ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಬಸವನಗುಡಿಯ ಪಂಪ ಮಹಾಕವಿ ರಸ್ತೆಯಲ್ಲಿರುವ ಶ್ರೀ ಉತ್ತರಾದಿ ಮಠದಲ್ಲಿ ಜುಲೈ 17ರಂದು ಆಶಾಡ ಪ್ರಥಮ ಏಕಾದಶಿ ಅಂಗವಾಗಿ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ #Shri Sathyathma Thirtha Swamiji ಅವರು ಬೆಳಗ್ಗೆ 6 ರಿಂದ ರಾತ್ರಿ 11ರ ವರೆಗೆ ಭಕ್ತರಿಗೆ ತಪ್ತಮದ್ರಾ ಧಾರಣೆಯನ್ನು #Mudra Dharane ಮಾಡಲಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ 40,000ಕ್ಕೂ ಹೆಚ್ಚು ಭಕ್ತರು ಆಗಮಿಸಿ ಮುದ್ರೆಯನ್ನು ಪಡೆಯಲಿದ್ದಾರೆ . ಇದಕ್ಕಾಗಿ ಶ್ರೀಮಠವು ಸಕಲ ವ್ಯವಸ್ಥೆ ಯನ್ನು ಮಾಡಿಕೊಳ್ಳುತ್ತಿದೆ ಎಂದು ಶ್ರೀ ಮಠದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಪಂಡಿತ ಗುತ್ತಲ ವಿದ್ಯಾಧೀಶ ಆಚಾರ್ಯ ತಿಳಿಸಿದ್ದಾರೆ.
Also read: ಮಕ್ಕಳ ಸಮಗ್ರ ವಿಕಾಸಕ್ಕೆ ಸಂಗೀತ ಪೂರಕ: ಸುಬ್ರಮಣ್ಯ ಶಾಸ್ತ್ರಿ
15ರಂದೂ ಮುದ್ರೆ ಲಭ್ಯ:
ಅನೇಕ ಭಕ್ತರ ಅಪೇಕ್ಷೆಯ ಮೇರೆಗೆ ಜುಲೈ 15ರಂದು ಸಹಾ ಬೆಂಗಳೂರಿನ ಉತ್ತರಾದಿ ಮಠದಲ್ಲಿ ಬೆಳಗ್ಗೆ 7 ರಿಂದ 10:30ರವರೆಗೆ ಭಕ್ತರಿಗೆ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರು ಮುದ್ರಾ ಧಾರಣೆಯನ್ನು ಮಾಡಲಿದ್ದಾರೆ, ವೃದ್ಧರಿಗೆ , ಅಶಕ್ತರಿಗೆ ಅಂಗವಿಕಲರಿಗೆ , ದೂರದ ಜಿಲ್ಲೆ, ಹೊರ ರಾಜ್ಯದವರು ಮತ್ತು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಭಕ್ತರಿಗೆ ಈ ಅವಕಾಶವನ್ನು ಮೀಸಲಿಡಲಾಗಿದೆ ಎಂದು ಶ್ರೀ ಮಠದ ತಿಳಿಸಿದೆ.
ವಿಶೇಷ ಸೂಚನೆ: ಜುಲೈ 17ರಂದು ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗುರುಗಳು ಸಂಸ್ಥಾನ ಪೂಜೆಯನ್ನು ನೆರವೇರಿಸಲಿದ್ದಾರೆ. ನಂತರ ಮುದ್ರಾ ಧಾರಣೆ ಪ್ರಕ್ರಿಯೆ ಮುಂದುವರಿಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post