ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನದ ವತಿಯಿಂದ ನೃತ್ಯ ನಿರಂತರ ಎಂಬ ಶಾಸ್ತ್ರೀಯ ನೃತ್ಯ ಮಾಲಿಕೆ ಕಾರ್ಯಕ್ರಮವನ್ನು ಡಿಸೆಂಬರ್ 10, 11 ಮತ್ತು 12 ರಂದು ಸಂಜೆ 6 ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ 10ರ ಶುಕ್ರವಾರದಂದು ಗುರು ಜಯೀತಾ ದತ್ತ ಮತ್ತು ಶಿಷ್ಯರಿಂದ ಕಥಕ್ ನೃತ್ಯ ಹಾಗೂ ಕುಮಾರಿ ಐಶ್ವರ್ಯ ಕಶ್ಯಪ್ ಮತ್ತು ಶಿವಾನಿ ಎಂ.ಹೆಚ್. ಅವರಿಂದ ದ್ವಂದ್ವ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 11ರ ಶನಿವಾರದಂದು ಕುಮಾರಿ ದಿವ್ಯ ಹೊಸ್ಕೆರೆ ಮತ್ತು ಕುಮಾರಿ ವೃಂದಾ ಜಿ ರಾವ್ ಅವರುಗಳಿಂದ ಪ್ರತ್ಯೇಕ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 12 ರ ಭಾನುವಾರದಂದು ಗುರು ಶ್ರೀಮತಿ ರಾಜಶ್ರೀ ಹೊಳ್ಳ ಮತ್ತು ಅವರ ಶಿಷ್ಯೆ ಕುಮಾರಿ ಸಂಜನಾ ಪ್ರಸಾದ್ ಅವರಿಂದ ಕೂಚುಪುಡಿ ನೃತ್ಯ ಹಾಗೂ ಶ್ರೀ ಸುರಜೀತ್ ಸೋಮ್ ಅವರಿಂದ ಒಡಿಸ್ಸಿ ನೃತ್ಯ ಕಾರ್ಯಕ್ರಮಗಳು ಮೂಡಿಬರಲಿವೆ. ಭಾರತೀಯ ಸಾಂಸ್ಕೃತಿಕ ನಿರ್ದೇಶನಾಲಯದ ಸಹಕಾರದೊಂದಿಗೆ ಈ ಮಾಲಿಕೆ ನಡೆಯುತ್ತಿದೆ.
ಈ ಮಾಲಿಕೆಯ ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕರು ಹಾಗೂ ಗಮಕ ಕಲಾವಿದರಾದ ಕಲಾಶ್ರೀ ರಾಮಸುಬ್ರಾಯ ಶೇಟ್, ಜೆ.ಎನ್.ಎನ್.ಸಿ.ಇ ಶಿವಮೊಗ್ಗದ ಉಪನ್ಯಾಸಕರು ಹಾಗೂ ಆಪ್ತಸಲಹೆಗಾರರಾದ ಶ್ರೀಮತಿ ಅನುರಾಧ ಗಿರಿಮಾಜಿ, ಶಿವಮೊಗ್ಗ ಶಾಖೆಯ ಐ.ಎಂ.ಎ ಅಧ್ಯಕ್ಷರಾದ ಡಾ. ಶಿವಯೋಗಿ ಅವರುಗಳು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಶ್ರೀವಿಜಯ’ ಅಧ್ಯಕ್ಷರಾದ ಡಾ. ಕೆ.ಆರ್.ಶ್ರೀಧರ್ ಅವರು ವಹಿಸಲಿದ್ದಾರೆ. ಸಹೃದಯರು ಕೋವಿಡ್ ನಿಯಮಗಳನ್ನು ಅನುಸರಿಸಿ ಭಾಗವಹಿಸುವಂತೆ ಡಾ. ಕೆ.ಎಸ್.ಪವಿತ್ರಾ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post