ಕಲ್ಪ ಮೀಡಿಯಾ ಹೌಸ್ | ಆನವಟ್ಟಿ |
ಆನವಟ್ಟಿ ಆಂಜನೇಯ ದೇವಸ್ಥಾನದಲ್ಲಿ, 1926 ರಲ್ಲಿ ಪ್ರಾರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ನೂರು ವರ್ಷ ತುಂಬಿರುವ ಸಂಭ್ರಮ.
1948 ರಲ್ಲಿ ಶಾಂತಾಚಾರ್ ಮಡ್ಡಿ ಅವರು ಶಾಲೆಯ ಕೊಠಡಿಗಳ ನಿರ್ಮಾಣ, ಆಟದ ಮೈದಾನಕ್ಕಾಗಿ 8 ಎಕರೆ 36 ಗುಂಟೆ ಭೂದಾನ ನೀಡಿದರು. ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಉಜ್ವಲವಾಗಲು ಕಾರಣರಾದರು. ಗ್ರಾಮದ ಮಕ್ಕಳ ಶಿಕ್ಷಣಕ್ಕಾಗಿ ಭೂದಾನ ನೀಡಿರುವವರ ಸ್ಮಣಾರ್ಥವಾಗಿ, ಶಾಂತಾಚಾರ್ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣ ಮಾಡಲಾಯಿತು. 2018ರಲ್ಲಿ ಕೆಪಿಎಸ್ ಶಾಲೆಯಾಗಿ ಉನ್ನತೀಕರಣಗೊಂಡಿತು. 2020ರಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾದವು. ಅದೆ ವರ್ಷ ಇಂಗ್ಲಿಷ್ ಮಾಧ್ಯಮವು ಆರಂಭವಾಯಿತು.
ಶೈಕ್ಷಣಿಕ ವರ್ಷದಲ್ಲಿ 7 ನೇ ತರಗತಿ ವರೆಗೆ 480 ವಿದ್ಯಾರ್ಥಿಗಳು ಓದುತ್ತಿದ್ದಾರೆ. 18 ಕೊಠಡಿ, 21 ಖಾಯಂ ಶಿಕ್ಷಕರು, ಇಬ್ಬರು ಎಲ್ಕೆಜಿ, ಯುಕೆಜಿ ಶಿಕ್ಷಕಿಯರು, 5 ಅಡುಗೆ ಸಿಬ್ಬಂದಿ, ಇಬ್ಬರು ಸಹಾಯಕ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಅಗತ್ಯ ಮೂಲ ಸೌಕರ್ಯವಿದ್ದು, ಗುಣಮಟ್ಟದ ಶಿಕ್ಷಣದಿಂದ ಹೆಸರು ಮಾಡಿದೆ.
21 ಶಿಕ್ಷಕರ ಅವಶ್ಯಕತೆ ಇದ್ದ, ಶಾಲೆಯಲ್ಲಿ 10 ಜನ ಶಿಕ್ಷಕರ ಕೊರತೆ ಇತ್ತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು 10 ಜನ ಖಾಯಂ ಶಿಕ್ಷಕರನ್ನು ಒದಗಿಸಿಕೊಟ್ಟರು. ವಿವೇಕ ಯೋಜನೆ ಅಡಿಯಲ್ಲಿ 6 ಕೊಠಡಿಗಳನ್ನು ಮಂಜೂರು ಮಾಡಿಸಿ ವಿದ್ಯಾರ್ಥಿಗಳ ಪಾಠ-ಪ್ರಚವನಕ್ಕೆ ತೊಂದರೆಯಾಗದಂತೆ ಕಾಳಜಿ ವಹಿಸಿದ್ದಾರೆ.
ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಭೋಜನಾಲಯ, ಆಟದ ಮೈದಾನ ಅವಶ್ಯವಿದ್ದು, ಮುಂದಿನ ದಿನಗಳಲ್ಲಿ ಸಚಿವರು ಇವುಗಳಿಗೆ ಅನುದಾನ ಒದಗಿಸಿಕೊಂಡಬೇಕು ಎಂದು ಶಾಲಾ ಅಭಿವೃಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಮನವಿ ಮಾಡಿದ್ದಾರೆ.
ಶಾಲೆ ಆರಂಭವಾದ ವರ್ಷದಿಂದ, ಇಂದಿನ ವರೆಗೆ ಸೇವೆ ಸಲ್ಲಿಸಿರುವ ಎಲ್ಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಜನಪ್ರತಿನಿಧಿಗಳು, ದಾನಿಗಳಿಂದಾಗಿ ಶಾಲೆಗೆ ಒಳ್ಳೇಯ ಹೆಸರು ಬಂದಿದೆ- ಮುಖ್ಯ ಶಿಕ್ಷಕ ಬಸವರಾಜ ಆರ್. ಮಾಸೂರು.
ಸಚಿವ ಮಧು ಬಂಗಾರಪ್ಪ ಅವರು ಕೆಪಿಎಸ್ನ ಮೂರು ಹಂತದ ಶಾಲೆಗೆ ಒಟ್ಟು 26 ಕಟ್ಟಡಗಳನ್ನು ಮಂಜೂರು ಮಾಡಿಸಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಸಚಿವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಬೇಕು ಎಂಬುವುದು ನನ್ನ ಹಾಗೂ ಸಮಿತಿ ಸದಸ್ಯರ ಮತ್ತು ಪೋಷಕರ ಅಪೇಕ್ಷೆಯಾಗಿದೆ ಹಾಗಾಗಿ ಸಚಿವರು ನೀಡುವ ದಿನಾಂಕಕ್ಕಾಗಿ ನಾವು ಕಾಯುತ್ತಿದ್ದೇವೆ- ಕಾಲೇಜು ಅಭಿವೃಧಿ ಸಮಿತಿ ಉಪಾಧ್ಯಕ್ಷ ನಾಗರಾಜ ಶುಂಠಿ.
ಶಾಲೆಯ ನೂರರ ಸಂಭ್ರಮದಲ್ಲಿ ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಿ ನಮ್ಮ ಊರಿನ, ನಮ್ಮ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಹೆಮ್ಮೆಯಿಂದ ಆಚರಿಸೋಣ ಎಂದು ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















