ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜನಪದ, ಶಾಸ್ತ್ರೀಯ ನೃತ್ಯ, ನಾಟಕ ಯಾವುದೇ ಆಗಲಿ ಒಂದು ಕಲೆಯನ್ನು ಕಲಿತರೂ ಕೂಡ ಆ ಕಲೆಯು ಆ ವ್ಯಕ್ತಿಗೆ ಮಾನವೀಯ ಮೌಲ್ಯಗಳು ಕಲಿಸುತ್ತದೆ ಎಂದು ಡಾ. ಜೋಗಿಲ ಸಿದ್ದರಾಜು ಅಭಿಪ್ರಾಯಪಟ್ಟರು.
ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನದಲ್ಲಿ ಸಂಗೀತ ನೃತ್ಯ ಭಾರತೀಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ನಾಲ್ಕು ಪುಟ್ಟ ಕಿಶೋರಿಗಳಾದ ಶ್ರೀನಿಥಿ ಕೆ.ಎಸ್., ವಿಭಾ ವಿಕ್ರಂ, ಸ್ತೋತ್ರಿಕಾ ಮಹಾದೇವ್ ಮತ್ತು ಸಾನ್ವಿ ರಾಜಶೇಖರ್ ಇವರುಗಳ “ಗೆಜ್ಜೆಪೂಜೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಂಗೀತ ನೃತ್ಯ ಭಾರತೀಯ ಅಕಾಡೆಮಿಯ ಸಂಸ್ಥಾಪಕರಾದ ಪದ್ಮ ಹೇಮಂತ್, ಹೇಮಂತ್ ಮತ್ತು ಶೀತಲ್ ರವರು ನಾಲ್ಕು ಜನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಗೆಜ್ಜೆಪೂಜೆಯನ್ನು ಆಯೋಜಿಸಿದ್ದರು. ನಾಲ್ಕು ಜನ ವಿದ್ಯಾರ್ಥಿಗಳು ಬಹಳ ಅಚ್ಚುಕಟ್ಟಾಗಿ ತಾವು ಕಲಿತ ಪ್ರಸ್ತುತಿಗಳನ್ನು ಪ್ರದರ್ಶನಗೊಳಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post