ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಸಂದರ್ಭ ಎದುರಾದರೆ ಉತ್ತರ ಪ್ರದೇಶದ ಯೋಗಿ ಮಾದರಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಖಡಕ್ ಆಗಿ ಮುನ್ಸೂಚನೆಯ ಮಾತುಗಳನ್ನು ಆಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸಾಲು ಸಾಲಾಗಿ ಹಿಂದೂ ಕಾರ್ಯಕರ್ತರ ಹತ್ಯೆಗಳ ವಿಚಾರದಲ್ಲಿ ನಾವು ಕೇವಲ ಮಾತನಾಡಿ ಸುಮ್ಮನಿರುವುದಿಲ್ಲ. ಬದಲಾಗಿ, ಕೆಲಸ ಮಾಡಿ ತೋರಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ Praveen Murder ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಹಂತಕರ ಪತ್ತೆಗೆ ಐದು ವಿಶೇಷ ತಂಡ ರಚಿಸಲಾಗಿದೆ. ನಮ್ಮ ಪೊಲೀಸ್ ಅಧಿಕಾರಿಗಳ ತಂಡ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಆದಷ್ಟು ಶೀಘ್ರ ದುಷ್ಟರ ಹೆಡೆಮುರಿ ಕಟ್ಟುತ್ತಾರೆ ಎಂದರು.
ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಹಂತಕರ ಹೆಡೆಮುರಿ ಕಟ್ಟುತ್ತೇವೆ. ಸಮಾಜಘಾತುಕರು, ಶಾಂತಿ ಕದಡುವವರು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕದಡುವವರರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಖಡಕ್ ನಿರ್ಧಾರ ಕೈಗೊಂಡಿದ್ದೇವೆ. ಈಗಲೂ, ಮುಂದೆಯೂ ಸಹ ಸಮಾಜಘಾತುಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಐದು ವಿದ್ಯಾರ್ಥಿಗಳಿಂದ ಆರಂಭವಾದ ಹಿಜಾಬ್ ವಿವಾದವನ್ನು ವ್ಯವಸ್ಥಿತವಾಗಿ ರಾಜ್ಯದಾದ್ಯಂತ ಹಬ್ಬಿಸಿದರು. ಅದರ ಹಿಂದೆ ದೊಡ್ಡ ಮಟ್ಟದ ಶಾಂತಿ ಕದಡುವ ಹುನ್ನಾರ ಇತ್ತು. ಆಜಾನ್ ವಿಚಾರದಲ್ಲೂ ಇದೇ ಆಗಿತ್ತು. ಆದರೆ, ನಮ್ಮ ಸರ್ಕಾರ ಖಡಕ್ ನಿರ್ಧಾರ ಕೈಗೊಂಡು ಕಾನೂನಾತ್ಮಕವಾಗಿಯೇ ಅದನ್ನು ಬಹುತೇಕ ಸರಿಪಡಿಸಿದ್ದೇವೆ. ಮುಂದೇಯೂ ಸಹ ಇದೇ ರೀತಿ ಖಡಕ್ ಆಡಳಿತ ನೀಡುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post