ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾಂಚನಬ್ರಹ್ಮನಾದ ಶ್ರೀನಿವಾಸನ ಮೇಲಿರುವ ಚಿನ್ನಾಭರಣ ಅಲಂಕಾರವನ್ನು ಮಾತ್ರ ನೋಡದೇ ಒಳಗಿರುವ ಚಿನ್ಮಯನ ದರ್ಶನ ಮಾಡಿದಾಗ ಮಾತ್ರ ತೀರ್ಥಯಾತ್ರೆ ಸಾರ್ಥಕವಾಗುತ್ತದೆ ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ #Vidyeshathirtha Shri of Bandarakeri Mutt ನುಡಿದರು.
ತಿರುಮಲ ಬೆಟ್ಟದಲ್ಲಿ #Tirumala Hill ಟಿಟಿಡಿ #TTD ಗೌರವಾದರಗಳೊಡನೆ ಶ್ರೀ ವೆಂಕಟೇಶನ #Lord Shri Vekanteshwara ದರ್ಶನ ಪಡೆದು ಅವರು ಅನುಗ್ರಹ ಸಂದೇಶ ನೀಡಿದರು.

Also read: ಕರ್ನಾಟಕ ಕ್ರೀಡಾಕೂಟ-2025 | ವ್ಯವಸ್ಥಿತ ನಿರ್ವಹಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ
ದಾಸ ಸಾಹಿತ್ಯದ ಸಂರಕ್ಷಕ: 500 ವರ್ಷದ ಭವ್ಯ ಇತಿಹಾಸವಿರುವ, ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ ದಾಸ ಸಾಹಿತ್ಯ ಇಂದು ಇಷ್ಟರ ಮಟ್ಟಿಗೆ ಉಳಿದುಕೊಂಡಿದೆ ಎಂದರೆ ಅದಕ್ಕೆ ತಿರುಮಲದ ಒಡೆಯ ವೆಂಕಟೇಶನ ಕೃಪೆ ಸಾಕಷ್ಟು ಇದೆ ಎಂದು ಶ್ರೀಗಳು ಅಭಿಪ್ರಾಯಿಸಿದರು. ವಿವಿಧ ಭಜನಾ ಮಂಡಳಿಗಳು, ಸಂಘ-ಸಂಸ್ಥೆಗಳವರು ಭಜನೆ, ಕೀರ್ತನೆ, ಸುಳಾದಿಗಳನ್ನು ಹಾಡುತ್ತಾ, ಮೆಟ್ಟಿಲೋತ್ಸವ ಸೇವೆ ಮಾಡುತ್ತಲೇ ಸ್ವಾಮಿ ದರ್ಶನಕ್ಕಾಗಿ ದೂರದ ಊರುಗಳಿಂದ ಬರುತ್ತಾರೆ. ಅವರೆಲ್ಲರಿಗೂ ಆತ್ಮಾನಂದ ನೀಡುವ ದಾಸರ ಕೃತಿಗಳನ್ನು ಸನ್ನಿಧಿಗೆ ಸಮರ್ಪಿಸಿ ಧನ್ಯತೆ ಮೆರೆಯುತ್ತಾರೆ. ಈ ನಿಟ್ಟಿನಲ್ಲಿ ವೆಂಕಟೇಶನು ಸಂಗೀತ ಮತ್ತು ಸಾಹಿತ್ಯದ ಮೇರು ಸಂರಕ್ಷಕನಾಗಿದ್ದಾನೆ. ಹರಿದಾಸ ಸಾಹಿತ್ಯವೆಂಬ ಲತೆಗೆ ಶ್ರೀನಿವಾಸ ಕಲ್ಪವೃಕ್ಷದಂತಿದ್ದಾನೆ ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.

ಸಂಕೀರ್ತನೆ: ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿದ್ಯೇಶ ವಿಠಲಾಂಕಿತ ಕೃತಿಗಳ ಸಂಕೀರ್ತನೆ ಭಕ್ತರ ಮನ ಸೆಳೆಯಿತು. ಗಾಯಕಿ ಸಿರಿಸಿಂಚನ ಪಟವರ್ಧನ ಅವರು ಶ್ರೀ ವಿದ್ಯೇಶರ ಕೃತಿಗಳನ್ನು ಹಾಡಿ ರಂಜಿಸಿದರು. ಪಕ್ಕವಾದ್ಯದಲ್ಲಿ ಆದಿತ್ಯ (ಪಿಟೀಲು) ಮತ್ತು ವಿದ್ವಾನ್ ಮಾರುತಿ ರಘುರಾಮ (ಮೃದಂಗ) ಸಹಕಾರ ನೀಡಿದರು. ನೂರಾರು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post