ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಾಸ ವಿಜಯ ಸಮ್ಮಿಲನ ಮುಖಪುಟದ ಸಮೂಹವು ಲಗ್ಗೆರೆಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮಠ, ಶ್ರೀ ಸತ್ಯಬೋಧ ತೀರ್ಥರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ಜರುಗಿತು.
ಖ್ಯಾತ ಹರಿದಾಸ ವಿದ್ವಾಂಸರಾದ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಶ್ರೀವಿಜಯದಾಸರ ಜೀವನ ಅವರ ಕೀರ್ತನೆಗಳು, ಸುಳಾದಿಗಳು, ರಚನೆಗಳು, ಅವರ ಅಪರೋಕ್ಷ ಜ್ಞಾನ, ಸಾಧನೆ ಮತ್ತು ಅವರು ಅಂಕಿತವನ್ನು ಕೊಟ್ಟು ಪೋಷಿಸಿ, ಬೆಳೆಸಿದ ಬಹಳಷ್ಟು ದಾಸರ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿದರು.

ಶ್ರೀಮತಿ ಡಾ. ರಾಜಲಕ್ಷ್ಮೀ ಪಾರ್ಥಸಾರಥಿಯವರು ಮಾತನಾಡಿ, ಸಂಘ, ಸಂಸ್ಥೆ, ಸಂಘಟನೆಗಳ ಶಕ್ತಿಯ ಕುರಿತಾಗಿ ತಿಳಿಸಿದರು. ಇಂದಿನ ಕಾಲಕ್ಕೆ ಇದೆಲ್ಲ ಎಷ್ಟು ಮುಖ್ಯ ಎಂಬುದನ್ನೂ ತಿಳಿಸಿದರು. ಹಯವದನ ವಿದ್ಯಾಲಯದ ಕೀರ್ತನಾ ಪ್ರವೀಣೆಯಾದ ವೇದವತಿ ರವಿಚಂದ್ರರವರು ಮಾತನಾಡಿ ಯತಿಗಳು, ದಾಸರು, ನಮ್ಮ ಪರಂಪರೆ ಹಾಗೂ ಇಂದಿನ ಮುಖಪುಟದ ಸಮೂಹಗಳ ಸಂವಹನದ ಕುರಿತಾಗಿ ಶ್ಲಾಘನೆ ವ್ಯಕ್ತಪಡಿಸಿದರು.
ಶ್ರೀ ಮಠದ ಕಾರ್ಯದರ್ಶಿ ಶ್ರೀ ಶ್ಯಾಮಸುಂದರ್ ರವರು ಮಾತನಾಡಿ ಇಂತಹ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಸುತ್ತಮುತ್ತಲಿನ ಪರಿಸರದ ಜನರಿಗೆ ಇದರ ಮಹತ್ವ ಗೊತ್ತಾಗಬೇಕು ಎಂದು ತಿಳಿಸಿದರು. ಹಯವದನ ವಿದ್ಯಾಲಯದ ಸಂಸ್ಥಾಪಕರಾದ ಶ್ರೀಯುತ ಗೋಪಾಲಕೃಷ್ಣ ವರ್ಣ ಮತ್ತು ದಾಸ ವಿಜಯ ಸಮ್ಮಿಲನದ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಆಚಾರ್ಯ ಉಪಸ್ಥಿತರಿದ್ದರು.

ದಾಸ ವಿಜಯ ಸಮ್ಮಿಲನದ ಅಡ್ಮಿನ್ ಪದ್ಮಾ ಎಸ್ ಆಚಾರ್ಯ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಜನೆ ಹಾಡುಗಳು ಪುಸ್ತಕಕ್ಕೆ ಸಹಕರಿಸಿದವರಿಗೆ ಗೌರವ ಸಮರ್ಪಣೆಯ ಕಾರ್ಯಕ್ರಮವನ್ನು ನಡೆಸಲಾಯಿತು. ಮುಖಪುಟದ ಮತ್ತೊಂದು ಸಮೂಹವಾದ ದಾಸನಮನದ ದೀಪಾವಳಿ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ಸಹ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post