವತಿಯಿಂದ ದೀಪಾವಳಿಗಾಗಿ ಫುಡ್ ಕಿಟ್

Next Post

ಸಿಎಂ ತವರು ಶಿಕಾರಿಪುರ ಪುರಸಭೆ ಬಿಜೆಪಿ ಮಡಿಲಿಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಿಎಂ ತವರು ಶಿಕಾರಿಪುರ ಪುರಸಭೆ ಬಿಜೆಪಿ ಮಡಿಲಿಗೆ

ಸಿಎಂ ತವರು ಶಿಕಾರಿಪುರ ಪುರಸಭೆ ಬಿಜೆಪಿ ಮಡಿಲಿಗೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
injured tiger roams in Chikkamagaluru hills

ಚಿಕ್ಕಮಗಳೂರು ತಪ್ಪಲಿನಲ್ಲಿ ಗಾಯಗೊಂಡ ಹುಲಿ ಅಲೆದಾಟ, ಪ್ರವಾಸಿಗರಿಗೆ ಎಚ್ಚರಿಕೆ

June 13, 2026
ಅರಣ್ಯ ಸಂರಕ್ಷಣೆಗೆ ಕಾನೂನುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು: ಎ.ಎಂ. ಅಣ್ಣಯ್ಯ ಸಲಹೆ

ಅರಣ್ಯ ಸಂರಕ್ಷಣೆಗೆ ಕಾನೂನುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು: ಎ.ಎಂ. ಅಣ್ಣಯ್ಯ ಸಲಹೆ

June 13, 2026
33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ!, ಏನಿದು ಕೇಸ್?

ರೌಡಿಶೀಟರ್ ನರಸಿಂಹನ ಹತ್ಯೆ: ಐವರ ಬಂಧನ

June 13, 2026
Ashwath Narayan Shetty

ಸಮಾಜಮುಖಿ ಚಿಂತನೆಯ ಸಜ್ಜನ – ಅಶ್ವತ್ಥಣ್ಣ

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL