ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪ್ರಕಾಶನಗರ ಇವುಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 15 ರಿಂದ 18ರವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರಹೀಗಿದೆ:
- ಏಪ್ರಿಲ್ 15, ಮಂಗಳವಾರ: ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘದ ಸದಸ್ಯರಿಂದ ಭಜನೆ ಮತ್ತು ಶ್ರೀ ರಾಮವಿಠಲಾಚಾರ್ಯರಿಂದ ಶ್ರೀ ವಾದಿರಾಜರ ವಿರಚಿತ “ರುಕ್ಮಿಣೀಶ ವಿಜಯ” ಧಾರ್ಮಿಕ ಪ್ರವಚನ. (ಸಮಯ: ಸಂಜೆ 6 ರಿಂದ 8)
- ಏಪ್ರಿಲ್ 16, ಬುಧವಾರ : ಗಾಂಧಿಬಜಾರಿನ ಶ್ರೀ ವ್ಯಾಸತೀರ್ಥ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಮತ್ತು ಶ್ರೀ ರಾಮವಿಠಲಾಚಾರ್ಯರಿಂದ ಶ್ರೀ ವಾದಿರಾಜರ ವಿರಚಿತ “ರುಕ್ಮಿಣೀಶ ವಿಜಯ” ಧಾರ್ಮಿಕ ಪ್ರವಚನ. (ಸಮಯ ; ಸಂಜೆ 6 ರಿಂದ 8).
- ಏಪ್ರಿಲ್ 17, ಗುರುವಾರ : “ಹರಿನಾಮ ಸಂಕೀರ್ತನೆ”. ಗಾಯನ : ಕು. ಅಹಿಕಾ ನಾಗದೀಪ್, ಪಿಟೀಲು : ಶ್ರೀ ಸೀತಾರಾಮ್, ಮೃದಂಗ : ಶ್ರೀ ಪ್ರಣವ್. (ಸಮಯ : ಸಂಜೆ 7 ರಿಂದ 8-30).
- ಏಪ್ರಿಲ್ 18, ಶುಕ್ರವಾರ : ವಿಜಯನಗರದ ಶ್ರೀ ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಮತ್ತು ಶ್ರೀ ರಾಮವಿಠಲಾಚಾರ್ಯರಿಂದ ಶ್ರೀ ವಾದಿರಾಜರ ವಿರಚಿತ “ರುಕ್ಮಿಣೀಶ ವಿಜಯ” ಧಾರ್ಮಿಕ ಪ್ರವಚನ. (ಸಮಯ : ಸಂಜೆ 6 ರಿಂದ 8).
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post