Saturday, October 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ದೃಷ್ಟಿ ರಾಷ್ಟ್ರೀಯ ನೃತ್ಯ ಉತ್ಸವ : 19ರ ಸಂಜೆ ಚೌಡಯ್ಯ ಹಾಲ್‌ನಲ್ಲಿ ವಿಶೇಷ ನೃತ್ಯ ಸಮಾರಾಧನೆ

ಭಾರತೀಯ ಇತಿಹಾಸದ ಮೇಲೆ ಹೊಸ ಬೆಳಕು

March 19, 2022
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಭಾರತೀಯ ಮತ್ತು ಅಂತರಾಷ್ಟ್ರೀಯ ಕಲಾ ಪ್ರಕಾರಗಳನ್ನು ಆದರಿಸಿ, ಗೌರವಿಸಿ, ವೇದಿಕೆ ಕಲ್ಪಿಸಿಕೊಡುವ ರಾಜಧಾನಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ‘ದೃಷ್ಟಿ ಆರ್ಟ್ ಫೌಂಡೇಷನ್’. Drushti Art Foundation ಈ ಬಾರಿ 17ನೇ ರಾಷ್ಟ್ರೀಯ ನೃತ್ಯ ಉತ್ಸವಕ್ಕೆ ಸಂಸ್ಥೆ ಅಣಿಯಾಗಿದೆ. ಮಾ. 19ರ ಶನಿವಾರ ಸಂಜೆ ೬ಕ್ಕೆ ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ಈ ಒಂದು ವಿಶೇಷ ನೃತ್ಯ ಸಮಾರೋಹಕ್ಕೆ ನವ ವಧುವಿನಂತೆ ಸಿಂಗಾರಗೊಂಡಿದೆ.

ಉತ್ಸವದ 17 ನೇ ಆವೃತ್ತಿಯಲ್ಲಿ ಭರತನಾಟ್ಯ, ಭರತನೃತ್ಯಂ, ಕಥಕ್ ಮತ್ತು ಒಡಿಸ್ಸಿಯಂತಹ ಭಾರತೀಯ ಶಾಸ್ತ್ರೀಯ ನೃತ್ಯ ಶೈಲಿಗಳು ವಿಜೃಂಭಿಸಲಿವೆ. ವಿವಿಧ ಪ್ರಕಾರಗಳಲ್ಲಿ ದೇಶದ ಪ್ರತಿಷ್ಠಿತ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಅನಾವರಣ ಗೊಳಿಸಲಿದ್ದಾರೆ.

ಚರಿತ್ರೆಗೆ ಹಿಡಿಯುವ ಕನ್ನಡಿ:
ದೃಷ್ಯಕಲಾ ಮಾಧ್ಯಮ ಸಮಾಜದ ಮೇಲೆ ಬೀರುವ ಪರಿಣಾಮ ಬಹಳ ದೊಡ್ಡದು. ಭಾರತೀಯ ಇತಿಹಾಸದ ಪ್ರತಿಯೊಂದು ಮಹತ್ತರ ಸಂಗತಿಗಳೂ ಮೊದಲು ಮೂಡಿದ್ದು ಸಾಧಕ ವ್ಯಕ್ತಿಯೊಬ್ಬರ ಅಂತರಂಗದಲ್ಲಿ. ನಂತರವಷ್ಟೇ ಅದು ಈ ಭರತ ಭೂಮಿಯಲ್ಲಿ ಆಚರಣೆಗೆ ಬರಲು ಸಹಕಾರಿಯಾಯಿತು. ಈ ಒಂದು ಪರಿಕಲ್ಪನೆಯನ್ನು ನೃತ್ಯ ಮಾಧ್ಯಮದ ಮೂಲಕ ಕಲಾರಸಿಕರಿಗೆ ಕಟ್ಟಿಕೊಡುವುದು ಈ ಬಾರಿ ದೃಷ್ಟಿ ಉತ್ಸವದ ಮಹದುದ್ದೇಶ. ಹಾಗಾಗಿ ಭಾರತೀಯ ಇತಿಹಾಸದ ಒಂದೊಂದು ಘಟನೆಯನ್ನು ಒಂದೊಂದು ತಂಡದವರು ಪ್ರಸ್ತುತ ಪಡಿಸಲಿರುವುದು ವಿಶೇಷ ಸಂಗತಿಯಾಗಿದೆ.

ದೃಷ್ಟಿ ಸಂಸ್ಥೆಯ ಕಲಾ ನಿರ್ದೇಶಕಿ, ವಿದುಷಿ ಅನುರಾಧಾ ವಿಕ್ರಾಂತ್ ಮತ್ತು ತಂಡದಿಂದ ವಿನೂತನ ಶೈಲಿಯ ಭರತನಾಟ್ಯ ಅನಾವರಣವಾಗಲಿದೆ. ಈ ಪ್ರಸ್ತುತಿಯಲ್ಲಿ ಕುಮಾರ ಕಂಪಣ್ಣ ರಾಜ (ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕ ಬುಕ್ಕನ ಪುತ್ರ) ತಮಿಳು ನಾಡಿನ ನೂರಾರು ದೇಗುಲಗಳನ್ನು ಪುನರುತ್ಥಾನ ಮಾಡಿದ ಇತಿಹಾಸ ಪಡಮೂಡಲಿದೆ. ಅದರಲ್ಲೂ ವಿಶೇಷವಾಗಿ ಮಧುರೆಯ ಮೀನಾಕ್ಷಿ ದೇವಾಲಯದ ಪೂಜಾ ಪದ್ಧತಿಗಳು (ಆಕ್ರಮಣದ ನಂತರದ ಕಾಲದಲ್ಲಿ) ಹೊಸತನದಿಂದ ಚಿಗುರಿದ ಪರಿ ವಿಭಿನ್ನವಾಗಿ ತೆರೆದುಕೊಳ್ಳಲಿದೆ. ಅಪ್ಪಟ ಕನ್ನಡ ನಾಡಿನ ಕುಮಾರ ಕಂಪಣ್ಣ ಕೇವಲ ರಾಜನಾಗಿ ಮಾತ್ರ ಆಳ್ವಿಕೆ ಮಾಡದೇ ನಮ್ಮ ಇತಿಹಾಸ ಮತ್ತು ಪರಂಪರೆ ಸಾರುವ ದೇಗುಲಗಳ ಪುನರುತ್ಥಾನಕ್ಕೆ ಮಹೋನ್ನತ ಕೊಡುಗೆ ನೀಡಿರುವುದು ಅನೇಕ ಕನ್ನಡಿಗರಿಗೇ ಗೊತ್ತಿಲ್ಲದಾಗಿದೆ. ಇಂತಹ ಸಂಗತಿಗಳ ಮೇಲೆ ದಿವ್ಯ ಬೆಳಕನ್ನು ಚೆಲ್ಲುವ ನಿಟ್ಟಿನಲ್ಲಿ ವಿದುಷಿ ಅನುರಾಧಾ ಅವರ ತಂಡ ಕಲಾಭಿವ್ಯಕ್ತಿಗೆ ಕನ್ನಡಿ ಹಿಡಿಯುವ ಸೇವೆಗೆ ಅಣಿಯಾಗಿದೆ.

ಖ್ಯಾತ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಇಲ್ಲಿ ಸಂದರ್ಭಕ್ಕೆ ತಕ್ಕಂತೆ ಸೊಗಸಾಗಿ ಬಳಸಿಕೊಳ್ಳಲಾಗಿದೆ. ಪ್ರಖ್ಯಾತ ವಿದುಷಿ ಪದ್ಮಾ ಸುಬ್ರಹ್ಮಣ್ಯ ನೃತ್ಯ ಸಂಯೋಜನೆ ಇರುವುದು ವಿಶೇಷದಲ್ಲಿ ವಿಶೇಷವಾಗಿದೆ.

ನವದೆಹಲಿಯ ವಿದುಷಿ ರಮಾ ವೈದ್ಯನಾಥನ್-ಭರತನಾಟ್ಯದಲ್ಲಿ ಮಹಾನ್ ಕವಿ ಕಾಳಿದಾಸ ಮತ್ತು ರವೀಂದ್ರ ನಾಥ ಟ್ಯಾಗೋರ್ ಅವರ ಕಾವ್ಯಭಾಗದಲ್ಲಿ ಅಡಗಿರುವ ಮುಖ್ಯ ಭಾಗಗಳನ್ನು ಅನಾವರಣಗೊಳಿಸಲಿದ್ದಾರೆ.

ಬೆಂಗಳೂರಿನ ನಾದಂ ನೃತ್ಯ ಮೇಳದಿಂದ (ನಂದಿನಿ ಮೆಹ್ತಾ- ಮುರಳಿ) ಕಥಕ್ ನೃತ್ಯ ಪ್ರಕಾರದಲ್ಲಿ ಧೀರೋದ್ದಾತೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಜೀವನ ಗಾಥೆಯನ್ನು ನಿರೂಪಿಸಲಿದ್ದಾರೆ.

ಭುವನೇಶ್ವರದ ರಾಹುಲ್ ಆಚಾರ್ಯ ಒಡಿಸ್ಸಿ ನೃತ್ಯ, ಮುಂಬೈನ ಪವಿತ್ರಾ ಭಟ್ ಅವರಿಂದ ವಿಶೇಷ ಭರತನಾಟ್ಯ ಪ್ರಸ್ತುತಿಯಲ್ಲಿ ಭಾರತದ ದೇಗುಲಗಳಲ್ಲಿ ಆಗಮ ಶಾಸ್ತ್ರದ ಸೇವೆ (ಶಿಲ್ಪ- ಪೂಜೆ) ಪರಿಕಲ್ಪನೆ ಸಂಪನ್ನಗೊಳ್ಳಲಿದೆ.

ದೃಷ್ಟಿ ಪುರಸ್ಕಾರ:
ನೃತ್ಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ ನವದೆಹಲಿಯ ವಿದುಷಿ ರಮಾ ವೈದ್ಯನಾಥನ್ ಅವರಿಗೆ ಇದೇ ಸಂದರ್ಭ ‘ದೃಷ್ಟಿ ಪುರಸ್ಕಾರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಗಣ್ಯರ ಉಪಸ್ಥಿತಿ:
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸೆಂಚುರಿ ರಿಯಲ್ ಎಸ್ಟೇಟ್ ಸಂಸ್ಥೆ ಅಧ್ಯಕ್ಷ ಮತ್ತು ಉದ್ಯಮಿ ಡಾ. ದಯಾನಂದ ಪೈ, ಬೆಂಗಳೂರಿನ ಪ್ರಖ್ಯಾತ ನೃತ್ಯ ಸಂಸ್ಥೆ ‘ನೂಪುರ’ ದ ಹಿರಿಯ ಭರತನಾಟ್ಯ ಗುರು ಲಲಿತಾ ಶ್ರೀನಿವಾಸನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉಚಿತ ಪ್ರವೇಶವಿದ್ದು, ಕಲಾಸಕ್ತರು ಭಾಗವಹಿಸಲು ಕೋರಲಾಗಿದೆ.

ದೃಷ್ಟಿ ಬೆಳೆದುಬಂದ ಹಾದಿ:
ಹೆಸರಾಂತ ಭರತನಾಟ್ಯ ನೃತ್ಯಗಾರ್ತಿ ಅನುರಾಧಾ ವಿಕ್ರಾಂತ್ ಮತ್ತು ಅವರ ಪತಿ ಟಿ.ಎಂ.ವಿಕ್ರಾಂತ್ ಅವರ ಕನಸಿನ ಕೂಸಾಗಿ ಜನ್ಮ ತಾಳಿದ ದೃಷ್ಟಿ ಸಂಸ್ಥೆ ಬೆಂಗಳೂರಿನ ಸಹಕಾರ ನಗರದಲ್ಲಿ ನೆಲೆಗೊಂಡಿದ್ದು, ಈವರೆಗೆ ನೂರಾರು ಭರತನಾಟ್ಯ ಕಲಾವಿದೆಯರನ್ನು ನಾಡಿಗೆ ನೀಡಿದ ಖ್ಯಾತಿಗೆ ಪಾತ್ರವಾಗಿದೆ. ಪ್ರತಿ ವರ್ಷವೂ ನಾಡಿನ, ಹೊರ ನಾಡಿನ ಅಪ್ರತಿಮ ಕಲಾವಿದರನ್ನು ಆಹ್ವಾನಿಸಿ, ಅವರ ಕಲಾವಂತಿಕೆ ಪ್ರದರ್ಶನದ ರಸದೌತಣ ಉಣ ಬಡಿಸಲು ‘ದೃಷ್ಟಿ ರಾಷ್ಟ್ರೀಯ ನೃತ್ಯ ಉತ್ಸವ’ ಆಯೋಜಿಸುತ್ತಿದೆ.

ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ (ಆಜಾದಿ ಕಾ ಅಮೃತ ಮಹೋತ್ಸವ್) ಸಂದರ್ಭದಲ್ಲಿ ಈ ಬಾರಿಯ ನೃತ್ಯ
ಉತ್ಸವವು ಭಾರತದ ಕಾಲಾತೀತ ಕಲೆಯ ಪುಷ್ಟೀಕರಣ, ಪುನರುಜ್ಜೀವನ ಮತ್ತು ಬಲವರ್ಧನೆಗೆ ಕೊಡುಗೆಯಾಗಲಿದೆ ಎನ್ನುತ್ತಾರೆ ಸಂಸ್ಥೆ ನಿರ್ದೇಶಕಿ, ವಿದುಷಿ ಅನುರಾಧಾ ವಿಕ್ರಾಂತ್.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ‘ದೃಷ್ಟಿ ಆರ್ಟ್ ಫೌಂಡೇಷನ್’BangaloreDrushti Art FoundationKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaState Newsಬೆಂಗಳೂರು
Previous Post

ಅದ್ದೂರಿಯಾಗಿ ಸಂಪನ್ನಗೊಂಡ ಬಾಲಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ

Next Post

ಆನೆಗಳ ಉಪಟಳ ನಿಯಂತ್ರಣಕ್ಕೆ ಕ್ರಮ : ಗೃಹಸಚಿವ ಆರಗ ಜ್ಞಾನೇಂದ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಆನೆಗಳ ಉಪಟಳ ನಿಯಂತ್ರಣಕ್ಕೆ ಕ್ರಮ : ಗೃಹಸಚಿವ ಆರಗ ಜ್ಞಾನೇಂದ್ರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮೈಸೂರು | ಅ.26-ನ.1 ರವರೆಗೆ ವಿಶೇಷ ಜ್ಞಾನಸತ್ರ | ಮಾಹುಲಿ ವಿದ್ಯಾಸಿಂಹಾಚಾರ್ಯ ಸಾರಥ್ಯ

October 25, 2025

ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನೋತ್ಸವ | ಅ.31ರಿಂದ ನವೆಂಬರ್ 26ರವರೆಗೆ ಏಕತಾಯಾತ್ರೆ

October 25, 2025

ಸುಪ್ರೀಂ ಕೊರ್ಟ್ ಸೂಚನೆ ಪಾಲಿಸುವಲ್ಲಿ ವಿಫಲ | ಅಜಾನ್ ವಿರುದ್ದ ಹೋರಾಟ: ಡಿ.ಎಸ್. ಅರುಣ್

October 25, 2025

ಸರ್ದಾರ್ ವಲ್ಲಭಭಾಯಿ ಪಟೇಲ್ ಯುವಕರಿಗೆ ರೋಲ್ ಮಾಡೆಲ್ ಆಗಬೇಕು: ಡಿ.ಎಸ್. ಅರುಣ್

October 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮೈಸೂರು | ಅ.26-ನ.1 ರವರೆಗೆ ವಿಶೇಷ ಜ್ಞಾನಸತ್ರ | ಮಾಹುಲಿ ವಿದ್ಯಾಸಿಂಹಾಚಾರ್ಯ ಸಾರಥ್ಯ

October 25, 2025

ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನೋತ್ಸವ | ಅ.31ರಿಂದ ನವೆಂಬರ್ 26ರವರೆಗೆ ಏಕತಾಯಾತ್ರೆ

October 25, 2025

ಸುಪ್ರೀಂ ಕೊರ್ಟ್ ಸೂಚನೆ ಪಾಲಿಸುವಲ್ಲಿ ವಿಫಲ | ಅಜಾನ್ ವಿರುದ್ದ ಹೋರಾಟ: ಡಿ.ಎಸ್. ಅರುಣ್

October 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!