ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈಗಿನ ಹದಿಹರೆಯದ ಮಕ್ಕಳಲ್ಲಿ ಒತ್ತಡ ಬಹಳ ಇದೆ ಯಾಕೆ ಅಂದರೆ ಇವತ್ತಿನ ಪೋಷಕರು ಅಂಕಪಟ್ಟಿಯಲ್ಲಿ ಬರುವ ಅಂಕಗಳ ಹಿಂದೆ ಬಿದ್ದಿದ್ದಾರೆ. ಅಂಕಗಳಿಗೋಸ್ಕರ ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತಿದೆ, ಮಕ್ಕಳಲ್ಲಿ ತಾಳ್ಮೆ, ಸಹನೆ ಕಳೆದು ಹೋಗುತ್ತಿದೆ. ಪಠ್ಯೇತರ ಚಟುವಟಿಕೆಗಳು ಕಡಿಮೆಯಾಗಿ ಪಠ್ಯ ಚಟುವಟಿಕೆಗಳು ಹೆಚ್ಚಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ #Dr. Dhananjaya Sarji ಆತಂಕ ವ್ಯಕ್ತಪಡಿಸಿದರು.
155ನೇ ವಿಧಾನಪರಿಷತ್ ಕಲಾಪದಲ್ಲಿ ಶಾಲಾ ಕಾಲೇಜುಗಳಲ್ಲಿ #School and College ಜಾರಿಗೆ ತರಬೇಕಾದ ನಿಯಮಗಳು ಹಾಗು ಪೋಷಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಮೆಮೊರಿ ಪವರ್ ಹೆಚ್ಚಿಸುವುದಕ್ಕೆ ಎಸ್.ಕ್ಯೂ.ತ್ರೀ.ಆರ್ ವಿಧಾನ ಬಳಸಿ
ಎಡಗಡೆ ಮೆದುಳಿಗೆ ಒತ್ತಡ ಹೆಚ್ಚಾಗುತ್ತಿದೆ ಆ ಒತ್ತಡ ಕಡಿಮೆ ಆಗಬೇಕು, ಸುಲಭ ಆಗಬೇಕು ಅಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದುವ ವಿಧಾನವನ್ನು ಕೂಡ ನಾವು ಮಕ್ಕಳಿಗೆ ಕಲಿಸಬೇಕಾಗುತ್ತದೆ. ಅದಕ್ಕಾಗಿ ನಾವು ಎಸ್.ಕ್ಯೂ.ತ್ರೀ.ಆರ್ ವಿಧಾನವನ್ನು ನಾವು ಬಳಸಬೇಕಾಗುತ್ತದೆ “ಎಸ್” ಅಂದ್ರೆ ಸ್ಕ್ರೀನಿಂಗ್, ಐದು ಪೇಜಿನ ಪಠ್ಯ ಪುಸ್ತಕ ಇದ್ರೆ ಒಂದು ಸಲ ಹೆಡ್ಡಿಂಗ್, ಕಾಲಮ್ಸ್ ಮತ್ತು ಡಯಾಗ್ರಾಮ್ ಮಾತ್ರ ಓದಬೇಕು, “ಕ್ಯೂ” ಅಂದ್ರೆ ಕ್ಯೋಷನಿಂಗ್ ಪಾಠವನ್ನು ಓದುವ ಮೊದಲು ಆ ಪಾಠದಲ್ಲಿ ಕ್ಯೋಷನ್ ಏನ್ ಇದೆ ಅಂತ ಓದ್ಕೊಬೇಕು. ಕ್ಯೋಷನಿಂಗ್ ಓದಿದ ಮೇಲೆ ಮೂರೂ ಆರ್ ಗಳನ್ನೂ ಪಾಲಿಸಬೇಕು ಮೂರೂ ಆರ್ ಅಂದ್ರೆ ರೀಡ್, ರಿಸೈಟ್, ರಿವೈಸ್ ಈ ವಿಧಾನವನ್ನು ಉಪಯೋಗಿಸಿದರೆ ಮಕ್ಕಳ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಮೆಮೊರಿ ಪವರ್ ಕೂಡ ಚೆನ್ನಾಗಾಗುತ್ತೆ. ಎಲ್ಲ ಶಾಲೆಗಳಲ್ಲೂ ಈ ವಿಧಾನ ಬಳಸಿದರೆ ವಿದ್ಯಾರ್ಥಿಗಳ ಮಾರ್ಕ್ಸ್ ಕೂಡ ಚೆನ್ನಾಗಿ ಬರುತ್ತದೆ.
Also read: ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ನಿಗಾ ವಹಿಸಿ | ಶಿಕ್ಷಣ ಸಚಿವರಿಗೆ ಡಾ. ಧನಂಜಯ ಸರ್ಜಿ ಸಲಹೆ

ಕಲಿಯೋ ಕಲಿಕೆಯಲ್ಲೂ ಕೂಡ ಮೂರೂ ತರಹದ ವಿಧಾನ ಇದೆ. ಈ ವಿಧಾನದಲ್ಲಿ ಯಾವ ಮಕ್ಕಳಿಗೆ ಯಾವ ರೀತಿ ಉಪಯೋಗ ಆಗುತ್ತೆ ಅಂತ ನಾವು ಮಕ್ಕಳಿಗೆ ಹೇಳಿಕೊಡಬೇಕಾಗುತ್ತದೆ.
- ವಿಷುಯಲ್ ಮೆಮೊರಿ – ಓದಿ ಕಲಿಯುವುದು.
- ಅಡ್ರಿಟ್ರೀಮಲ್ ಮೆಮೊರಿ – ಕೇಳಿ ಕಲಿಯೋದು
- ಕೈನೆಸ್ಟಿಕ್ ಮೆಮೊರಿ – ಬರೆದು ಕಲಿಯೋದು
ಕೇಳಿ ಕಲಿ, ನೋಡಿ ಕಲಿ, ಬರೆದು ಕಲಿ ಈ ಮೂರರಲ್ಲಿ ಯಾವ ತರಹದ ಕಲಿಕೆಗೆ ನಾವು ಒತ್ತು ಕೊಡಬೇಕು ಅನ್ನುವುದನ್ನು ನಾವು ತಿಳಿದುಕೊಂಡು ಮಕ್ಕಳಿಗೆ ಕಲಿಸಬೇಕು. ಈ ವಿಧಾನದಲ್ಲಿ ಮಕ್ಕಳಿಗೆ ಎಡಗಡೆ ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು.
ಎಡಗಡೆ ಮೆದುಳಿನ ಸಮವಾಗಿ ಬಲಗಡೆ ಮೆದುಳು ಕೆಲಸ ಮಾಡಿದರೆ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ದಿ ಸಾಧ್ಯ. ” ಓದು ಒಕ್ಕಾಲು-ಬುದ್ದಿ ಮುಕ್ಕಾಲು, ಓದು ಕೆಲಸ ಮಾಡ್ತು-ಬುದ್ದಿ ದೇಶ ಆಳ್ತು” ಅಂತ. ಜೀವನದಲ್ಲಿ ಓದು ಕೇವಲ 25% ಮಾತ್ರ ಆದರೆ ಬುದ್ದಿ 75% ಬಲಗಡೆ ಮೆದುಳು ಸುಧಾರಣೆ ಆಗಬೇಕು ಅಂದರೆ ಎಸ್.ಕ್ಯೂ.ತ್ರೀ.ಆರ್, ಮೆಮೊರಿ ಪವರ್ ಗೆ 3 ವಿಧಾನ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ 45 ನಿಮಿಷ ಪಠ್ಯೇತರ ಚಟುವಟಿಕೆಗಳಿಗಾಗಿ ಮೀಸಲೀಡಬೇಕು. ಹೀಗೆ ಮಾಡುವುದರಿಂದ ಬಲಗಡೆ ಮೆದುಳು ಕೂಡ ಸುಧಾರಣೆ ಆಗುತ್ತದೆ ಎಡಗಡೆ ಮೆದುಳು ಮತ್ತು ಬಲಗಡೆ ಮೆದುಳು ಸಮಾನವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಮಕ್ಕಳ ಸರ್ವೋತೋಮುಖ ಅಭಿವೃದ್ಧಿ ಚೆನ್ನಗಾಗುತ್ತದೆ.

- ಚಿತೆ ಸುಟ್ಟ ಮೇಲೆ ಸುಟ್ಟರೆ,
- ಚಿಂತೆ ಬದುಕಿದ್ದಾಗಲೇ ಸುಡುತ್ತದೆ,
ಈ ಚಿಂತೆಯಿಂದ, ಒತ್ತಡದಿಂದ ಮಕ್ಕಳು ಹೊರಬರಬೇಕು ಅಂದರೆ ಇವತ್ತಿನ ಮಕ್ಕಳಲ್ಲಿ ತಾಳ್ಮೆ ತುಂಬಾ ಕಡಿಮೆ ಇದೆ. ಹಿಂದೆ ನಾವೆಲ್ಲ ಗಾಂಧಿ ಕ್ಲಾಸ್ ನಲ್ಲಿ ಕುಳಿತು ಸಿನಿಮಾ ನೋಡ್ತಾ ಇದ್ವಿ, ನೀರಿಗಾಗಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಮನೆಗೆ ನೀರು ತರುತ್ತಾ ಇದ್ವಿ, ನಮ್ಮ ತಾಯಿ ಪಾತ್ರ ಬರೆದರೆ ಮರುಪತ್ರ ಬರುವವರೆಗೂ ವಾರಗಟ್ಟಲೆ ಕಾಯುವ ತಾಳ್ಮೆ ಇತ್ತು. ಹಾಗಾಗಿ ಮಕ್ಕಳಲ್ಲಿ ತಾಳ್ಮೆ, ಒತ್ತಡ ನಿವಾರಣೆ ಆಗಬೇಕು ಅಂದರೆ ಶಾಲಾ ಕಾಲೇಜುಗಳಲ್ಲಿ 20ರಿಂದ 30 ನಿಮಿಷ ಯೋಗ ಕಡ್ಡಾಯ ಮಾಡಬೇಕು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post