No Result
View All Result
Food & Hospitality Sector a Global Employment Hub: Celebrity Chef Satish Nagaraj
English Articles

Food & Hospitality Sector a Global Employment Hub: Celebrity Chef Satish Nagaraj

by ಕಲ್ಪ ನ್ಯೂಸ್
March 21, 2026
0

Kalpa Media House  |  Mysuru | Trained and experienced Indian chefs today have immense job opportunities across the globe, and...

Read moreDetails
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
  • Advertise With Us
  • Grievances
  • About Us
  • Contact Us
Sunday, March 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಅಕ್ಕ ಅಂದರೆ ಅದು ಅಮ್ಮಾನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 15, 2021
in ಸಚಿನ್ ಪಾರ್ಶ್ವನಾಥ್
0
ಅಕ್ಕ ಅಂದರೆ ಅದು ಅಮ್ಮಾನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಅಕ್ಕಾ,
ಅದೇ ಒಂದು ಜಗತ್ತು. ಎಷ್ಟು ಚಂದದ ಬಂಧ. ಬೆನ್ನಿಗೆ ಹುಟ್ಟಿರಬಹುದು, ಬೆನ್ನಿಗೆ ನಿಂತು ಇಡೀ ಜೀವನ ಕಾದಿದ್ದು ನೀನೇ ಅಕ್ಕ. ಪುಟ್ಟ ಕೂಸಿದ್ದಾಗ ಅಮ್ಮನ ಕಾಡಿದುದು ಉಂಟು, ಆಗಲೂ ನೀ ಬಂದು ಸಲಹಿದ ನೆನಪು. ಅಕ್ಕ ಎಂದರೆ ಅಕ್ಕರೆ, ಅಕ್ಕ ಎಂದರೆ ಸಕ್ಕರೆ, ಅಕ್ಕ ಎಂದರೆ ಪ್ರೀತಿಯ ಜೋಳಿಗೆ.

ಈ ಕ್ಷಣಕ್ಕೂ ಎದೆಯ ಮೂಲೆಯಲ್ಲಿ ಅಳುಕು ಹುಟ್ಟಿದರೆ ಬೆರಳು ಚಲಿಸುವುದು ಅಕ್ಕನ ಕಡೆಗೆ. ಅಲ್ಲೊಂದು ಅಳೆಯಲಾಗದ ಧೈರ್ಯ ಪರ್ವತ ಇದೆ. ನನ್ನ ಎತ್ತಿಕೊಳ್ಳಲು ಆಗದೆ ನೀ ಎತ್ತಿಕೊಂಡರೂ ಅಪ್ಪುಗೆಗೆ ಸೋತು ಉಸಿರಾಡಲು ಮರೆತದದು ಉಂಟು. ನಿನ್ನ ಹೆಜ್ಜೆಯ ಮೇಲೆ ನನ್ನ ಹೆಜ್ಜೆಗಳ ಇಟ್ಟು ನಡೆವುದ ಕಲಿತದು ಉಂಟು.

ಬಾಲ್ಯದಲ್ಲಿ ಬೆಳ್ಳಕ್ಕಿಗೆ ಕೈ ತೋರಿದಾಗ
ಬೆರಳುಗುರಲ್ಲಿ ಮೂಡುತ್ತಿದ್ದ ಬೆಳಗು ಅವಳು
ಬೆಳ ಬೆಳಗು ಕಿರಣಗಳ ಸೋಕಿದಾಗ
ನದಿಯ ನೀರಲ್ಲಿ ಏಳುತ್ತಿದ್ದ ಮಂಜಿನ ಹನಿ ಅವಳು

ಪುಟ್ಟ ಪುಟ್ಟ ಹೆಜ್ಜೆಯ ಊರಿದಾಗ
ಕಾಲುಗಳಂಚಲ್ಲಿ ನಿಲ್ಲುತ್ತಿದ್ದ ಧೈರ್ಯ ಅವಳು
ಬಣ್ಣದ ಬದುಕಿಗೆ ನಾ ಸೋತಾಗ
ಉಸಿಉಸಿರಂಚಲ್ಲಿ ಕಾಯುತ್ತಿದ್ದ ದೈವ ಅವಳು

ಹೊಸ ಹೊಸ ಕನಸುಗಳ ಕಂಡಾಗ
ಮನದ ಗೂಡಲ್ಲಿ ಭರವಸೆ ಅವಳು
ರಾಶಿ ರಾಶಿ ಕನಸುಗಳ ತುಂಬಿದಾಗ
ಕಣ್ಣುಗಳಂಚಲ್ಲಿ ಚಿಮ್ಮುತ್ತಿದ್ದ ಸೊಬಗು ಅವಳು

ಹೌದು ಅವಳು ನನ್ನಕ್ಕ
ಕಾಮನಬಿಲ್ಲಿಗೂ ಚಂದ
ಮಗುವ ಮನಕೂ ಮುಗ್ಧ
ಬಿಡಿಸಲಾರದ ಬಂಧ
ಅಕ್ಷಯ ರೂಪದ ಗಂಧ

ನಿನ್ನ ಊಟದ ಜೊತೆ ನನ್ನ ಎರಡು ತುತ್ತುಗಳ ಎತ್ತಿ ಕೊಟ್ಟಿದ್ದು ನೀನು. ಒಂದು ಹಣ್ಣನ್ನು, ಒಂದು ಸಿಹಿಯನ್ನು, ಒಂದು ಪೆನ್ಸಿಲ್ಲನ್ನೂ ಪಾಲು ಮಾಡಿ ಹಂಚಿಕೊಂಡ ದಿನಗಳು ಇನ್ನು ಹಸಿಯಾಗೆ ಇವೆ. ನನ್ನ ಹುಳುಕಿಗೆಲ್ಲ ನಿನಗೆ ಏಟು; ನಿನ್ನ ಅಂಗಿ ಹಾಕಿಕೊಂಡು ಮೆರೆದ ದಿನಗಳೆಷ್ಟೋ. ಅಬ್ಬಾ ಬಾಲ್ಯವನ್ನು ಹಂಚಿಕೊಂಡರೆ ಮೊಗೆದಷ್ಟೂ ಚಿಮ್ಮುವ ನೆನಪುಗಳ ಒರತೆ. ಹುಳುಕು ಎಂದಾಗ ನೆನಪಾಯಿತು, ನಿಜವಾಗಿಯೂ ಪಾಠದ ಪುಸ್ತಕಗಳ ಒಳಗೆ ಕಥೆ ಪುಸ್ತಕ ಇಟ್ಟು ಓದಿಕೊಳ್ಳೋದನ್ನು ನಾನೇ ಎಷ್ಟೋ ಬಾರಿ ಅಮ್ಮನಿಗೆ ಹೇಳಿಕೊಟ್ಟಿದ್ದು.

ಈಗ ನೋಡು ಪಾಠ ಅಂದ ಮೇಲೆ ಶಾಲೆ ನೆನಪು ಆಯ್ತು. ನಿನ್ನ ಬ್ಯಾಗ್ ನಂಗೆ ಕೊಟ್ಟು ಶಾಲೆಗೆ ಕಳಿಸ್ತಿದ್ರು. ಅದಕ್ಕೂ ಅಳೋದು ಇರೋದು. ಹೊಸದೇ ಬ್ಯಾಗ್ ಬೇಕು ಅಂತ. ಕಾಲೇಜ್ ಗೆ ಹೋಗೋ ಟೈಮಲ್ಲಿ ಕೊನೆಗೆ ನಿನ್ನ ಬ್ಯಾಗ್ ಬೇಕಾಯ್ತು. ಅದು ಬೇರೆ ವಿಷಯ ಆಮೇಲೆ ಹೇಳ್ತೀನಿ. ಇಡೀ ಶಾಲೇನೆ ಒಂದು ಯೂನಿಫಾರ್ಮ್ ಹಾಕಿದ್ರೆ, ನಮ್ಮಿಬ್ರ ಯೂನಿಫಾರ್ಮ್ ಬೇರೇನೇ ಇರೋದು. ಜೂನ್ ಅಂದ ಕೂಡಲೇ ಹೊಸ ಬ್ಯಾಗ್, ಹೊಸ ಚಪ್ಪಲ್, ಹೊಸ ರೈನ್ ಕೋಟ್, ಹೊಸ ಬುಕ್ಸ್, ಹೊಸ ನೋಟ್ಸ್, ಹೊಸ ಕ್ಲಾಸ್. ಎಲ್ಲಾ ಎರಡು ಜೊತೆ ಬೇಕು; ನಿಂಗೆ ನಂಗೆ. ಅಬ್ಬಾ., ಥ್ಯಾಂಕ್ಸ್ ಪಪ್ಪ. ನೀನಂತೂ ಸೂಪರ್. ನೀನಿದ್ಯಲ್ಲಾ ಸೋ ನಾ ಎಲ್ಲಾ ಹುಡ್ಗರ ಹಾಗೆ ನೀರಾಡೋ ಹಾಗಿರಲಿಲ್ಲ, ಓಡೋ ಹಾಗಿರಲಿಲ್ಲ, ಜಗಳ ಅಂತೂ ಕೇಳಲೇಬಾರದು.

ನೀ ಹಾಕಿಕೊಟ್ಟ ದಾರಿಲೇ ನಾ ಬಂದೆ ಅಂತ ಹೇಳಿಕೊಳ್ಳೊಕೆ ನಂಗೆ ಈಗಲೂ ಹೆಮ್ಮೆ ಇದೆ. ಇವತ್ತು ನಾನು ಏನು ಆಗಿದಿನೋ ಅದೆಲ್ಲಕ್ಕೂ ನೀನು ಒಂದು ದೊಡ್ಡ ಕಾರಣ. ಸಾಲುಗಳಲ್ಲಿ ತುಂಬಲು ಆಗದು ನಿನ್ನ ಪ್ರೀತಿಯ, ಮಮತೆಯ. ನಿನ್ನ ಪಡೆಯೋಕು ಪುಣ್ಯ ಮಾಡಿದ್ದೆ ಅನ್ಸತ್ತೆ ನಾನು. ಹೇಳೋಕೆ ತುಂಬಾ ಇದೆ. ಆದ್ರೆ ನೆನಪುಗಳನ್ನು ನೂರು ಸಾರಿ ಮೆಲುಕು ಹಾಕಿ ಖುಷಿ ಪಡುವ ಅವಕಾಶ ಇದ್ದಾಗ, ಅದನ್ನು ಮೂರು ಅಕ್ಷರದಲ್ಲಿ ಹಾಳೆಗೆ ಇಳಿಸಿ ಕ್ಷಣಿಕ ಮಾಡಿ ಕೊಳ್ಳೋಕೆ ಇಷ್ಟ ಆಗ್ತಾ ಇಲ್ಲ.

ಬರಿ ಎಂದರೆ ಬರಿಯಲಿ ಹೇಗೆ
ನೀನೇ ನಾನಾಗಿರುವಾಗ
ಬರಿ ಎಂದರೆ ಬರಿಯಲಿ
ಹೇಗೆ ನೀ ಪದಗಳಿಗೆ ಸಿಗದಿದ್ದಾಗ

ನನಗಿಂತ ಮೊದಲು ಬಂದೆ
ನನ್ನ ಕನಸುಗಳಿಗೆ ನೀರನು ತಂದೆ
ದಿಕ್ಕಿಲ್ಲದಾಗ ಬೆನ್ನಿಗೆ ನಿಂತೆ||ಬರಿ ಎಂದರೆ||

ಬದುಕು ಅಂದಾಗ ಗುರುವಾಗಿ ನಿಂತೆ
ಕಷ್ಟ ಅಂದಾಗ ಗೆಳತಿ ಆಗಿ ಕುಳಿತೆ
ಖುಷಿ ಅಂದಾಗೆಲ್ಲ ನಗುತಾ ಬಂದೆ||ಬರಿ ಎಂದರೆ||

ಅಮ್ಮನಂತೆಯೇ ನೀನು ಗುಟುಕಿಡಲು
ಪಪ್ಪನಾಗುವೆ ನೀನು ಮುನಿಸು ತೋರಲು
ನನ್ನ ಆಸೆಗಳಿಗೆಲ್ಲಾ ನಿನ್ನದೇ ಕೊರಳು||ಬರಿ ಎಂದರೆ||

ಚಂದಕು ಅಂದಕು ನೀನೇ ಹೋಲಿಕೆ
ನೀ ದೂರಾಗುವ ನಾಳೆಗಳಾದರೂ ಏತಕೆ
ನೂರು ಜನುಮವಾದರೂ ಬೇಕು
ನಿನ್ನ ಋಣ ಸಂದಾಯಕೆ||ಬರಿ ಎಂದರೆ||

ಓದುವವರಿಗೆ ಅನ್ನಿಸಬಹುದೊ ಏನೋ, ಇವನಿಗೆ ಅಷ್ಟೇನಾ ಅಕ್ಕ ಇರೋದು ಅಂತ. ಅಕ್ಕ ಅಂದ್ರೆ ಅಮ್ಮ, ಅಕ್ಕ ಅಂದ್ರೆ ಗುರು, ಅಕ್ಕ ಅಂದ್ರೆ ಈ ಪ್ರಪಂಚ. ಅಕ್ಕ ಅಂದರೆ ಅದೇ ಕಿನ್ನರಿ ನಾವು ಹಾರುವುದನ್ನು ಮರೆತಾಗ ಬಂದು ರೆಕ್ಕೆ ಆಗುವವಳು. ಅಕ್ಕ ಇರುವವರ ಕೇಳಿ ನೋಡಿ, ಅವಳು ದಾರಿ ಅಷ್ಟೆ ಹಾಕಿ ಕೊಡಲ್ಲ, ಅವಳ ಕೆಲಸ ಬಿಟ್ಟು, ನಮಗೆ ಸಮಯ ಕೊಟ್ಟು, ಅಲ್ಲೆಲ್ಲೋ ಮರೆಯಲ್ಲಿ ನಿಂತು ನಿಮ್ಮ ಪ್ರಯಾಣನ ನೋಡ್ತಾ ಇರ್ತಾಳೆ. ನೋಡ್ತಾ ಇರ್ತಾಳೆ ಅನ್ನೋದು ನಿಮಗೂ ಗೊತ್ತಿರತ್ತೆ. ಆ ನಂಬಿಕೆಯ ಹೆಸರೇ ಅಕ್ಕ, ಅದೇ ಅಕ್ಕ ಅನ್ನೋ ಜಗತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Elder sisterKannada News WebsiteLatest News KannadaSachin Parshwanathಅಕ್ಕಾ
Share227Tweet123Send
Previous Post

ಭಾರತ ಕಂಡ ಶ್ರೇಷ್ಟ ರಾಷ್ಟ್ರ ನಾಯಕ ಡಾ.ಬಿ.ಆರ್.ಅಂಬೇಡ್ಕರ್ : ಪ್ರೊ. ಬಿ.ಪಿ.ವೀರಭದ್ರಪ್ಪ

Next Post

ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ: ಸಾರಿಗೆ ನೌಕರರಿಗೆ ನಟ ಯಶ್ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ: ಸಾರಿಗೆ ನೌಕರರಿಗೆ ನಟ ಯಶ್ ಮನವಿ

ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ: ಸಾರಿಗೆ ನೌಕರರಿಗೆ ನಟ ಯಶ್ ಮನವಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಮಾರ್ಚ್ 30-ಎಪ್ರಿಲ್ 3: ಮೈಸೂರು-ನಂಜನಗೂಡು ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

March 21, 2026
A Blissful concert by the Divine Duo

A Blissful concert by the Divine Duo

March 21, 2026
ಗಮನಿಸಿ | ಈ 7 ದಿನಗಳು ಬೆಂಗಳೂರು-ಅಶೋಕಪುರಂ ಮೆಮು ರೈಲಿನ ಮಹತ್ವದ ಮಾಹಿತಿ

ಬಾಣಸವಾಡಿ ಮತ್ತು ತುಮಕೂರು ನಡುವೆ ಒಂದು ಟ್ರಿಪ್ ಮೆಮು ವಿಶೇಷ ರೈಲು ಸೇವೆ

March 21, 2026
ಮಾರ್ಚ್ 23-25 | ವಿಕಸಿತ ಭಾರತ 2047ರ ಪುಷ್ಪ ಕೃಷಿ ಮತ್ತು ಭೂ ವಿನ್ಯಾಸ ರಾಷ್ಟ್ರೀಯ ಸಮ್ಮೇಳನ

ಮಾರ್ಚ್ 23-25 | ವಿಕಸಿತ ಭಾರತ 2047ರ ಪುಷ್ಪ ಕೃಷಿ ಮತ್ತು ಭೂ ವಿನ್ಯಾಸ ರಾಷ್ಟ್ರೀಯ ಸಮ್ಮೇಳನ

March 21, 2026
ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ | ಸುತ್ತೂರು ಶ್ರೀ ಸಾನಿಧ್ಯ, ಸಮ್ಮೇಳನ ಸರ್ವಾಧ್ಯಕ್ಷರಾಗಿ ಬೆಕ್ಕಿನಕಲ್ಮಠ ಶ್ರೀಗಳು

ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ | ಸುತ್ತೂರು ಶ್ರೀ ಸಾನಿಧ್ಯ, ಸಮ್ಮೇಳನ ಸರ್ವಾಧ್ಯಕ್ಷರಾಗಿ ಬೆಕ್ಕಿನಕಲ್ಮಠ ಶ್ರೀಗಳು

March 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL