ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೊಬೈಲ್ ಚಾರ್ಜ್’ಗೆ #Mobile Charge ಹಾಕುವ ವೇಳೆ ಕರೆಂಟ್ ಶಾಕ್ #Current Shock ತಗುಲಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ರಾಜಾಜಿನಗರದ ಮಂಜುನಾಥ ನಗರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಪಿಜಿಯಲ್ಲಿ ವಾಸ ಮಾಡುತ್ತಿದ್ದ ಬೀದರ್ ಮೂಲದ ಶ್ರೀನಿವಾಸ್(24) ಎಂದು ಗುರುತಿಸಲಾಗಿದೆ.
Also read: ಉತ್ತಮ ಸಹವಾಸದಿಂದ ಜೀವನದಲ್ಲಿ ಉನ್ನತಿ | ಯುವಕರಿಗೆ ಎಸ್’ಪಿ ಮಿಥುನ್ ಕುಮಾರ್ ಸಲಹೆ
ಶ್ರೀನಿವಾಸ್ ಸಾಫ್ಟ್’ವೇರ್ ಕೋರ್ಸ್ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಪಿಜಿಯಲ್ಲಿ ತನ್ನ ಮೊಬೈಲ್ ಚಾರ್ಜ್ ಹಾಕಲು ಹೋಗಿದ್ದಾನೆ. ಈ ವೇಳೆ ಎಲೆಕ್ಟಿçಕ್ ಶಾಕ್ನಿಂದ ಆತ ಮೃತಪಟ್ಟಿದ್ದಾನೆ.
ಚಾರ್ಜಿಂಗ್ ವೆರ್ ಅಥವಾ ಸ್ವಿಚ್ ಬೋರ್ಡ್’ನಿಂದ ವಿದ್ಯುತ್ ತಗುಲಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post