ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪತ್ರಕರ್ತರ Journalist ಮಾಸಾಶನ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಭರವಸೆ ನೀಡಿದರು.
ಅವರು ಇಂದು ಪ್ರೆಸ್ ಕ್ಲಬ್ ಬೆಂಗಳೂರು, ಇಲ್ಲಿ ಆಯೋಜಿಸಲಾಗಿದ್ದ ಬ್ಯುಸಿನೆಸ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಧಾನಸಭೆಯ ಹತ್ತಿರವೇ ಪ್ರೆಸ್ ಕ್ಲಬ್ ಇದೆ. ಪತ್ರಕರ್ತರು ಶಕ್ತಿಸ್ಥಳ ಭಾಗ. ನಾಡು ಕಟ್ಟಲು ನಿಮ್ಮ ಶಕ್ತಿ ಬಳಕೆಯಾಗಲಿ. ಹೊಗಳಿಕೆ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞತೆ ಇದ್ದಾಗ ರಾಜಕಾರಣಿ ಯಶಸ್ವಿಯಾಗಲು ಸಾಧ್ಯ. ಇವೆರಡರ ಮಧ್ಯೆ ಇರುವ ಸತ್ಯವನ್ನು ಕಂಡುಕೊಂಡು ಮುಂದೆ ಸಾಗಬೇಕು. ಇಂಥ ಕಾರ್ಯಕ್ರಮಗಳನ್ನು ಪ್ರೆಸ್ ಕ್ಲಬ್ ಹೆಚ್ಚಾಗಿ ಮಾಡಬೇಕು ಎಂದರು.

ಅವಿನಾಭಾವ ಸಂಬಂಧ
ರಾಜಕಾರಣಿಗಳಿಗೂ ಮಾಧ್ಯಮದವರಿಗೂ ಅವಿನಾಭಾವ ಸಂಬಂಧ. ಅವರನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ಅವರು ಇರಲಾಗುವುದಿಲ್ಲ. ನಾವು ಮಾಡಿರುವ ಕೆಲಸಗಳು ಜನರಿಗೆ ತಿಳಿಯಲು ನಿಮ್ಮ ಅಗತ್ಯವಿದೆ. ಮಾಧ್ಯಮಗಳಿಲ್ಲದೆ ಜನರಿಗೆ ನಾವು ತಲುಪಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ನಿಮ್ಮ ಅನ್ಯೋನ್ಯ ಸಂಬಂಧ ಅವಶ್ಯಕ ಮತ್ತು ಅನಿವಾರ್ಯ ಎಂದರು. ಹಾಗಂತ ಅದು ಒಂದೇ ಮಾರ್ಗದ ಟ್ರಾಫಿಕ್ ಅಲ್ಲ. ನಮ್ಮನ್ನು ಬಿಟ್ಟರೆ ನಿಮಗೆ ಸುದ್ದಿಗಳಿಲ್ಲ. ನೀವು ಕ್ರೀಡೆ, ಸಿನಿಮಾ ಎಂದು ಸುದ್ದಿ ಹಾಕಿದರೂ ಮೊದಲ ಪುಟದಲ್ಲಿ ನಾವೇ ಬೇಕು. ರಾಜಕಾರಣವೇ ಇಲ್ಲದ ದಿನವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ.ವಾಹಿನಿಗಳ ಟಿ.ಆರ್.ಪಿಗಳು ಹಾಗೂ ರಾಜಕಾರಣಿಗಳ ಮಹತ್ವ ಕಡಿಮೆಯಾಗುತ್ತದೆ ಎಂದರು. ನಾವು ಹೇಳಿ ಮಾಡಿಸಿದ ಜೋಡಿ. ಒಟ್ಟಿಗೇ ಬಾಳಬೇಕೆಂದು ತಿಳಿಸಿದರು.

ಕಾಲ ಬದಲಾಗಿದೆ. ತಂತ್ರಜ್ಞಾನ ಮುಂದುವರೆದಿದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಈಗ ತಂತ್ರಾಂಶ ಜ್ಞಾನ ವಾಗಿದೆ. ಡಿಜಿಟಲ್ ಪ್ರಪಂಚಕ್ಕೆ ಬಂದಿದ್ದೇವೆ. ಡಿಜಿಟಲ್ ಪ್ರಪಂಚಕ್ಕೆ ಹೊರತಾಗಿ ಯಾರೂ ಇಲ್ಲ. ಹಳ್ಳಿಯ ಜನರಿಂದ ಹಿಡಿದು ಆಡಳಿಗಾರರಿಗೆ, ಉನ್ನತ ಮಟ್ಟದವರೆಗೂ ಡಿಜಿಟಲ್ ಜ್ಞಾನದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ನಾವು ಕೆಲವು ಮೂಲಭೂತ ವಿಷಯ ಮರೆಯಬಾರದು. ತತ್ವಜ್ಞಾನ ದಿಂದ ತಂತ್ರಾಂಶ ಜ್ಞಾನಕ್ಕೆ ಬದಲಾವಣೆ ಆಗಿದೆ. ಆದರೆ ತತ್ವಜ್ಞಾನದ ಮಾರ್ಗದರ್ಶನ ಹಾಗೂ ಅದರ ಮಹತ್ವವನ್ನು ಮರೆಯಬಾರದು. ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣವಾಗಿದೆ. ಇವುಗಳ ಮಧ್ಯೆ ಅಂತ:ಕರಣವನ್ನು ಕಡಿಮೆಯಾಗಿದೆ. ಅಂತ:ಕರಣವನ್ನು ಇಟ್ಟುಕೊಂಡು ನಾವು ಕೆಲಸ ಮಾಡಬೇಕು. ಬಡವರಿಗಾಗಿ, ಮನಮಿಡಿಯುವ ಕೆಲಸಗಳನ್ನು ಮಾಡಬೇಕು. ನಮ್ಮ ಬದುಕಿನಲ್ಲಿ ಹಿಂತಿರುಗಿ ನೋಡಿದಾಗ ಯಾವ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದೇವೆ, ಯಾವ ಸಾಧನೆಯ ಕುರುಹುಗಳನ್ನು ಬಿಟ್ಟು ಹೋಗಿದ್ದೆವು ಎನ್ನುವುದು ಬಹಳ ಮುಖ್ಯ. ಸ್ವಾಮಿ ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ ಎಂದಿದ್ದಾರೆ. ಬದುಕು ಎಷ್ಟು ಉತ್ಕೃಷ್ಟವಾಗಿರಬೇಕೆಂದರೆ, ನೀವು ದೈಹಿಕವಾಗಿ ಇಲ್ಲದಿದ್ದರೂ ನಿಮ್ಮ ಸಾಧನೆಗಳ ಬಗ್ಗೆ ಸದಾ ಕಾಲ ಜಗತ್ತು ಮಾತನಾಡಬೇಕು ಎಂದರು.
Also read: ಪೋಷಕರು ವಿಕಲಚೇತನ ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ: ಡಾ. ಧನಂಜಯ ಸರ್ಜಿ ಸಲಹೆ
ಬದುಕು ದೊಡ್ಡದು
ಇಲ್ಲಿ ಹಲವಾರು ಸಣ್ಣ ವಯಸ್ಸಿನ ಸಾಧನೆ ಮಾಡಿರುವುದನ್ನು ನೋಡಿದ್ದೇನೆ. ಆದರೆ ಬದುಕು ಅದಕ್ಕಿಂತ ದೊಡ್ಡದಿದೆ. ಆ ದೊಡ್ಡ ಬದುಕಿಗೆ ಇನ್ನಷ್ಟು ಸಾಧನೆ ನಿಮಗೆ ಮೆರಗು ನೀಡಲಿ ಎಂದರು.

ಪ್ರೆಸ್ ಕ್ಲಬ್ , ಬೆಂಗಳೂರಿಗೆ ಐದಾರು ದಶಕಗಳ ಇತಿಹಾಸವಿದೆ. ಇಲ್ಲಿ ಕರ್ನಾಟಕದ ಆಗುಹೋಗುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತದೆ. ಬೆಳಿಗ್ಗೆ ಯಿಂದ ರಾಜಕಾರಣಿಗಳ ಕೆಲಸವನ್ನು ಇಲ್ಲಿ ರಾತ್ರಿ ಚರ್ಚೆಯಾಗುತ್ತದೆ. ಪತ್ರಕರ್ತರ ಜೀವನ ಹಲವಾರು ವಿಚಾರಗಳ ಬಗ್ಗೆ ಬರೆಯುತ್ತಾರೆ, ಸಾವಿರಾರು ಕೋಟಿ ರೂ.ಗಳ ಬಗ್ಗೆ ಬರೆಯುತ್ತಾರೆ. ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ ಅವರ ಕುಟುಂಬಗಳು, ನಾಟಕದಲ್ಲಿ ಶ್ರೀಮಂತನ ಪಾತ್ರ ಮಾಡಿ ಬಣ್ಣ ಒರೆಸಿಕೊಂಡಾಗ ಇರುವಂತೆ ಇರುತ್ತದೆ. ಆದರೆ ನಿಮ್ಮದು ನಿರೀಕ್ಷೆ ಗಳಿಲ್ಲದ ಮಾನವೀಯ ಸೇವೆ. ಪತ್ರಕರ್ತ ಜೀವನ ಬಹಳಷ್ಟು ಅಪಾಯಗಳನ್ನು ಎದುರಿಸುತ್ತಾರೆ. ಇದೊಂದಿ ಸಾಹಸ. ಸಾಧಿಸುವ ಹಂಬಲವಿರುತ್ತದೆ. ದೇಶಕ್ಕಾಗಿ ಸೇವೆ ಮಾಡಿರುತ್ತೀರಿ. ಪತ್ರಕರ್ತರ ವೃತ್ತಿಗೆ ಗೌರವ ಕೊಡುತ್ತೇವೆ ಎಂದರು.










Discussion about this post