ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಂದೆಯೊಬ್ಬರು ಪೊಲೀಸ್ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸ್ಥಳಕ್ಕೆ ಅವರ ಮಗಳೇ ಐಪಿಎಸ್ ಅಧಿಕಾರಿಯಾಗಿ ಬಂದು ತಂದೆಯೇ ಮಗಳಿಗೆ ಸೆಲ್ಯೂಟ್ ಮಾಡಿದ್ದ ಘಟನೆಯನ್ನು ನೀವು ಕೇಳಿದ್ದಿರಿ. ಅದೇ ರೀತಿಯ ಪ್ರಸಂಗವೊಂದಕ್ಕೆ ಗಣರಾಜ್ಯೋತ್ಸವದಂದು ಶಿಕಾರಿಪುರ ತಾಲೂಕಿನ ಈ ಶಾಲೆ ಸಾಕ್ಷಿಯಾಯಿತು.

ತಾಲೂಕಿನ ಸಾಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದಶಕಗಳ ಹಿಂದೆ ವ್ಯಾಸಂಗ ಮಾಡಿದ್ದ ಸಾಲೂರು ಗ್ರಾಮ ಪಂಚಾಯ್ತಿ ಸದಸ್ಯ ಎಸ್.ಆರ್. ಪರಮೇಶ್ವರ್ ಎನ್ನುವವರು ಈಗ ಅದೇ ಶಾಲೆಯಲ್ಲಿ ಎಸ್’ಡಿಎಂಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಅವರ ಪುತ್ರ ಪಿ. ಪ್ರಜ್ವಲ್ ಇದೇ ಶಾಲೆಯಲ್ಲಿ 10ನೆಯ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ಗಣರಾಜ್ಯೋತ್ಸವ ದಿನದಂದು ಕಾರ್ಯಕ್ರಮದ ವಿದ್ಯಾರ್ಥಿ ಮುಂದಾಳತ್ವವನ್ನು ಪ್ರಜ್ವಲ್ ವಹಿಸಿದ್ದನು. ಧ್ವಜಾರೋಹಣ ಮಾಡಲು ಪರಮೇಶ್ವರ್ ಅವರನ್ನು ಅಂದರೆ ತನ್ನ ತಂದೆಯನ್ನು ಮಗನೇ ಆಹ್ವಾನಿಸಿದ್ದು ವಿಶೇಷವಾಗಿತ್ತು. ತಾವು ಓದಿದ ಶಾಲೆಯಲ್ಲಿ ಪರಮೇಶ್ವರ್ ಈಗ ಎಸ್’ಡಿಎಂಸಿ ಅಧ್ಯಕ್ಷರಾಗಿದ್ದಾರೆ. ಇದೇ ಶಾಲೆಯಲ್ಲಿ ಓದುತ್ತಿರುವ ಅವರ ಪುತ್ರ ತಂದೆಯನ್ನು ಧ್ವಜಾರೋಹಣಕ್ಕೆ ಆಹ್ವಾನಿಸುವ ಅವಕಾಶ ಆತನಿಗೆ ಒದಗಿದ್ದು ಅಪರೂಪದ ಘಟನೆಯಾಗಿತ್ತು. ಈ ಕ್ಷಣಕ್ಕೆ ಸಾಕ್ಷಿಯಾದ ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















