ನಾಯಕತ್ವದ ಕೊರತೆ ದೇಶದ ಆರ್ಥಿಕತೆಗೆ ಮಾರಕ. ಅದನ್ನು ಜೆಸಿಐ ನಿಗಬಲ್ಲದು ಮುಂದಿನ ದಿನಗಳಲ್ಲಿ ಜೆಸಿ ಪೂರಕ ಸರ್ಕಾರ ರಚನೆ ಆಗಬೇಕು ಅದು ನನ್ನ ಕನಸು ಎಂದು ಜೆಸಿಐ ನ ಪಾಸ್ಟ್ ಪ್ರೆಸಿಡೆಂಟ್ ಹಾಗೂ ಅಕೌಂಟೆಂಟ್ ಹಾಗೂ ಉತ್ತಮ ವಾಗ್ಮಿ ಶಿವಮೊಗ್ಗದ ಜೆಸಿ ಕೆ .ವಿ. ವಸಂತ್ ಕುಮಾರ್. ಅಭಿಪ್ರಾಯಿಸಿದರು.
ಅವರು ನಗರದ ಮೈತ್ರಿ ಶಾಲಾ ಆವರಣದಲ್ಲಿ ನಡೆದ ಜೆಸಿಐ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಬಂಧಗಳು ಬೆಳೆಯಲು ಆರ್ಥಿಕತೆ ಅಭಿವೃದ್ಧಿಗೆ ಜೆಸಿಐ ಪೂರಕವಾಗಿದೆ. ಮಾನವನ ವ್ಯಕ್ತಿತ್ವ ಹೊರಹೊಮ್ಮಲು ಈ ಸಂಸ್ಥೆ ವಿಶೇಷವಾಗಿ ಆಸಕ್ತಿಯುತವಾಗಿ ಕೆಲಸ ಮಾಡುತ್ತಿದ್ದು, ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಅದು ದೇಶದ ಪ್ರಗತಿಗೆ ದಾರಿಮಾಡಿಕೊಡುತ್ತದೆ ಎಂದರು.
ನಾಯಕತ್ವಕ್ಕೆ ಸತ್ ಚರಿತ್ರೆಯ ಅತಿ ಮುಖ್ಯ ಸಹಾಯದ ಮನೋಭಾವನೆ ಮನರಂಜನೆ ಶ್ರಮದಾನ ಹಾಗೂ ಉತ್ತಮ ನಾಯಕತ್ವ ಬೆಳವಣಿಗೆಗೆ ಪೂರಕವಾದ ಮಾಹಿತಿ ಹಾಗೂ ಕಾರ್ಯಗಾರವನ್ನು ಜೆಸಿ ಐ ನೀಡುತ್ತಾ ಬಂದಿದೆ. ಜೆಸಿಐ ಸದಸ್ಯರಾಗಿ ಅದರ ಎಲ್ಲಾ ಕಾರ್ಯಕ್ರಮದ ಕಾರ್ಯಗಾರಗಳನ್ನು ಬಳಸಿಕೊಳ್ಳಿ. ನಿಮ್ಮ ಜ್ಞಾನ ಆರ್ಥಿಕ ಸದೃಢತೆ ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು.ಜೆಸಿಐ ಸದಸ್ಯರಿಗೆ ಎಲ್ಲಾ ರೀತಿಯ ಸಹಕಾರವನ್ನು ಅವರ ಬೆಳವಣಿಗೆಗೆ ಪೂರಕವಾಗಿ ನೀಡುತ್ತಿದೆ ಅಲ್ಲಿ ಏನು ಕೊರತೆ ಇದೆ ಎಂಬುದೇ ಉಳಿದ ಪ್ರಶ್ನೆಯಾಗಿದೆ. ಯೋಧ, ಸಂತನ ಗುಣ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಹೊರಹೊಮ್ಮಿದಾಗಲೇ ಉತ್ತಮ ನಾಯಕನಾಗಲು ಸಾಧ್ಯ ನಾಯಕತ್ವದ ಗುಣ ಅದನ್ನು ಅನೇಕ ಉದಾಹರಣೆಗಳೊಂದಿಗೆ ಸಭೆಯಲ್ಲಿ ತಿಳಿಸಿದರು.
ಜೇಸಿಐನ ನಿಕಟಪೂರ್ವ ಅಧ್ಯಕ್ಷ ಜೆಸಿ ಮಧುಕೇಶ್ವರ ತಮ್ಮ ಅವಧಿಯ ಅಧ್ಯಕ್ಷಗಿರಿಯ ಸಮಯದಲ್ಲಿ ಮಾಡಿದ ಕಾರ್ಯಕ್ರಮಗಳ ಹಾಗೂ ಕಾರ್ಯಗಾರಗಳು ಫೋಟೋ ದಾಖಲೆಗಳ ಸಮೇತ ಸಂಪೂರ್ಣ ಮಾಹಿತಿಯನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿಸುವುದರ ಜೊತೆಗೆ ಅವುಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಸಭೆಗೆ ತೋರಿಸಿದರು. ಅವರ ಅವಧಿಯ ಕಾರ್ಯಕ್ರಮಗಳ ಕಾರ್ಯವೈಖರಿಯ ಬಗ್ಗೆ ವೇದಿಕೆಯ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧುಕೇಶ್ವರ ಅವರು ತಮಗೆ ಕಾರ್ಯಕ್ರಮಗಳಲ್ಲಿ ಕಾರ್ಯಾಗಾರಗಳಲ್ಲಿ ಸಹಕರಿಸಿದ ಬೆಸ್ಟ್ ಫ್ರೆಂಡ್ಸ್ ಕ್ಲಬ್ ಮತ್ತು ಪರೋಪಕಾರಂ ಹಾಗೂ ಜೆಸಿಐ ಸದಸ್ಯರುಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು. ಹಾಗೂ ತಮ್ಮ ಕಾರ್ಯಕ್ರಮಗಳನ್ನು ಅತಿ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟಿಸಿದ ಮತ್ತು ಪತ್ರಿಕೋದ್ಯಮದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಮಾಧ್ಯಮ ಮಿತ್ರ ಜಿಕೆ. ಹೆಬ್ಬಾರ್ ಅವರನ್ನು ನಿಕಟಪೂರ್ವ ಅಧ್ಯಕ್ಷ ಜೆಸಿ ಮಧುಕೇಶ್ವರ ಹಾಗೂ ನೂತನ ಅಧ್ಯಕ್ಷ ಜೆಸಿ ಆನಂದ ಕೃಷ್ಣರವರು ವೇದಿಕೆಯ ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಯಿತು ನೂತನ ಅಧ್ಯಕ್ಷ. ರಿಗಅಧಿಕಾರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಜೆಸಿ ಸುಮದ್ದ ಶ್ರೀಕಾಂತ್ ಕೊಳಲು ವಾದನ ಆಕರ್ಷಣೀಯವಾಗಿ ಕಂಡು ಬಂದಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post