ಅಥಣಿ: ಜೈನರ ಶಾಂತಿ ಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು.
ಇಪ್ಪತ್ತನೆಯ ಶತಮಾನ ಸ್ತವ ಪ್ರಥಮಚಾರ್ಯ ಚಾರಿತ್ರ್ಯ ಚಕ್ರವರ್ತಿ 108 ಶ್ರೀಶಾಂತಿ ಸಾಗರ ಮುನಿಮಹಾರಾಜ ರವರ ಮನೆಯಿಂದ ಅದ್ದೂರಿಯಿಂದ ಆಚರಿಸಲಾಯಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾಕ್ಟರ್ ಬಾಳಾಸಾಹೇಬ ಲೋಕಾಪುರ ಮಾತನಾಡಿ, ಪರಂಪರೆ ನಾಶವಾಗುವ ಸಂದರ್ಭದಲ್ಲಿ ಮಿನಿ ದೀಕ್ಷಾ ಪಡೆದ ಒಳ್ಳೆಯ ಚಾರಿತ್ರೆ ಮಹಾರಾಜರು ಜೈನ ಧರ್ಮದ ಪ್ರಚಾರವನ್ನು ಇಡೀ ದೇಶದ ತುಂಬಾ ಪಾದಯಾತ್ರೆ ಮೂಲಕ ಸುಮಾರು 3,500 ಕಿಲೋಮೀಟರ್ ದೂರ ಕ್ರಮಿಸಿದ್ದಾರೆ. ಅವರು ಕಠೋರ ತಪಸ್ಸಿನಿಂದ ಅನೇಕ ಪವಾಡಗಳ ಕೂಡ ಮಾತನಾಡುವರು ಎಂದರು.
ಅಧ್ಯಕ್ಷತೆಯನ್ನು ಚಂದ್ರಕಾಂತ್ ಗೊಂಗಡಿ ವಹಿಸಿದ್ದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಉಪಾಧ್ಯಕ್ಷೆ ಜಯಶ್ರೀ ಹಾಗೂ ಹಿರಿಯ ಶ್ರಾವಕಿ ರೂಪವತಿ ರಾವ್ ಸಾಹೇಬ್ ಪಾಟೀಲ್, ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್ ಯಲಗೋದ್ರಿ ಮಾತನಾಡಿದರು. ಅಶೋಕ್ ರೊಟ್ಟಿ ಮರಡಿ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಶಾಂತಿ ಸಾಗರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಂದಿರದಲ್ಲಿ ವಿಶೇಷ ಅಭಿಷೇಕ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ನಗರದಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.
Discussion about this post