ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಶಿವಮೊಗ್ಗ ವತಿಯಿಂದ ಇಂದು ನಗರದ ಹೊರವಲಯದಲ್ಲಿರುವ ಪುರದಾಳದ ತುಂಗಾ ನದಿಯ ಹಿನ್ನೀರಿನ ದಂಡೆಯನ್ನು ಸ್ವಚ್ಛ ಗೊಳಿಸಲಾಯಿತು.
ಜುಲೈ 9 ಎಬಿವಿಪಿಯ ಸ್ಥಾಪನ ದಿನ ಆಗಿದ್ದು, ಆ ನಿಟ್ಟಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿವಸ ಎಂದು ಪ್ರತಿವರ್ಷ ಆಚರಿಸಲಾಗುವುದು. ಈ ನಿಟ್ಟಿನಲ್ಲಿ ಈ ವರ್ಷವೂ ಸಹ ರಾಷ್ಟ್ರೀಯ ವಿದ್ಯಾರ್ಥಿ ದಿವಸದ ಅಂಗವಾಗಿ ಇಡೀ ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಪುಸ್ತಕ ವಿತರಣೆ ಈ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ನಿಟ್ಟಿನಲ್ಲಿ ಇಂದು ತುಂಗಾ ನದಿಯ ಹಿನ್ನೀರಿನ ದಡವನ್ನು ಸ್ವಚ್ಛ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್ ಎಫ್ ಡಿ ಪ್ರಮುಖ್ ನಿರಂಜನ್ ಮಾತನಾಡಿ, ಎಸ್ ಎಫ್ ಡಿ ಪರಿಸರದ ನಿಟ್ಟಿನಲ್ಲಿ ಕೆಲಸ ಮಾಡುವ ಸಂಘಟನೆಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಮಹಾನಗರ ವಿದ್ಯಾರ್ಥಿನಿ ಪ್ರಮುಖ್ ಅಮೃತಾ ಮಾತನಾಡಿ, ಈ ದಿನ ಹಿನ್ನೀರಿನ ದಂಡೆಯ ಸ್ವಚ್ಛತೆಯನ್ನು ಎಬಿವಿಪಿಯ ಕಾರ್ಯಕರ್ತರು ಯಶಸ್ವಿಯಾಗಿ ಮುಗಿಸಿದ್ದು ಮುಂದಿನ ದಿನಗಳಲ್ಲಿ ಸಹ ಈ ನಿಟ್ಟಿನಲ್ಲಿ ಎಬಿವಿಪಿಯಿಂದ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಮಹಾನಗರ ಕಾರ್ಯಕಾರಣಿ ಸದಸ್ಯೆ ನದಿ ಮಾತನಾಡಿ, ಜನರ ಬೇಜವಾಬ್ದಾರಿತನದಿಂದ ಇಂದು ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ ಈ ನಿಟ್ಟಿನಲ್ಲಿ ವಿದ್ಯಾರ್ಥಿ ಪರಿಷತ್ ನೀರಿನ ಮೂಲಗಳ ಸ್ವಚ್ಛತೆ ಮತ್ತು ಜಾಗೃತಿ ಮೂಡಿಸುವಲ್ಲಿ ಸಹ ಕಾರ್ಯನಿರತವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಚಾಲಕರಾದ ಕುಮಾರಸ್ವಾಮಿ, ಅರವಿಂದ, ಜಿಲ್ಲಾ ಕಲಾಮಂಚ್ ಪ್ರಮುಖ ಹಾಲಸ್ವಾಮಿ, ಮಹಾನಗರ ಕಾರ್ಯದರ್ಶಿ ಧನುಷ್, ಶ್ರೀಪಾದ, ಲೋಹಿತ್,ಸಂಜಯ್, ನಾದ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post