ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ನ.11ರ ನಾಳೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಲಿದ್ದು, ನಿಮಿಷದ ಲೆಕ್ಕದಲ್ಲಿ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಹೀಗಿದೆ ಪ್ರಧಾನಿಯವರ ಕಾರ್ಯಕ್ರಮದ ವಿವರ:
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು 10 ಗಂಟೆಗೆ ಬೆಂಗಳೂರಿನ ಎಚ್’ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
10.05ಕ್ಕೆ ವಿಮಾನ ನಿಲ್ದಾಣದಿಂದ ಹೊರಟು 10.30ಕ್ಕೆ ವಿಧಾನ ಸೌಧಕ್ಕೆ ಆಗಮನ
10.30ರಿಂದ 10.32ರವರೆಗೆ ಗಣ್ಯರಿಂದ ಪ್ರಧಾನಿಯವರಿಗೆ ಸ್ವಾಗತ
10.32ರಿಂದ 10.36ರವರೆಗೆ ಕನಕದಾಸರ ಪುತ್ಥಳಿಗೆ ನಿರಂಜಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪುಷ್ಪನಮನ
10.30ರಿಂದ 10.40ರವರೆಗೆ ವಾಲ್ಮೀಕಿ ಪುತ್ಥಳಿಗೆ ಪುಷ್ಪನಮನ
10.40ರಿಂದ 10.42ರವರೆಗೆ ತಮ್ಮ ಬೆಂಗಾವಲು ವಾಹನದ ಕಡೆಗೆ ನಡಿಗೆ
10.42ಕ್ಕೆ ವಿಧಾನಸೌಧದಿಂದ ಹೊರಟು 10.50ಕ್ಕೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮನ
10.50ಕ್ಕೆ ಕೆಎಸ್’ಆರ್ ಬೆಂಗಳೂರು ರೈಲು ನಿಲ್ದಾಣದ ವಿವಿಐಪಿ 2ನೆಯ ಮಾರ್ಗದಿಂದ ಪ್ರವೇಶ
10.50ರಿಂದ 10.52ರವರೆಗೆ ಪ್ಲಾಟ್ ಫಾರಂ 7ಕ್ಕೆ ಅಗಮನ
10.52ರಿಂದ 10.59ರವರೆಗೆ ವಂದೇ ಮಾತರಂ ರೈಲಿಗೆ ಹಸಿರು ನಿಶಾನೆ
10.59ರಿಂದ 11.01ರವರೆಗೆ 8ನೆಯ ಪ್ಲಾಟ್ ಫಾರಂಗೆ ಆಗಮನ
11.01ರಿಂದ 11.08ರವರೆಗೆ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ನಂತರ ಚಾಲನೆ
11.10ಕ್ಕೆ ರಸ್ತೆ ಮೂಲಕ ಹೆಬ್ಬಾಳದಲ್ಲಿರುವ ಏರ್ಫೋರ್ಸ್ ಟ್ರೈನಿಂಗ್ ಕಮಾಂಡ್ ಸೆಂಟರ್’ಗೆ ಭೇಟಿ
ಮಧ್ಯಾಹ್ನ 12.22ಕ್ಕೆ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಸಮರ್ಪಣೆ
ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಬಳಿ ವೇದಿಕೆ ಕಾರ್ಯಕ್ರಮ
ಮಧ್ಯಾಹ್ನ 1.10ಕ್ಕೆ ಸುಮಾರಿಗೆ ಅಟಲ್ ಮಿಷನ್ ರ್ಫಾ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸö್ಫರ್ಮೇಷನ್ (ಅಮೃತ್ ಯೋಜನೆ) 2.0 ಯೋಜನೆಯನ್ನು ಉದ್ಘಾಟನೆ
Also read: ಕೆಲವು ಇತಿಹಾಸಕಾರರ ಅಧಿಕಾರ, ಪ್ರಶಸ್ತಿ ಆಸೆಗೆ ನೈಜ ಸಂಗತಿ ಮರೆಮಾಚಲಾಗಿದೆ: ಸಂಸದ ರಾಘವೇಂದ್ರ
ಮಧ್ಯಾಹ್ನ 1.35ಕ್ಕೆ ಮೋದಿಯವರ ಭಾಷಣ
ಮಧ್ಯಾಹ್ನ 1.45ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣಕ್ಕೆ ಪ್ರಯಾಣ
ಬೆಂಗಳೂರಿನಲ್ಲಿ ಹಲವೆಡೆ ಸಂಚಾರ ನಿರ್ಬಂಧ
ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಂಚಾರ ನಿರ್ಬಂಧಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ.
ಎಲ್ಲೆಲ್ಲಿ ನಿರ್ಬಂಧ
ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್’ಪೋರ್ಟ್ ಎಲಿವೇಟೆಡ್ ಕಾರಿಡಾರ್, ಮಹಾರಾಣಿ ಸೇತುವೆ, ಶೇಷಾದ್ರಿ ರೈಲು ನಿಲ್ದಾಣದ ಪ್ರವೇಶ ದ್ವಾರದವರೆಗೆ ವಾಹನಗಳ ಸಂಚಾರವನ್ನು ನಿಷೇಧ.
ಮೆಜೆಸ್ಟಿಕ್’ನ ಶಾಂತಲಾ ಜಂಕ್ಷನ್’ನಿಂದ ಮೈಸೂರು ಬ್ಯಾಂಕ್ ವೃತ್ತದಿಂದ ಕೆಜಿ ರಸ್ತೆ, ಖೋಡೆ ಅಂಡರ್ ಪಾಸ್’ನಿಂದ ವಾಟಾಳ್ ನಾಗರಾಜ್ ಟೋಡ್’ನಲ್ಲಿ ಪಿಎಫ್ ಕಚೇರಿ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧ ಇರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post