ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ `ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ-2024′ ರ 19 ನೇ ಆವೃತ್ತಿಯು ಜ.20ರಂದು ನಡೆಯಲಿದೆ.
ಅಂದು ಸಂಜೆ 6 ಗಂಟೆಗೆ ನಗರದ ವೈಯ್ಯಾಲಿಕಾವಲ್’ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಲಾಪ್ರಿಯರಿಗೆ ರಸದೌತಣ ಉಣಬಡಿಸಲಿದೆ.
ಅಂದು ಅನುರಾಧಾ ವಿಕ್ರಾಂತ ರವರ ನೇತೃತ್ವದಲ್ಲಿ ದೃಷ್ಟಿ ನೃತ್ಯ ತಂಡ, ಪ್ರವೀಣ್ ಕುಮಾರ್ ರವರ ನೇತೃತ್ವದಲ್ಲಿ ಚಿತ್ಕಾಲ ನೃತ್ಯ ತಂಡ, ಮನೋಜ್ಞ ಬಾಲರಾಜು ರವರ ನೇತೃತ್ವದಲ್ಲಿ ಆಯನ ನೃತ್ಯ ತಂಡ, ಸಹಾ ನೃತ್ಯ ತಂಡ – ಕಲಾವಿದರು : ಪದ್ಮಿನಿ ಉಪಾಧ್ಯ, ಸಂಧ್ಯಾ ಉಡುಪ, ಗೌರಿ ಸಾಗರ್, ದಿವ್ಯಾ ಪ್ರಭಾತ್ ಅವರುಗಳ ಕಾರ್ಯಕ್ರಮ ನಡೆಯಲಿದೆ.
ಈ ಉತ್ಸವದ ಸಂದರ್ಭದಲ್ಲಿ ಶ್ರೇಷ್ಠ ಭಾರತ ನಾಟ್ಯ ಕಲಾವಿದರಾದ ವಿದ್ವಾನ್ ಗುರು ಎಂ.ಆರ್. ಕೃಷ್ಣಮೂರ್ತಿ ಅವರಿಗೆ ನೃತ್ಯ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಗಾಗಿ ದೃಷ್ಟಿ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಈ ಕುರಿತಂತೆ ಮಾಹಿತಿ ನೀಡಿರುವ ಉತ್ಸವದ ನಿರ್ದೇಶಕರದ ಅನುರಾಧ ವಿಕ್ರಾಂತ್ ಹಾಗೂ ಟಿ.ಎಂ. ವಿಕ್ರಾಂತ್, ಈ ನೃತ್ಯೋತ್ಸವ ಪ್ರಾರಂಭವಾದಾಗಿನಿಂದಲೂ ಯಶಸ್ವಿಯಾಗಿ ನಡೆಯುತ್ತಿದ್ದು 2024ರ 19 ನೇ ‘ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ’, ‘ನೃತ್ಯ ಸಂದೇಶ’ ಎಂಬ ಶ್ರೀರ್ಷಿಕೆಯೊಂದಿಗೆ ನೃತ್ಯ ಮಾದ್ಯಮವನ್ನು ಬಳಸಿಕೊಂಡು ಮಾನವೀಯ ಮೌಲ್ಯಗಳು ಹಾಗೂ ತತ್ವಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಪ್ರತಿಯೊಂದು ನೃತ್ಯ ತಂಡವೂ ಸಮಾಜದ ಬಗ್ಗೆ ಆಳವಾಗಿ ಆಲೋಚಿಸಲು ಪ್ರೇಕ್ಷಕರನ್ನು ಪ್ರೇರೇಪಿಸುವಂತೆ ಪ್ರಸ್ತುತಗೊಳ್ಳಲಿವೆ. ನೃತ್ಯವನ್ನು ಮನರಂಜನೆ ಹಾಗೂ ಶಿಕ್ಷಣದ ಮಾದ್ಯಮವಾಗಿ ಬಳಸಿ ಸಾಮಾಜಿಕ ಹಾಗು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದು ದೃಷ್ಟಿ ನೃತ್ಯೋತ್ಸವದ ಉದ್ದೇಶವಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post