ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ವಾಗ್ದಾನದಂತೆ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಪಶುಗಳ ಸಂರಕ್ಷಣೆ ಮಸೂದೆ 2020 ನಿನ್ನೆ ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ.
ನಿನ್ನೆ ನಡೆದ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರ ಭಾರೀ ವಿರೋಧದ ನಡುವೆಯೇ ನೂತನ ಮಸೂದೆಗೆ ಅನುಮೋದನೆ ಪಡೆಯಲಾಗಿದ್ದು, ಈ ಮೂಲಕ ರಾಜ್ಯದಲ್ಲಿದ್ದ ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ಅಷ್ಟಕ್ಕೂ ನೂತನ ಕಾನೂನಿನಲ್ಲಿ ಏನಿದೆ?
- ಮಸೂದೆಯ ಪ್ರಕಾರ ಜಾನುವಾರು ಎಂದರೆ ಹಸು, ಕರು, ಎತ್ತು, ಎಮ್ಮೆ
- ಜಾನುವಾರುಗಳ ಹತ್ಯೆ ಮಾಡಿದರೆ 3ರಿಂದ 7 ವರ್ಷದವರೆಗೂ ಕಠಿಣ ಜೈಲು ಶಿಕ್ಷೆ
- ಮೊದಲ ಬಾರಿ 50 ಸಾವಿರ ರೂಪಾಯಿಗಳಿಂದ 5 ಲಕ್ಷ, ಎರಡನೆಯ ಸಲ 1 ಲಕ್ಷದಿಂದ 10 ಲಕ್ಷದವರೆಗೆ ದಂಡ
ಗೋ ಹತ್ಯೆ ಅರಿವಿನ ಅಪರಾಧ - ಪ್ರಕರಣಗಳನ್ನು ವಿಲೇವಾರಿ ಮಾಡಲು ವಿಶೇಷ ನ್ಯಾಯಾಲಯಗಳನ್ನು ರಚಿಸುವಂತೆ ಮಸೂದೆ ಶಿಫಾರಸ್ಸು
- ಇತರ ರಾಜ್ಯಗಳಿಗೆ ಗೋವುಗಳನ್ನು ಸಾಗಣೆ ಮಾಡುವಂತಿಲ್ಲ
- ವಶಪಡಿಸಿಕೊಂಡ ಗೋಮಾಂಸವನ್ನು ಎಸೆಯಬೇಕೆ ಹೊರತು ಬಳಸುವಂತಿಲ್ಲ
- ಸಬ್ ಇನ್ಸ್ಪೆಕ್ಟರ್ ಅಥವಾ ಉನ್ನತ ಹುದ್ದೆಯ ಪೊಲೀಸ್ ಅಧಿಕಾರಿಗೆ ಕಳ್ಳಸಾಗಣೆ ಮಾಡಲು ಅಥವಾ ಕೊಲ್ಲಲು ಹೊರಟಿರುವ ಹಸುಗಳನ್ನು ಶೋಧಿಸಲು ಮತ್ತು ವಶಪಡಿಸಿಕೊಳ್ಳಲು ಅಧಿಕಾರ
- ವಶಪಡಿಸಿಕೊಂಡ ನಂತರ, ಅಧಿಕಾರಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆ ವರದಿ ಮಾಡಬೇಕು
- 13 ವರ್ಷಕ್ಕಿಂತ ಮೇಲಿನ ಎಮ್ಮೆಗಳನ್ನು ಕೊಲ್ಲಲು ಅನುಮತಿ
- ಅನಾರೋಗ್ಯ ಮತ್ತು ಇತರ ಗಂಭೀರ ಕಾರಣಗಳಿಗಾಗಿ ಗೋವನ್ನು ಹತ್ಯೆ ಮಾಡಬೇಕೆಂದರೆ ಇನ್ನು ಮುಂದೆ ಪಶು ಸಂಗೋಪನಾ ಇಲಾಖೆಯಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post