ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ B S Yadiyurappa ಪುತ್ರ ಬಿ.ವೈ. ವಿಜಯೇಂದ್ರ B Y Vijayendra ಸೇರಿದಂತೆ ನಾಲ್ವರ ಹೆಸರನ್ನು ಹೈಕಮಾಂಡ್ಗೆ ರಾಜ್ಯ ಬಿಜೆಪಿ ಶಿಫಾರಸ್ಸು ಮಾಡಿದೆ.
ರಾಜ್ಯ ಬಿಜೆಪಿ ಕೋಡ್ ಕಮಿಟಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಬಿ.ವೈ. ವಿಜಯೇಂದ್ರ, ಲಕ್ಷ್ಮಣ ಸವದಿ, ಛಲವಾದಿ ನಾರಾಯಣ ಸ್ವಾಮಿ, ನಿರ್ಮಲ್ ಕುಮಾರ್ ಸುರಾಲ ಅವರುಗಳ ಹೆಸರನ್ನು ಹೈಕಮಾಂಡ್ಗೆ ಶಿಫಾರಸ್ಸು ಮಾಡಿದೆ.
ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿಯಿಂದ ಹೆಸರುಗಳನ್ನಷ್ಟೇ ನಾವು ಕಳುಹಿಸಿಕೊಡುತ್ತೇವೆ ಅಂತಿಮ ತೀರ್ಮಾನ ಪಕ್ಷದ ವರಿಷ್ಠರಿಗೆ ಸೇರಿದ್ದು ಎಂದಿದ್ದಾರೆ.
Also read: ಕ್ರೀಡೆಗಳು ಸಮುದಾಯದ ಹಂತದಲ್ಲಿ ರೂಪುಗೊಳ್ಳುತ್ತಿರುವುದು ಮೆಚ್ಚುಗೆಯ ಸಂಗತಿ: ಎಮ್ಎಲ್ಸಿ ಡಿ.ಎಸ್. ಅರುಣ್
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿ.ವೈ. ವಿಜಯೇಂದ್ರಗೆ ಸ್ಥಾನ ದೊರೆಯುತ್ತದೆ ಎಂದು ಊಹಾಪೋಹದ ಬೆನ್ನಲ್ಲೇ ಪರಿಷತ್ಗೆ ಅವರ ಹೆಸರು ಶಿಫಾರಸ್ಸುಗೊಂಡಿರುವುದು ಮತ್ತಷ್ಟು ಪುಷ್ಟಿ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post