ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಂದಿರಾನಗರದ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟ Blast in Rameshwaram cafe ಐಇಡಿಯಿಂದ ಆಗಿದ್ದೇ ಎಂಬುದು ವರದಿ ಬಂದ ನಂತರವಷ್ಟೇ ಖಚಿತಗೊಳ್ಳಬೇಕಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ Home Minister G Parameshwar ಹೇಳಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಕೆಫೆಯಲ್ಲಿ ಬ್ಲಾಸ್ಟ್ ಆಗಿದೆ. ಯಾವುದರಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿಲ್ಲ.
ಬಾಂಬ್ ನಿಷ್ಕ್ರೀಯ ದಳ, ಅಧಿಕಾರಿಗಳ ತಂಡ, ಎಫ್’ಎಸ್’ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿ ಬಂದ ನಂತರವಷ್ಟೇ ಸ್ಫೋಟದ ಮೂಲ ತಿಳಿದುಬರಲಿದೆ ಎಂದಿದ್ದಾರೆ.
Also read: ಬೆಂಗಳೂರು | ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಆಗಿದ್ದು ಐಇಡಿ? ಎನ್’ಐಎ ಎಂಟ್ರಿ
ಘಟನೆಯಲ್ಲಿ 8-9 ಜನರಿಗೆ ಗಾಯಗಳಾಗಿದ್ದು, ಯಾರ ಸ್ಥಿತಿಯೂ ಸಹ ಗಂಭೀರವಾಗಿರುವ ಕುರಿತು ಮಾಹಿತಿಯಿಲ್ಲ ಎಂದರು.
ಬ್ಯಾಗ್’ನಲ್ಲಿ ಇರಿಸಿ ಸ್ಪೋಟ ಮಾಡಲಾಗಿದೆ ಎನ್ನುವುದು ಕೇವಲ ಮಾಹಿತಿ ಅಷ್ಟೇ. ಐಇಡಿ ಸ್ಫೋಟವಾಗಿದೆ ಎಂಬ ಕುರಿತಾಗಿ ಮಾಹಿತಿ ಇಲ್ಲ. ಎಫ್’ಎಸ್’ಎಲ್ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ. ವರದಿ ಬಂದ ನಂತರವಷ್ಟೇ ಖಚಿತ ಮಾಹಿತಿ ದೊರೆಯಲಿದೆ. ಒಂದು ವೇಳೆ ಐಇಡಿ ಸ್ಪೋಟದ ಕುರುಹು ದೊರೆತರೆ ಮುಂದಿನ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post