ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗುವ Ayodhya Ramalalla Prathishtapane ಮೂಲಕ ಕೋಟ್ಯಂತರ ಹಿಂದೂಗಳ 500 ವರ್ಷಗಳ ಕನಸು ಇಂದು ನನಸಾಗಿದ್ದು, ಲಕ್ಷಾಂತರ ಮಂದಿಯ ತ್ಯಾಗ ಇಂದು ಫಲ ನೀಡಿದೆ.
ನಿಗದಿಯಂತೆ ಇಂದು ಅಯೋಧ್ಯೆಯಲ್ಲಿ ಬಾಲರಾಮನ Baala Rama ಪ್ರಾಣ ಪ್ರತಿಷ್ಠಾಪನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ PM Narendra Modi ಅವರ ಯಜಮಾನಿಕೆಯಲ್ಲಿ ಸರ್ವ ವಿಧಿವಿಧಾನಗಳು ಸಾಂಗವಾಗಿ ನಡೆದವು.
ಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರತಿಷ್ಠಾಪನಾ ವಿಧಿ ಪೂರ್ಣಗೊಳ್ಳುತ್ತಿದ್ದಂತೆಯೇ ವೇದಘೋಷಗಳು ಹಾಗೂ ಪಾಂಚಜನ್ಯ ಮೊಳಗಿತು. ಸಾಂಪ್ರದಾಯಿಕವಾಗಿ ವಾದ್ಯಗಳ ನಾದ ಮೇಳೈಸಿತು. ಸರ್ವಾಭರಣಗಳಿಂದ ಭೂಷಿತನಾದ ರಾಮಚಂದ್ರ ಪ್ರಭು ನೂತನ ಮಂದಿರದಲ್ಲಿ ವಿರಾಜಮಾನನಾದನು.
Also read: ರಾಮರಾಜ್ಯಕ್ಕೆ ಮೊದಲ ಹೆಜ್ಜೆ | ಮಂದಿರವಲ್ಲೇ ಕಟ್ಟಿದೆವು, ರಾಮಲಲ್ಲಾ ಪ್ರತಿಷ್ಠೆಯಾದನು
ನಂತರ ಪ್ರಧಾನಿ ನರೇಂದ್ರ ಮೋದಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, Pejawara shri Vishwaprasanna Thirtha ಆರ್’ಎಸ್’ಎಸ್ ಮುಖ್ಯಸ್ಥ ಮೋಹನ್ ಭಾಗವತ್ RSS Mohan Bhagawath ಸೇರಿ ಹಲವು ಗಣ್ಯರು ಶ್ರೀ ರಾಮಚಂದ್ರ ದೇವರಿಗೆ ವಿವಿಧ ಬಗೆ ಮಂಗಳಾರತಿ ನೆರವೇರಿಸಿದರು.
ಮಂದಿರ ಮೇಲ್ಬಾಗದಲ್ಲಿ ಎರಡು ಹೆಲಿಕಾಪ್ಟರ್’ಗಳ ಮೂಲಕ ಪುಷ್ಪವೃಷ್ಟಿ ನೆರವೇರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post