ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮೈಸೂರಿನ ಪ್ರೊ. ಆರ್. ಎನ್. ಶ್ರೀಲತಾ ಅವರ ಮಾರ್ಗದರ್ಶನದಲ್ಲಿ ಎಸ್. ಆರ್. ನಾಗರಾಜ್ ಮಂಡಿಸಿದ ಮಹಾರಾಜ ಸ್ವಾತಿ ತಿರುನಾಳ್ ರಾಮವರ್ಮ ಮತ್ತು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ರವರ ದೇವಿ ಮತ್ತು ಶಿವಪರ ಕೃತಿಗಳ ಸಂಗೀತ ಸಾಹಿತ್ಯ ತುಲನಾತ್ಮಕ ಅಧ್ಯಯನ ಎಂಬ ಸಂಶೋಧನಾತ್ಮಕ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್ಡಿ ಪದವಿ ಲಭಿಸಿದೆ.
ಇವರು ಶಿವಮೊಗ್ಗ ಜಿಲ್ಲೆಯ ಸಂಗೀತ ಕ್ಷೇತ್ರದಲ್ಲೇ ಪಿಹೆಚ್ಡಿಗಳಿಸಿದ ಕಲಾವಿದರಲ್ಲಿ ಮೊದಲಿಗರಾಗಿದ್ದು, ಚಾರ್ಟ್ಡ್ ಅಕೌಂಟೆಂಟ್ ದಿ. ಎಸ್.ಪಿ. ರಾಮಸ್ವಾಮಿ ಮತ್ತು ದಿ. ಮಹಾಲಕ್ಷ್ಮಿಯವರ ಪುತ್ರರಾಗಿದ್ದಾರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















