ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಲ್ಲೇಶ್ವರದ ಈಜುಕೊಳದ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ಕಳೆದ ಒಂದು ವಾರದಿಂದ ಜರುಗುತ್ತಿರುವ ಶ್ರೀ ಪುರಂದರದಾಸರ ಆರಾಧನಾ ಕಾರ್ಯಕ್ರಮಗಳ ಸರಣಿಯಲ್ಲಿ ಜ.23, ಗುರುವಾರ ಕು. ಅಹಿಕಾ ಅವರಿಂದ ರಾಯರಿಗೆ ಪ್ರಿಯವಾದ ವೀಣಾ ವಾದನ ಕಾರ್ಯಕ್ರಮ ನಡೆಯಿತು.
ಕುಮಾರನ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಅಹಿಕಾ (ಶ್ರೀಮತಿ ಕೃತಿಕಾ ಮತ್ತು ನಾಗದೀಪ್ ಅವರ ಪುತ್ರಿ) ಕರ್ನಾಟಕ ಸರ್ಕಾರದಿಂದ ಕೊಡಲ್ಪಡುವ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ಪಡೆದಿದ್ದಾಳೆ. ನಟನ ತರಂಗಿಣಿ ಸಂಗೀತ ಮತ್ತು ನೃತ್ಯ ಶಾಲೆಯ ಗುರುಗಳಾದ ವಿದುಷಿ ವೈ.ಜಿ. ಪರಿಮಳ ಮತ್ತು ವಿದುಷಿ ವೈ.ಜಿ. ಶ್ರೀಲತಾ ಅವರ ನಿರ್ದೇಶನದಲ್ಲಿ ನೃತ್ಯ, ಸಂಗೀತ ಮತ್ತು ವೀಣೆ ಕಲಿಯುತ್ತಿದ್ದಾರೆ.
Also read: ಜ.27ರಂದು 25 ಅಡಿ ಎತ್ತರದ ಕನ್ನಡಾಂಬೆ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ
ವೀಣೆ ನುಡಿಸುವುದಲ್ಲದೇ ಭರತನಾಟ್ಯ ಮತ್ತು ಸಂಗೀತ ಕಾರ್ಯಕ್ರಮ ನೀಡುವುದರೊಂದಿಗೆ ಓದಿನಲ್ಲೂ ಮುಂದಿದ್ದಾಳೆ. ವೀಣಾ ವಾದನ ಕಾರ್ಯಕ್ರಮವನ್ನು ಮೊದಲಿಗೆ “ಗಜವದನ ಬೇಡುವೆ” ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಆರಂಭಿಸಿ, “ರೋಗಹರನೇ ಕೃಪಾಸಾಗರ”, “ದಯಮಾಡೋ ರಂಗ”, “ಗೋವಿಂದ ನಿನ್ನ ನಾಮವೇ ಚಂದ”, “ನಾರಾಯಣ ನಿನ್ನ ನಾಮದ ಸ್ಮರಣೆಯ”, “ಪಿಳ್ಳಂಗೋವಿಯ ಚೆಲ್ವ ಕೃಷ್ಣನ”, “ವೆಂಕಟಾಚಲ ನಿಲಯಂ”, “ಪ್ರೀಣಯಾಮೋ ವಾಸುದೇವಂ”, “ವಂದೇ ವಂದ್ಯಮ್”, “ಪಾಲಯಾಚ್ಯುತ”, “ಭಾಗ್ಯದ ಲಕ್ಷ್ಮಿ ಬಾರಮ್ಮ”, ಶ್ರೀ ವಾದಿರಾಜರ ದಶಾವತಾರ ಸ್ತುತಿಯಾದ “ಪ್ರೋಷ್ಟೀಶ ವಿಗ್ರಹ” ಹೀಗೆ ಇನ್ನೂ ಹಲವಾರು ಅಪರೂಪದ ಕೃತಿಗಳನ್ನು ನುಡಿಸಿ, ಪ್ರೇಕ್ಷಕರ ಮನ ಗೆದ್ದಳು ಅಹಿಕಾ. ಈ ಕಾರ್ಯಕ್ರಮಕ್ಕೆ ಸಹವಾದ್ಯದಲ್ಲಿ ಸೀತಾರಾಮ್ (ಪಿಟೀಲು), ವರದರಾಜ್ (ಮೃದಂಗ) ಸಾಥ್ ನೀಡಿದರು. ವಿಜಯ ವಿಠ್ಠಲ ಭಜನಾ ಮಂಡಳಿಯ ಅಧ್ಯಕ್ಷೆ ರಮಾಮಣಿ ವಂದನಾರ್ಪಣೆ ಮಾಡಿದರು ಎಂದು ಶ್ರೀಮಠದ ಗೌರವ ಕಾರ್ಯದರ್ಶಿ ನರಹರಿ ರಾವ್ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post