ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಿ ಆರ್ಟ್ ಆಫ್ ಲಿವಿಂಗ್ The Art of Living ಶಿವಮೊಗ್ಗ ಶಾಖೆವತಿಯಿಂದ ಶ್ರೀ ರವಿಶಂಕರ್ ಗುರೂಜಿಯವರ Shri Ravishankar Guruji 70ನೇ ಜನ್ಮೋತ್ಸವ ವರ್ಷಾಚರಣೆ ಪ್ರಯುಕ್ತ, ಶಿವಮೊಗ್ಗ ನಗರದಲ್ಲಿ ಏ.14ರಿಂದ ಏ.19ರ ವರೆಗೆ ಆರು ದಿನಗಳ ವಿಶೇಷ ಸುದರ್ಶನ ಕ್ರಿಯಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಹಿರಿಯ ತರಬೇತುದಾರರಾದ ಹೆಚ್.ಡಿ.ಚಂದ್ರಹಾಸ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದಿನ ವೇಗದ ಜೀವನಶೈಲಿಯಲ್ಲಿ ಒತ್ತಡ, ಆತಂಕ, ಮಾನಸಿಕ ಅಶಾಂತಿ ಹಾಗೂ ದೈಹಿಕ ದೌರ್ಬಲ್ಯವು ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ, ವ್ಯಕ್ತಿಯ ಒಳಗಿನ ಶಾಂತಿ, ಆನಂದ ಮತ್ತು ಸಮತೋಲನವನ್ನು ಪುನಃ ಸ್ಥಾಪಿಸಲು ವಿಶ್ವಪ್ರಸಿದ್ಧ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈ ಸಂದರ್ಭದಲ್ಲಿ ಜೀವನ ಕಲೆ-ಸುದರ್ಶನ ಕ್ರಿಯಾಶಿಬಿರ ಎಲ್ಲರಿಗೂ ಅವಶ್ಯವಿದೆ ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸರಳ ಮತ್ತು ಸುಲಭವಾಗಿ ಅನುಸರಿಸಬಹುದಾದ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ತಂತ್ರಗಳು, ವೈಜ್ಞಾನಿಕವಾಗಿ ಸಾಬೀತಾದ ಸುದರ್ಶನ ಕ್ರಿಯಾ,ಜೀವನ ನಿರ್ವಹಣೆಗೆ ಪ್ರಾಯೋಗಿಕ ಮಾರ್ಗದರ್ಶನ ಸಂತೋಷಕರ ಮತ್ತು ಒತ್ತಡರಹಿತ ಜೀವನದ ಅನುಭವ. ಪ್ರಮುಖ ಪ್ರಯೋಜನಗಳು: ಸುದರ್ಶನ ಕ್ರಿಯೆಯು ಕೇವಲ ಆರೋಗ್ಯವರ್ಧಕ ವಿಧಾನವಲ್ಲ, ಇದು ಜೀವನದ ಗುಣಮಟ್ಟವನ್ನು ಸುಧಾರಿಸುವ ಸಂಪೂರ್ಣ ವಿಧಾನವಾಗಿದೆ. ನಿಯಮಿತ ಅಭ್ಯಾಸದಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಮನಸ್ಸಿಗೆ ಶಾಂತಿ ಮತ್ತು ಸ್ಪಷ್ಟತೆ ದೊರೆಯುತ್ತದೆ. ಏಕಾಗ್ರತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ದೈಹಿಕ ಆರೋಗ್ಯ, ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಉತ್ತಮ ನಿದ್ರೆ ಮತ್ತು ಉತ್ಸಾಹಭರಿತ ಜೀವನ ಸಾಧ್ಯವಾಗುತ್ತದೆ ಎಂದರು.
ಸಮಾರೋಪ ಸಮಾರಂಭ : ಏಪ್ರಿಲ್ 19ರಂದು ಬೆಳಿಗ್ಗೆ 10 ಗಂಟೆಗೆ ಜ್ಞಾನಕ್ಷೇತ್ರದ ಧ್ಯಾನ ಮಂದಿರದಲ್ಲಿ ಗುರು ಪೂಜೆ ಹಾಗೂ ದಿವ್ಯ ಸತ್ಸಂಗ ನಡೆಯಲಿದ್ದು, ಇದು ಭಾಗವಹಿಸುವವರಿಗೆ ಆಧ್ಯಾತ್ಮಿಕ ಅನುಭವದ ಮಹೋತ್ಸವವಾಗಲಿದೆ.
6 ದಿನಗಳ ಈ ಶಿಬಿರಕ್ಕೆ ಬೇರೆ ಸಂದರ್ಭಗಳಲ್ಲಿ 1200 ರೂ. ಆಜೀವ ಸದಸ್ಯ ಶುಲ್ಕವಿದ್ದು, ಗುರೂಜಿಯವರ ಹುಟ್ಟುಹ್ಬದ ಪ್ರಯುಕ್ತ ರಿಯಾಯಿತಿ ರೂ. 800 ನಿಗಧಿಪಡಿಸಲಾಗಿದೆ. ಸದಸ್ಯರಾದವರು ಮುಂದಿನ ಸಂಸ್ಥೆಯ ಎಲ್ಲಾ ಶಿಬಿರಗಳಲ್ಲಿ ಉಚಿತವಾಗಿ ಭಾಗವಹಿಸಿ ಪ್ರಯೋಜನ ಪಡೆಯಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ತರಬೇತುದಾರರಾದ ಶಬರೀಶ್ ಕಣ್ಣನ್, ಕೃಷ್ಣಪ್ಪ ಪಿ.ಆರ್., ಶಶಿಭೂಷಣ್ ಶಾಸ್ತ್ರಿ, ಶಿವಮೂರ್ತಿ, ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
