ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಳ್ಳಾರಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವರ್ಲ್ಡ್ ವಿಷನ್ ಮತ್ತು ಅಗ್ನಿಶಾಮಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಗ್ನಿ ದುರಂತಗಳ ಬಗ್ಗೆ ಅರಿವು ಮತ್ತು ಅಗ್ನಿ ಅನಾಹುತಗಳು ತಡೆಯುವ ದಿನಾಚಾರಣೆ ನಿಮಿತ್ತ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ರೆಡ್ ಕ್ರಾಸ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
2010ರ ಫೆ.23ರಂದು ಬೆಂಗಳೂರು ನಗರದ ಕಾಲ್ಟನ್ ಟೋವರ್ನಲ್ಲಿ ನಡೆದ ಅಗ್ನಿದುಂತದಲ್ಲಿ ಅನೇಕ ಜನರ ಪ್ರಾಣವನ್ನು ಕಳೆದುಕೊಂಡವರ ನನಪಿನಲ್ಲಿ ಈ ದಿನಚಾರಣೆಯನ್ನು ಆಚರಿಸಲಾಗುತ್ತಿದ್ದು, ಪ್ರಥಮ ಚಿಕಿತ್ಸೆ, ಅಗ್ನಿ ದುರಂತಗಳ ಬಗ್ಗೆ ವಿಶೇಷವಾಗಿ ಅರಿವು ಮೂಡಿಸಲಾಯಿತು.
ಕಾರ್ಯಗಾರದಲ್ಲಿ ಬಳ್ಳಾರಿ ತಾಲೂಕಿನ ಸುಮಾರು 27 ಹಳ್ಳಿಗಳ ಗ್ರಾಮ ಪಂಚಾಯತಿ ಸದಸ್ಯರುಗಳು ತರಬೇತಿ ಪಡೆದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎ. ಷಕೀಬ್ ಮತ್ತು ಸರ್ವ್ ತರಬೇತುದಾರ ಬೇಪಾರ್ ಮಹಮ್ಮದ್ ಇಜಾಜ್ ಅವರು ವಿಶೇಷ ಉಪನ್ಯಾಸ ನೀಡಿದರು.
ಬಸವರಾಜ, ಅಗ್ನಿಶಾಮಕ ಅಧಿಕಾರಿಗಳು, ವಲ್ಡ್ ವಿಷನ್ನ ಪ್ರೇಮಲತಾ, ಪ್ರೋಜೆಕ್ಟ್ ಆಫೀಸರ್, ವಿವಿಧ ಗ್ರಾಮಗಳ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post