ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಾಹಿತಿಗಳಲ್ಲಿ ಪ್ರತಿಭೆ – ಪಾಂಡಿತ್ಯವಿರುತ್ತದೆ ಅದನ್ನು ಪ್ರೋತ್ಸಾಹಿಸುವ ಗುಣವನ್ನು ಸಹೃದಯರು ಮಾಡಿದಾಗ ಅವರು ಇನ್ನು ಹೆಚ್ಚಿನ ಸಾಹಿತ್ಯ ಕೃಷಿ ಮಾಡಲು ಸಹಕಾರಿಯಾಗುತ್ತದೆ ಎಂದು ಸಾಹಿತಿ ಡಾ.ಎಸ್.ಹೆಚ್. ಭುವನೇಶ್ವರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಹನುಮಂತನಗರದ ಶ್ರೀ ಬಾಲಾಜಿ ಪದವಿ ಕಾಲೇಜಿನಲ್ಲಿ ಕವಿ ಡಾ.ಎಸ್. ರಾಮಮೂರ್ತಿಶರ್ಮ ಲಕ್ಕೂರು ಅವರ ‘ಸೊಬಗು’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಡಾ.ಆರ್.ವಾದಿರಾಜು ಮಾತನಾಡಿ, ಶಂಕರ ಚರಿತಂ ಮೂಲಕ ಆದಿ ಶಂಕರರ ಜೀವನಗಾಥೆಯನ್ನು ಸಂಕ್ಷಿಪ್ತವಾಗಿ ಹಾಗು ಬೇಲೂರಿನ ಶಿಲ್ಪಕಲಾ ಸೊಬಗಿನ ವರ್ಣನೆಯನ್ನು ಖಂಡಕಾವ್ಯದ ರೂಪದಲ್ಲಿ ಬರೆದು ಲೌಕಿಕ ಮತ್ತು ಆಧ್ಯಾತ್ಮಿಕ ಎರಡು ಪ್ರಕಾರಗಳಲ್ಲೂ ತಮ್ಮ ವಿಶಿಷ್ಟವಾದ ಛಾಪನ್ನು ರೂಢಿಸಿಕೊಂಡಿದ್ದಾರೆ. ಸರಳತೆ ಮತ್ತು ಸೌಂದರ್ಯದಿಂದ ಮೆರೆಯುವ ಪುಷ್ಟ ಸಂಕುಲದಂತೆ ಈ ಕವನ ಸಂಕಲನದಲ್ಲಿ ಗೋಚರಿಸುತ್ತದೆ ಎಂದು ತಿಳಿಸಿದರು.
Also read: ಡಾ. ವಿನಯ ಶ್ರೀನಿವಾಸ್ ರವರ ಕೃತಿಗೆ ಶ್ರೇಷ್ಠ ಸಾಹಿತ್ಯ ಹಸ್ತಪ್ರತಿ ಪ್ರಶಸ್ತಿ
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕಿ ಡಾ. ಎಚ್.ಎ. ಸತ್ಯವತಿ ಕವನ ಸಂಕಲನದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಉಮೇಶ್ ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post