No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Saturday, March 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ದೃಷ್ಟಿ ರಾಷ್ಟ್ರೀಯ ನೃತ್ಯ ಉತ್ಸವ : 19ರ ಸಂಜೆ ಚೌಡಯ್ಯ ಹಾಲ್‌ನಲ್ಲಿ ವಿಶೇಷ ನೃತ್ಯ ಸಮಾರಾಧನೆ

ಭಾರತೀಯ ಇತಿಹಾಸದ ಮೇಲೆ ಹೊಸ ಬೆಳಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 19, 2022
in ಬೆಂಗಳೂರು ನಗರ
0
ದೃಷ್ಟಿ ರಾಷ್ಟ್ರೀಯ ನೃತ್ಯ ಉತ್ಸವ : 19ರ ಸಂಜೆ ಚೌಡಯ್ಯ ಹಾಲ್‌ನಲ್ಲಿ ವಿಶೇಷ ನೃತ್ಯ ಸಮಾರಾಧನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಭಾರತೀಯ ಮತ್ತು ಅಂತರಾಷ್ಟ್ರೀಯ ಕಲಾ ಪ್ರಕಾರಗಳನ್ನು ಆದರಿಸಿ, ಗೌರವಿಸಿ, ವೇದಿಕೆ ಕಲ್ಪಿಸಿಕೊಡುವ ರಾಜಧಾನಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ‘ದೃಷ್ಟಿ ಆರ್ಟ್ ಫೌಂಡೇಷನ್’. Drushti Art Foundation ಈ ಬಾರಿ 17ನೇ ರಾಷ್ಟ್ರೀಯ ನೃತ್ಯ ಉತ್ಸವಕ್ಕೆ ಸಂಸ್ಥೆ ಅಣಿಯಾಗಿದೆ. ಮಾ. 19ರ ಶನಿವಾರ ಸಂಜೆ ೬ಕ್ಕೆ ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ಈ ಒಂದು ವಿಶೇಷ ನೃತ್ಯ ಸಮಾರೋಹಕ್ಕೆ ನವ ವಧುವಿನಂತೆ ಸಿಂಗಾರಗೊಂಡಿದೆ.

ಉತ್ಸವದ 17 ನೇ ಆವೃತ್ತಿಯಲ್ಲಿ ಭರತನಾಟ್ಯ, ಭರತನೃತ್ಯಂ, ಕಥಕ್ ಮತ್ತು ಒಡಿಸ್ಸಿಯಂತಹ ಭಾರತೀಯ ಶಾಸ್ತ್ರೀಯ ನೃತ್ಯ ಶೈಲಿಗಳು ವಿಜೃಂಭಿಸಲಿವೆ. ವಿವಿಧ ಪ್ರಕಾರಗಳಲ್ಲಿ ದೇಶದ ಪ್ರತಿಷ್ಠಿತ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಅನಾವರಣ ಗೊಳಿಸಲಿದ್ದಾರೆ.

ಚರಿತ್ರೆಗೆ ಹಿಡಿಯುವ ಕನ್ನಡಿ:
ದೃಷ್ಯಕಲಾ ಮಾಧ್ಯಮ ಸಮಾಜದ ಮೇಲೆ ಬೀರುವ ಪರಿಣಾಮ ಬಹಳ ದೊಡ್ಡದು. ಭಾರತೀಯ ಇತಿಹಾಸದ ಪ್ರತಿಯೊಂದು ಮಹತ್ತರ ಸಂಗತಿಗಳೂ ಮೊದಲು ಮೂಡಿದ್ದು ಸಾಧಕ ವ್ಯಕ್ತಿಯೊಬ್ಬರ ಅಂತರಂಗದಲ್ಲಿ. ನಂತರವಷ್ಟೇ ಅದು ಈ ಭರತ ಭೂಮಿಯಲ್ಲಿ ಆಚರಣೆಗೆ ಬರಲು ಸಹಕಾರಿಯಾಯಿತು. ಈ ಒಂದು ಪರಿಕಲ್ಪನೆಯನ್ನು ನೃತ್ಯ ಮಾಧ್ಯಮದ ಮೂಲಕ ಕಲಾರಸಿಕರಿಗೆ ಕಟ್ಟಿಕೊಡುವುದು ಈ ಬಾರಿ ದೃಷ್ಟಿ ಉತ್ಸವದ ಮಹದುದ್ದೇಶ. ಹಾಗಾಗಿ ಭಾರತೀಯ ಇತಿಹಾಸದ ಒಂದೊಂದು ಘಟನೆಯನ್ನು ಒಂದೊಂದು ತಂಡದವರು ಪ್ರಸ್ತುತ ಪಡಿಸಲಿರುವುದು ವಿಶೇಷ ಸಂಗತಿಯಾಗಿದೆ.

ದೃಷ್ಟಿ ಸಂಸ್ಥೆಯ ಕಲಾ ನಿರ್ದೇಶಕಿ, ವಿದುಷಿ ಅನುರಾಧಾ ವಿಕ್ರಾಂತ್ ಮತ್ತು ತಂಡದಿಂದ ವಿನೂತನ ಶೈಲಿಯ ಭರತನಾಟ್ಯ ಅನಾವರಣವಾಗಲಿದೆ. ಈ ಪ್ರಸ್ತುತಿಯಲ್ಲಿ ಕುಮಾರ ಕಂಪಣ್ಣ ರಾಜ (ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕ ಬುಕ್ಕನ ಪುತ್ರ) ತಮಿಳು ನಾಡಿನ ನೂರಾರು ದೇಗುಲಗಳನ್ನು ಪುನರುತ್ಥಾನ ಮಾಡಿದ ಇತಿಹಾಸ ಪಡಮೂಡಲಿದೆ. ಅದರಲ್ಲೂ ವಿಶೇಷವಾಗಿ ಮಧುರೆಯ ಮೀನಾಕ್ಷಿ ದೇವಾಲಯದ ಪೂಜಾ ಪದ್ಧತಿಗಳು (ಆಕ್ರಮಣದ ನಂತರದ ಕಾಲದಲ್ಲಿ) ಹೊಸತನದಿಂದ ಚಿಗುರಿದ ಪರಿ ವಿಭಿನ್ನವಾಗಿ ತೆರೆದುಕೊಳ್ಳಲಿದೆ. ಅಪ್ಪಟ ಕನ್ನಡ ನಾಡಿನ ಕುಮಾರ ಕಂಪಣ್ಣ ಕೇವಲ ರಾಜನಾಗಿ ಮಾತ್ರ ಆಳ್ವಿಕೆ ಮಾಡದೇ ನಮ್ಮ ಇತಿಹಾಸ ಮತ್ತು ಪರಂಪರೆ ಸಾರುವ ದೇಗುಲಗಳ ಪುನರುತ್ಥಾನಕ್ಕೆ ಮಹೋನ್ನತ ಕೊಡುಗೆ ನೀಡಿರುವುದು ಅನೇಕ ಕನ್ನಡಿಗರಿಗೇ ಗೊತ್ತಿಲ್ಲದಾಗಿದೆ. ಇಂತಹ ಸಂಗತಿಗಳ ಮೇಲೆ ದಿವ್ಯ ಬೆಳಕನ್ನು ಚೆಲ್ಲುವ ನಿಟ್ಟಿನಲ್ಲಿ ವಿದುಷಿ ಅನುರಾಧಾ ಅವರ ತಂಡ ಕಲಾಭಿವ್ಯಕ್ತಿಗೆ ಕನ್ನಡಿ ಹಿಡಿಯುವ ಸೇವೆಗೆ ಅಣಿಯಾಗಿದೆ.

ಖ್ಯಾತ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಇಲ್ಲಿ ಸಂದರ್ಭಕ್ಕೆ ತಕ್ಕಂತೆ ಸೊಗಸಾಗಿ ಬಳಸಿಕೊಳ್ಳಲಾಗಿದೆ. ಪ್ರಖ್ಯಾತ ವಿದುಷಿ ಪದ್ಮಾ ಸುಬ್ರಹ್ಮಣ್ಯ ನೃತ್ಯ ಸಂಯೋಜನೆ ಇರುವುದು ವಿಶೇಷದಲ್ಲಿ ವಿಶೇಷವಾಗಿದೆ.

ನವದೆಹಲಿಯ ವಿದುಷಿ ರಮಾ ವೈದ್ಯನಾಥನ್-ಭರತನಾಟ್ಯದಲ್ಲಿ ಮಹಾನ್ ಕವಿ ಕಾಳಿದಾಸ ಮತ್ತು ರವೀಂದ್ರ ನಾಥ ಟ್ಯಾಗೋರ್ ಅವರ ಕಾವ್ಯಭಾಗದಲ್ಲಿ ಅಡಗಿರುವ ಮುಖ್ಯ ಭಾಗಗಳನ್ನು ಅನಾವರಣಗೊಳಿಸಲಿದ್ದಾರೆ.

ಬೆಂಗಳೂರಿನ ನಾದಂ ನೃತ್ಯ ಮೇಳದಿಂದ (ನಂದಿನಿ ಮೆಹ್ತಾ- ಮುರಳಿ) ಕಥಕ್ ನೃತ್ಯ ಪ್ರಕಾರದಲ್ಲಿ ಧೀರೋದ್ದಾತೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಜೀವನ ಗಾಥೆಯನ್ನು ನಿರೂಪಿಸಲಿದ್ದಾರೆ.

ಭುವನೇಶ್ವರದ ರಾಹುಲ್ ಆಚಾರ್ಯ ಒಡಿಸ್ಸಿ ನೃತ್ಯ, ಮುಂಬೈನ ಪವಿತ್ರಾ ಭಟ್ ಅವರಿಂದ ವಿಶೇಷ ಭರತನಾಟ್ಯ ಪ್ರಸ್ತುತಿಯಲ್ಲಿ ಭಾರತದ ದೇಗುಲಗಳಲ್ಲಿ ಆಗಮ ಶಾಸ್ತ್ರದ ಸೇವೆ (ಶಿಲ್ಪ- ಪೂಜೆ) ಪರಿಕಲ್ಪನೆ ಸಂಪನ್ನಗೊಳ್ಳಲಿದೆ.

ದೃಷ್ಟಿ ಪುರಸ್ಕಾರ:
ನೃತ್ಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ ನವದೆಹಲಿಯ ವಿದುಷಿ ರಮಾ ವೈದ್ಯನಾಥನ್ ಅವರಿಗೆ ಇದೇ ಸಂದರ್ಭ ‘ದೃಷ್ಟಿ ಪುರಸ್ಕಾರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಗಣ್ಯರ ಉಪಸ್ಥಿತಿ:
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸೆಂಚುರಿ ರಿಯಲ್ ಎಸ್ಟೇಟ್ ಸಂಸ್ಥೆ ಅಧ್ಯಕ್ಷ ಮತ್ತು ಉದ್ಯಮಿ ಡಾ. ದಯಾನಂದ ಪೈ, ಬೆಂಗಳೂರಿನ ಪ್ರಖ್ಯಾತ ನೃತ್ಯ ಸಂಸ್ಥೆ ‘ನೂಪುರ’ ದ ಹಿರಿಯ ಭರತನಾಟ್ಯ ಗುರು ಲಲಿತಾ ಶ್ರೀನಿವಾಸನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉಚಿತ ಪ್ರವೇಶವಿದ್ದು, ಕಲಾಸಕ್ತರು ಭಾಗವಹಿಸಲು ಕೋರಲಾಗಿದೆ.

ದೃಷ್ಟಿ ಬೆಳೆದುಬಂದ ಹಾದಿ:
ಹೆಸರಾಂತ ಭರತನಾಟ್ಯ ನೃತ್ಯಗಾರ್ತಿ ಅನುರಾಧಾ ವಿಕ್ರಾಂತ್ ಮತ್ತು ಅವರ ಪತಿ ಟಿ.ಎಂ.ವಿಕ್ರಾಂತ್ ಅವರ ಕನಸಿನ ಕೂಸಾಗಿ ಜನ್ಮ ತಾಳಿದ ದೃಷ್ಟಿ ಸಂಸ್ಥೆ ಬೆಂಗಳೂರಿನ ಸಹಕಾರ ನಗರದಲ್ಲಿ ನೆಲೆಗೊಂಡಿದ್ದು, ಈವರೆಗೆ ನೂರಾರು ಭರತನಾಟ್ಯ ಕಲಾವಿದೆಯರನ್ನು ನಾಡಿಗೆ ನೀಡಿದ ಖ್ಯಾತಿಗೆ ಪಾತ್ರವಾಗಿದೆ. ಪ್ರತಿ ವರ್ಷವೂ ನಾಡಿನ, ಹೊರ ನಾಡಿನ ಅಪ್ರತಿಮ ಕಲಾವಿದರನ್ನು ಆಹ್ವಾನಿಸಿ, ಅವರ ಕಲಾವಂತಿಕೆ ಪ್ರದರ್ಶನದ ರಸದೌತಣ ಉಣ ಬಡಿಸಲು ‘ದೃಷ್ಟಿ ರಾಷ್ಟ್ರೀಯ ನೃತ್ಯ ಉತ್ಸವ’ ಆಯೋಜಿಸುತ್ತಿದೆ.

ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ (ಆಜಾದಿ ಕಾ ಅಮೃತ ಮಹೋತ್ಸವ್) ಸಂದರ್ಭದಲ್ಲಿ ಈ ಬಾರಿಯ ನೃತ್ಯ
ಉತ್ಸವವು ಭಾರತದ ಕಾಲಾತೀತ ಕಲೆಯ ಪುಷ್ಟೀಕರಣ, ಪುನರುಜ್ಜೀವನ ಮತ್ತು ಬಲವರ್ಧನೆಗೆ ಕೊಡುಗೆಯಾಗಲಿದೆ ಎನ್ನುತ್ತಾರೆ ಸಂಸ್ಥೆ ನಿರ್ದೇಶಕಿ, ವಿದುಷಿ ಅನುರಾಧಾ ವಿಕ್ರಾಂತ್.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ‘ದೃಷ್ಟಿ ಆರ್ಟ್ ಫೌಂಡೇಷನ್’BangaloreDrushti Art FoundationKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaState Newsಬೆಂಗಳೂರು
Share199Tweet123Send
Previous Post

ಅದ್ದೂರಿಯಾಗಿ ಸಂಪನ್ನಗೊಂಡ ಬಾಲಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ

Next Post

ಆನೆಗಳ ಉಪಟಳ ನಿಯಂತ್ರಣಕ್ಕೆ ಕ್ರಮ : ಗೃಹಸಚಿವ ಆರಗ ಜ್ಞಾನೇಂದ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ರಾಜ್ಯದಲ್ಲಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಗೃಹ ಸಚಿವರ ವಾರ್ನಿಂಗ್

ಆನೆಗಳ ಉಪಟಳ ನಿಯಂತ್ರಣಕ್ಕೆ ಕ್ರಮ : ಗೃಹಸಚಿವ ಆರಗ ಜ್ಞಾನೇಂದ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಕೋಟ್ಯಾಂತರ ಜನರ ಹೃದಯ ಗೆದ್ದ ಮಾನವ ದೇವರು ಪುನೀತ್ ರಾಜಕುಮಾರ್: ಸುರೇಶ್ ಎನ್ ಋಗ್ವೇದಿ

ಕೋಟ್ಯಾಂತರ ಜನರ ಹೃದಯ ಗೆದ್ದ ಮಾನವ ದೇವರು ಪುನೀತ್ ರಾಜಕುಮಾರ್: ಸುರೇಶ್ ಎನ್ ಋಗ್ವೇದಿ

March 21, 2026
ಡಿವಿಜಿಯವರ ಮಂಕುತಿಮ್ಮನ ಕಗ್ಗ ಜೀವನದ ಮೌಲ್ಯಗಳು : ಸುರೇಶ್ ಎನ್ ಋಗ್ವೇದಿ

ಡಿವಿಜಿಯವರ ಮಂಕುತಿಮ್ಮನ ಕಗ್ಗ ಜೀವನದ ಮೌಲ್ಯಗಳು : ಸುರೇಶ್ ಎನ್ ಋಗ್ವೇದಿ

March 21, 2026
ಜಾಗತಿಕ ಸೈಬರ್ ವಾರ್ಫೇರ್ ಎದುರಿಸಲು ಸಜ್ಜುಗೊಳ್ಳಬೇಕಿದೆ ಭಾರತ

ಜಾಗತಿಕ ಸೈಬರ್ ವಾರ್ಫೇರ್ ಎದುರಿಸಲು ಸಜ್ಜುಗೊಳ್ಳಬೇಕಿದೆ ಭಾರತ

March 20, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಮಂಗಳೂರು-ವಿಜಯಪುರ, ಮೈಸೂರು-ಬಾಗಲಕೋಟೆ ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ

March 20, 2026
Mysore – Shivamogga Express Big Update on this Date | Must Read

ಮಂಗಳೂರು-ಸುಬ್ರಹ್ಮಣ್ಯ ರೈಲು ರದ್ದು | ಯಶವಂತಪುರ-ಕಾರವಾರ ಸೇರಿ 7 ರೈಲುಗಳ ಬಿಗ್ ಅಪ್ಡೇಟ್

March 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL