ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡದ ರಾಜರತ್ನ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ Puneeth Rajkumar ಅವರ ಕೊನೆಯ ಚಿತ್ರ ಗಂಧದ ಗುಡಿಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ B S Yadiyurappa ಅವರು ಕುಟುಂಬ ಸಹಿತ ವೀಕ್ಷಿಸಿದರು.
ನಗರದ ಶಿವಪ್ಪನಾಯಕ ಮಾಲ್’ನ ಭಾರತ್ ಸಿನಿಮಾಸ್’ನಲ್ಲಿ ನಿನ್ನೆ ಕುಟುಂಬ ಸಹಿತ ಚಿತ್ರ ವೀಕ್ಷಿಸಿದ ಯಡಿಯೂರಪ್ಪ, ಸಂತಸ ವ್ಯಕ್ತಪಡಿಸಿದರು.

ಸೆಲ್ಫಿಗಾಗಿ ಮುಗಿಬಿದ್ದ ಯುವಜನತೆ
ಇನ್ನು, ಗಂಧದಗುಡಿ ಚಿತ್ರ ವೀಕ್ಷಣೆಗಾಗಿ ಮಾಲ್’ಗೆ ಆಗಮಿಸಿದ ಯಡಿಯೂರಪ್ಪ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಮಾಲ್’ಗೆ ಆಗಮಿಸಿದ ವೇಳೆ ಬಹಳಷ್ಟು ಮಕ್ಕಳು ಬಿಎಸ್’ವೈಗೆ ಕೈ ಕುಲುಕಿ ಸಂಭ್ರಮಿಸಿದರು. ಚಿತ್ರ ವೀಕ್ಷಿಸಿ ಹೊರಬಂದ ವೇಳೆ ಯುವಜನತೆ ಮಾಜಿ ಸಿಎಂ ಅವರನ್ನು ಮಾತನಾಡಿಸಿ, ಸೆಲ್ಫಿ ತೆಗೆದುಕೊಂಡರು.












Discussion about this post