No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Sunday, July 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಭಾರತೀಯ ಮಹಾಕಾವ್ಯದ ಸಂದೇಶ ಯುವಜನರಿಗೆ ತಲುಪಿಸಲು ಸಮರೋಪಾದಿ ಕೆಲಸ ನಡೆಯಲಿ

ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಲಹೆ | ಟಿಟಿಡಿ ಹಿಂದು ಧರ್ಮ ಪ್ರಚಾರ ಪರಿಷತ್ತಿನ ಧಾರ್ಮಿಕ ಸಮ್ಮೇಳನ

kalpa News by kalpa News
February 7, 2024
in ಬೆಂಗಳೂರು ನಗರ
0
ಭಾರತೀಯ ಮಹಾಕಾವ್ಯದ ಸಂದೇಶ ಯುವಜನರಿಗೆ ತಲುಪಿಸಲು ಸಮರೋಪಾದಿ ಕೆಲಸ ನಡೆಯಲಿ

ಶ್ರೀವಿದ್ಯೇಶ ತೀರ್ಥರು ಆಶೀರ್ವಚನ ನೀಡಿ, ಕೃಷ್ಣ ಒಲುಮೆಗೆ ನಿಷ್ಕಲ್ಮಶವಾದ ಭಕ್ತಿಯೊಂದೇ ಪರಮ ಸಾಧನ ಎಂದರು.

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ರಾಮಾಯಣ – ಮಹಾಭಾರತದ ಮೌಲ್ಯ ಮತ್ತು ಸಂದೇಶ ಸಂರಕ್ಷಣೆ ಮಾಡಿಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಗಿರಿನಗರದ ಭಾಗವತ ಕೀರುತಿ ಧಾಮದ ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ Bandarakeri Vidyeshatheertha Shri ಹೇಳಿದರು.

ತಿರುಮಲ- ತಿರುಪತಿ ದೇವಸ್ಥಾನ (ಟಿಟಿಡಿ) Tirumal-Tirupati (TTD) ಆಡಳಿತ ಮಂಡಳಿ ಹಮ್ಮಿಕೊಂಡಿದ್ದ 3 ದಿನಗಳ ಹಿಂದು ಧರ್ಮ ಪ್ರಚಾರ ಪರಿಷತ್ತಿನ ಧಾರ್ಮಿಕ ಸಮ್ಮೇಳನದ ಅಂಗವಾಗಿ ಅವರು ವೆಬಿನಾರ್ ಮೂಲಕ ಆಶೀರ್ವಚನ ನೀಡಿದರು.
ರಾಮಾಯಣದ Ramayana ಮೌಲ್ಯ ಎಂದರೆ ಅದು ಕೇವಲ ಭಾರತೀಯರಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ರಾಮ- ಕೃಷ್ಣರು ಆದರ್ಶ ನಾಯಕರು. ಮಹಾಭಾರತ ಮತ್ತು ಭಾಗವತಗಳನ್ನು ಕೇವಲ ಹಿಂದೂಗಳಿಗೆ ಎಂದು ಯಾರೂ ರಚಿಸಿಲ್ಲ. ನಿರ್ಣಯಗಳನ್ನು ಬರೆದಿಲ್ಲ. ಇವೆಲ್ಲವೂ ವಿಶ್ವ ಸಂವಾದಿ. ಜಗತ್ ಮಾರ್ಗದರ್ಶಿ. ಈ ಮಹೋನ್ನತ ಗ್ರಂಥಗಳನ್ನು ಯಾರು ಓದುವರೋ, ಯಾರು ಅನ್ವಯಿಸಿಕೊಳ್ಳುವರೋ ಅವರು ಇಹ ಮತ್ತು ಪರದಲ್ಲಿ, ಜನ್ಮ ಜನ್ಮಾಂತರಗಳಲ್ಲಿ ಸದ್ಗತಿಯನ್ನೇ ಪಡೆಯುತ್ತಾರೆ. ಇದು ಸಾವಿರಾರು ವರ್ಷಗಳಿಂದ ನಮ್ಮೆಲ್ಲಾ ಋಷಿಮುನಿಗೆ ಸಾಕ್ಷಾತ್ಕಾರಗೊಂಡ ಸಂಗತಿಯಾಗಿದೆ ಎಂದರು.

Also read: 11 ತಿಂಗಳ ಮಗುವಿನ ಗಂಟಲಲ್ಲಿದ್ದ ಇಡೀ ಮೀನು ತೆಗೆದು ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆಯ ವೈದ್ಯರು

ಕೇಂದ್ರಗಳನ್ನು ಆರಂಭಿಸಿ:
ಉತ್ತರ ಭಾರತದಲ್ಲಿ ಅಯೋಧ್ಯೆ, ದಕ್ಷಿಣದಲ್ಲಿ ತಿರುಪತಿ ಎಂಬ ಎರಡು ಬೃಹತ್ ದೈವಿಕ ಕೇಂದ್ರಗಳು ನಮಗೆ ವರವಾಗಿವೆ. ಈ ಕೇಂದ್ರಗಳಲ್ಲಿ ಸನಾತನ ಹಿಂದೂ ಪರಂಪರೆ ಉಳಿಸಿ, ಬೆಳೆಸುವ ಸಾವಿರಾರು ಚಟುವಟಿಕೆಗಳು ಸಂಪನ್ನಗೊಳ್ಳಬೇಕು. ಇದಕ್ಕೆ ಪೂರಕವಾಗಿ ಸಾಕಷ್ಟು ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳೂ ಈಗ ಒದಗಿ ಬಂದಿದೆ. ಇದೊಂದು ದೈವ ಕೃಪೆಯೂ ಆಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡು ಯುವ ಸಮುದಾಯಕ್ಕೆ ನಮ್ಮ ಭಾರತ ಖಂಡದ ಇತಿಹಾಸ, ಚರಿತ್ರೆ, ಮಹಾಕಾವ್ಯ ಮತ್ತು ಮಹಾ ಪುರುಷರ ಪರಿಚಯ ಮಾಡಿಕೊಡುವ ಕೆಲಸ ತುರ್ತಾಗಿ ಆಗಬೇಕು. ‘ ರಾಮಾಯಣ- ಮಹಾಭಾರತ ಪರಿವರ್ತನಾ ಕೇಂದ್ರ’ ಸ್ಥಾಪಿಸಿ, ಇದಕ್ಕಾಗಿ ಒಂದು ವಿಶೇಷ ಪಠ್ಯವನ್ನೇ ರಚಿಸಿ, ಯುವಜನರಿಗೆ ಪರೀಕ್ಷೆ, ಚರ್ಚೆ, ಸಂವಾದ, ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಬೇಕು. ಇಂಥ ಚಟುವಟಿಕೆಗಳಿಂದ ಮಾತ್ರ ನಮ್ಮ ಸಂಸ್ಕಾರ ಉಳಿಯಲು ಸಾಧ್ಯ ಎಂದು ಶ್ರೀ ವಿದ್ಯೇಶತೀರ್ಥರು ಪ್ರತಿಪಾದಿಸಿದರು.
ಮಕ್ಕಳಿಗೆ ಪರಿಚಯಿಸಿ:
ಕಮರ್ಷಿಯಲ್ ಸಿನಿಮಾ, ನಾಟಕ, ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೇರಳವಾಗಿ ದೊರಕುವ ಅಗ್ಗದ ಮನೋರಂಜನೆಗಳು ಶಾಶ್ವತ ಅಲ್ಲ. ಅವೆಲ್ಲವೂ ಆ ಕ್ಷಣಕ್ಕೆ, ಕೆಲವರಿಗೆ ಮಾತ್ರ ಖುಷಿ ಕೊಡಬಹುದು. ಆದರೆ ನಮ್ಮ ಮಹಾಕಾವ್ಯಗಳು, ಅದರಲ್ಲಿರುವ ಉದಾತ್ತ ಸಂಸ್ಕೃತಿ, ಜೀವನ ಶೈಲಿ ಮತ್ತು ಇದರಿಂದ ಬದುಕನ್ನು ಒಂದು ಮಹೋತ್ಸವವಾಗಿ ಆಚರಿಸುವ ವಿಧಿ- ವಿಧಾನಗಳು ಅನನ್ಯ. ಅಮೋಘ. ಇದನ್ನು ನಾವು ಇಂದಿನ ಮಕ್ಕಳಿಗೆ, ಯುವಪೀಳಿಗೆಗೆ ಪರಿಚಯ ಮಾಡಿಕೊಡದಿದ್ದರೆ ಮುಂದೆ ಬಹು ದೊಡ್ಡ ದುರಂತವನ್ನೇ ಕಾಣಬೇಕಾಗುತ್ತದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.

ಧಾರ್ಮಿಕ ಕೇಂದ್ರಗಳು ಪ್ರೇರಣೆ ಆಗಲಿ:
ಮಕ್ಕಳು, ಯುವಕರೇ ನಮ್ಮ ದೇಶದ ಭವ್ಯವಾದ ಆಸ್ತಿ. ಸಂಸ್ಕೃತಿಹೀನ ಯುವಜನರಿಂದ ದೇಶಕ್ಕೆ ಅಪಾಯವಿದೆ. ಸುಸಂಸ್ಕೃತ ಮಕ್ಕಳಿಂದ ದೇಶವು ವಿಶ್ವದಲ್ಲೇ ಖ್ಯಾತಿ ಪಡೆಯಲಿದೆ. ಇಂಥಾ ಪ್ರಜೆಗಳನ್ನು ಹೊಂದಬೇಕು ಎಂದರೆ ಇಂದಿನಿಂದಲೇ ಮಕ್ಕಳಿಗೆ ಮನೆ ಮನೆಯಲ್ಲಿ ಭಾರತೀಯ ಸಂಪ್ರದಾಯ ಕಲಿಸಬೇಕು. ತಿರುಪತಿ- ಆಯೋಧ್ಯೆಯಂಥ ಪರಮ ಪಾವನ ಶ್ರದ್ಧಾಕೇಂದ್ರಗಳು ಇಂಥ ಕಾರ್ಯಕ್ಕೆ ಪ್ರೇರಣೆಯಾಗಿ ನಿಂತಾಗ ಮಾತ್ರ ಸನಾತನ ಸಂಸ್ಕೃತಿ ಮುಂದಿನ ಶತಮಾನಕ್ಕೆ ಉಳಿಯಲಿದೆ. ಧರ್ಮ ಕ್ಷೇತ್ರದ ಮುಖಂಡರು, ಪೀಠಾಧಿಪತಿಗಳು ಮತ್ತು ಟಿಟಿಡಿ ಆಡಳಿತ ಮಂಡಳಿಯವರು, ರಾಷ್ಟ್ರಪರ ನಾಯಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಕಾರ್ಯಶೀಲರಾಬೇಕು ಎಂದು ಶ್ರೀ ವಿದ್ಯೇಶತೀರ್ಥರು ಕರೆ ನೀಡಿದರು.
Kalahamsa Infotech private limitedಟಿಟಿಡಿ ಅಧ್ಯಕ್ಷ ಕರುಣಾಕರ ರೆಡ್ಡಿ, ಕಾರ್ಯ ನಿರ್ವಾಹಕ ಅಧಿಕಾರಿ ಇ.ವಿ. ಧರ್ಮಾರೆಡ್ಡಿ, ದಾಸ ಸಾಹಿತ್ಯ ಯೋಜನೆ ಮುಖ್ಯಸ್ಥರಾದ ಆನಂದ ತೀರ್ಥಾಚಾರ್ಯ ಪಗಡಾಲ ಮತ್ತು 25ಕ್ಕೂ ಹೆಚ್ಚು ಮಠಾಧೀಶರು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
   

Tags: Bandarakeri Vidyeshatheertha ShriBangaloreKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaRamayanaTirumal-Tirupati (TTD)ತಿರುಮಲ ತಿರುಪತಿ ದೇವಸ್ಥಾನಬೆಂಗಳೂರುಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿರಾಮಾಯಣ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

11 ತಿಂಗಳ ಮಗುವಿನ ಗಂಟಲಲ್ಲಿದ್ದ ಇಡೀ ಮೀನು ತೆಗೆದು ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆಯ ವೈದ್ಯರು

Next Post

ಶೀಘ್ರ ಕಿರುತೆರೆಯಲ್ಲಿ `ಸೂರ್ಯವಂಶ’ದ ಘರ್ಜನೆ | ಅನಿರುದ್ ಮಾಸ್ ಎಂಟ್ರಿಯ ಪ್ರೋಮೋ ವೈರಲ್

kalpa News

kalpa News

Next Post
ಶೀಘ್ರ ಕಿರುತೆರೆಯಲ್ಲಿ `ಸೂರ್ಯವಂಶ’ದ ಘರ್ಜನೆ | ಅನಿರುದ್ ಮಾಸ್ ಎಂಟ್ರಿಯ ಪ್ರೋಮೋ ವೈರಲ್

ಶೀಘ್ರ ಕಿರುತೆರೆಯಲ್ಲಿ `ಸೂರ್ಯವಂಶ'ದ ಘರ್ಜನೆ | ಅನಿರುದ್ ಮಾಸ್ ಎಂಟ್ರಿಯ ಪ್ರೋಮೋ ವೈರಲ್

Leave a Reply Cancel reply

Your email address will not be published. Required fields are marked *

No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL