ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ತುಂಗಾನದಿ ಪಾತ್ರದಲ್ಲಿ ಸತತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಗಾಜನೂರಿನ ಡ್ಯಾಂಗೆ ಒಳ ಹರಿವು ಹೆಚ್ಚಾಗಿದ್ದು ಡ್ಯಾಂನಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿರುವುದರಿಂದ ಶಿವಮೊಗ್ಗ ನಗರದ ಶ್ರೀ ಕೃಷ್ಣರಾಜೇಂದ್ರ ಜಲಶುದ್ದೀಕರಣ ಕೇಂದ್ರದಲ್ಲಿ ತುಂಗಾನದಿಗೆ ಅಳವಡಿಸಿರುವ 2 ಸಂಖ್ಯೆ ಮೋಟಾರ್ಗಳನ್ನು ಹೊರತೆಗೆಯಲಾಗಿದೆ. ಹಾಗೂ ಕಚ್ಚಾ ನೀರಿನಲ್ಲಿ ಹೆಚ್ಚಿನ ಮಿಶ್ರಣವಾಗಿರುವುದರಿಂದ (ಟರ್ಬಿಡಿಟಿ)ಶುದ್ದೀಕರಣ ಘಟಕದಲ್ಲಿ ನೀರನ್ನು ಶುದ್ದೀಕರಿಸಲು ವಿಳಂಬವಾಗುತ್ತಿದೆ.
ಇದರಿಂದ ನಗರದಲ್ಲಿರುವ ಕಲ್ಲಹಳ್ಳಿ, ನರಸಿಂಹ ಬಡಾವಣೆ, ವಿನೋಬನಗರ 100 ಅಡಿ ರಸ್ತೆ ಶಿವಾಲಯ ಪಕ್ಕ, ವಿನೋಬನಗರ 60 ಅಡಿ ರಸ್ತೆ, ಆಲ್ಕೋಳ ಇಂಡಸ್ಟ್ರಿಯಲ್ ಏರಿಯಾ, ಸಕ್ರ್ಯೂಟ್ ಹೌಸ್, ಗೋಪಾಳ, ಎಪಿಎಂಸಿ, ಮಿಷನ್ ಕಾಂಪೌಂಡ್, ಮಹಾನಗರಪಾಲಿಕೆ ಆವರಣದಲ್ಲಿರುವ ಟ್ಯಾಂಕ್, ಸ್ವಾಮಿ ವಿವೇಕಾನಂದ ಬಡಾವಣೆ, ಬಸ್ಸ್ಟ್ಯಾಂಡ್ ಟ್ಯಾಂಕ್, ಈ ಟ್ಯಾಂಕ್ಗಳಿಂದ ವಿತರಣೆಯಾಗುವ ಬಡಾವಣೆಗಳ ದೈನಂದಿನ ನೀರು ಸರಬರಾಜುವಿನಲ್ಲಿ ವ್ಯತ್ಯಯವಾಗುತ್ತಿರುತ್ತದೆ.
ಸಾರ್ವಜನಿಕರು ಮಂಡಳಿ ಮತ್ತು ಮಹಾನಗರಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಕನನೀಸ ಮತ್ತು ಒಚ ಮಂಡಳಿ ನಿರ್ವಹಣಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post