ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ದುರ್ಯೋಧನನು ಯುದ್ಧದ ಪ್ರಾರಂಭದಲ್ಲಿಯೇ ಪಾಂಡವರ ಸೈನ್ಯದ ಬಲವನ್ನು ಕಂಡು ಹೆದರಿದ್ದನು. ಆದರೂ ಕೂಡ ತನ್ನ ದುರಾಸೆಯಿಂದ ಹಾಗೂ ಭೀಷ್ಮಚಾರ್ಯ, ದ್ರೋಣಾಚಾರ್ಯ, ಕೃಪಾಚಾರ್ಯ, ಕರ್ಣ ಮೊದಲಾದವರ ಮೇಲಿನ ನಂಬಿಕೆಯಿಂದ ಯುದ್ಧಕ್ಕೆ ಸಿದ್ಧನಾಗಿದ್ದನು. ಇದನ್ನು ಭಗವದ್ಗೀತೆಯಲ್ಲಿ ಬಂದಿರತಕ್ಕಂತಹ ದುರ್ಯೋಧನನ ಮಾತುಗಳಿಂದಲೇ ತಿಳಿಯಬಹುದು. ದುರ್ಯೋಧನನು ಮೊದಲು ದ್ರೋಣಾಚಾರ್ಯರ ಬಳಿ ಬಂದು ಹೇಳುವಂತಹ ಮಾತು;
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ|
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಂ||
ಆ ನಮ್ಮ ಭೀಷ್ಮಾಚಾರ್ಯರಿಂದ ರಕ್ಷಿತವಾದ ಸೇನೆ ಪರಿಪೂರ್ಣವಾಗಿಲ್ಲ. ಆದರೆ ಭೀಮಸೇನನಿಂದ ರಕ್ಷಿತವಾದ ಈ ಪಾಂಡವ ಸೇನೆಯು ಪರಿಪೂರ್ಣವಾಗಿ ಸಮರ್ಥವಾಗಿದೆ ಎಂಬುದಾಗಿ.


(ನಾಳಿನ ಲೇಖನ: ಕೃಷ್ಣನಿಗೆ ಬೆಣ್ಣೆಯ ಮೇಲೆ ಆಸೆ ಇತ್ತೇ?)









Discussion about this post