ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜಕಾರಣ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿರುವುದು ನಿಜ. ಆದರೆ, ಘೋಷಣೆಯ ಹಿಂದೆ ಯಾವುದೆ ಪಕ್ಷ, ಸಂಘಟನೆಗಳ ಮುಖಂಡರ ಪ್ರೇರಣೆ ಇರಲಿಲ್ಲ’ ಎಂದು ಸರ್ಜಿ ಫೌಂಡೇಷನ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ ಪ್ರತಿಕ್ರಿಯಿಸಿದ್ದಾರೆ.
’ಇನ್ನಷ್ಟು ಸಮಾಜ ಸೇವೆ ಮಾಡಬೇಕು. ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎನ್ನುವುದು ತಮ್ಮ ಬಹು ದಿನಗಳ ಬಯಕೆ, ಬಂದು ಬಳಗ, ಹಿತೈಷಿಗಳು ಹಾಗೂ ಅಭಿಮಾನಿಗಳ ಪ್ರೇರಣೆಯಿಂದ ಹುಟ್ಟುಹಬ್ಬದ ದಿನದಂದು ಅವರ ಸಮ್ಮುಖದಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದೆ. ವೇದಿಕೆಯಲ್ಲಿ, ತಾನು ಗೌರವಿಸುವ ಕೆಲವು ಗಣ್ಯರು ಅಂದು ಆಸೀನರಾಗಿದ್ದರು, ಆದರೆ, ಅವರು ಪ್ರತಿನಿಧಿಸುವ ಸಂಘಟನೆ ಅಥವಾ ಪಕ್ಷದ ಬೆಂಬಲಿತ ಅಭ್ಯರ್ಥಿ ಎನ್ನುವ ರೀತಿ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುವಾಗ ಸಹಜವಾಗಿ ತಮ್ಮ ವೈದ್ಯಕೀಯ ವೃತ್ತಿಯ ಸೇವೆಯನ್ನು ಹೇಳಿಕೊಂಡಿದ್ದು, ಇದರೊಂದಿಗೆ ಹಿಂದಿನಿಂದಲೂ ತಮ್ಮನ್ನು ತಾವು ಸಮಾಜಮುಖಿಯಾಗಿ ತೊಡಗಿಸಿಕೊಂಡ ಬಗ್ಗೆ ಮಾತನಾಡುತ್ತ ಇನಷ್ಟು ಸಮಾಜ ಮುಖಿಯಾಗಬೇಕು ತಮ್ಮಿಂದ ಈ ಸಮಾಜಕ್ಕೆ ಹೆಚ್ಚಿನ ಸೇವೆ ಸಿಗುವಂತೆ ಆಗಬೇಕು ಎಂಬುವ ಸದುದ್ದೇಶದಿಂದ ಮನದಾಳ ತೋಡಿಕೊಂಡಿರುವೆ. ಹಲವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು, ಚುನಾವಣಾ ರಾಜಕಾರಣದ ಮೂಲಕವು ಜನಸೇವೆಗೆ ಸಿದ್ದನಿದ್ದೇನೆ’ ಎಂದಷ್ಟೇ ಹೇಳಿಕೆ ನೀಡಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಅಪಾರ ಬಂಧುಬಾಂಧವರು, ಹಿತೈಷಿಗಳು, ಒಡನಾಡಿಗಳು, ಗೆಳೆಯರು, ವೃತ್ತಿ ಬಾಂಧವರು, ಆಸ್ಪತ್ರೆ ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನನ್ನು ಹಾರೈಸಿದ್ದಕ್ಕೆ ಎಲ್ಲರಿಗೂ ಹೃದಯ ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ತಮ್ಮ ಜನ್ಮದಿನದಂದು ತಾವು ಆಡಿದ ಮಾತುಗಳಿಗೆ ಯಾವುದೇ ಪಕ್ಷದ, ಮುಖಂಡರ ಅಥವಾ ಸಂಘ ಸಂಸ್ಥೆಗಳ ಪ್ರೇರಣೆ ಇಲ್ಲ. ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಯಾರಲ್ಲಿಯೂ ಗೊಂದಲ ಮೂಡಬಾರದೆಂಬ ಕಾರಣಕ್ಕೆ ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















