ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾವ್ಯಕಲಾ ಪ್ರಕಾಶನ ಪ್ರಕಟಿಸಿರುವ ‘ಅಭಿವ್ಯಕ್ತಿ ಕಲಾ ಸಂಹಿತೆ’ 21 ಕವನಗಳ ಸಂಕಲನ;, ಎರಡನೇ ಶತಮಾನದ ಚೀನಿ ಕಾವ್ಯಗಳ ‘ದಿ ಆರ್ಟ್ ಆಫ್ ರೈಸಿಂಗ್’ ಅನ್ನು ಹಿರಿಯ ಸಾಹಿತಿ, ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಡಾ.ಎಸ್.ಜಿ. ಜೈನಾಪೂರ ಕನ್ನಡಕ್ಕೆ ಅನುವಾದವಾದಗೊಳಿಸಿರುವುದು ಚೀನಾ ಮತ್ತು ಕನ್ನಡ ಸಂಬಂಧಕ್ಕೆ ಸೇತುವೆಯಂತಿದೆ ಎಂದು ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಲೇಖಕ ಡಾ.ಆರ್. ವಾದಿರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ.ಎಸ್.ಜಿ. ಜೈನಾಪೂರ ಅವರ ‘ ಅಭಿವ್ಯಕ್ತಿ ಕಲಾ ಸಂಹಿತೆ ‘ ಕವನ ಸಂಕಲನವನ್ನು ನಗರದ ಬಸವನಗುಡಿಯ ಡಿ.ವಿ.ಜಿ ರಸ್ತೆಯ ಶ್ರೀ ಸಾಯಿ ಜ್ಯೂವೆಲ್ಸ್ ಪ್ಯಾಲೆಸ್ನ ಮೇಲಿನ ಎಸ್.ವಿ.ಎನ್.ಕೆ ಪದವಿ ಕಾಲೇಜು ಸಭಾಂಗಣದಲ್ಲಿ ಎಸ್.ವಿ.ಎನ್.ಕೆ ಪದವಿ ಕಾಲೇಜು ಅಧ್ಯಕ್ಷ ಟಿ.ವಿ.ಸೆಂಥಿಲ್ ರವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡಿ, ‘ಕಾವ್ಯ , ಸಂಸ್ಕೃತಿ ಮತ್ತು ಭಾಷೆಯ ಸೃಜನಶೀಲತೆಯ ಒಡನಾಟ, ಪರಸ್ಪರರ ಪ್ರಭಾವ ಕುರಿತು ಪ್ರೌಢ ಪ್ರಬಂಧ ಬರೆದಿರುವ ಜೈನಾಪೂರ ಅವರು ನಾಲ್ಕು ದಶಕಗಳಿಂದ ಪ್ರಾಂಶುಪಾಲರಾಗಿ, ಬೆಂಗಳೂರು ವಿವಿಯ ಸೆನೇಟ್, ಶೈಕ್ಷಣಿಕ ಪರಿಷತ್ತಿನ ಮಾಜಿ ಸದಸ್ಯರಾಗಿ ಸಕ್ರಿಯ , ದೀರ್ಘ ಸೇವೆ ಸಲ್ಲಿಸಿದ್ದಾರೆ. ಹಾಗೂ ಬೋಧನೆ, ಶೈಕ್ಷಣಿಕ ಆಡಳಿತ ಅವರ ವೃತ್ತಿಯಾದರೆ ಸೃಜನಶೀಲತೆ ಅವರ ಒಲವಿನ ಪ್ರವೃತ್ತಿ- ಪತ್ರಿಕೆಗಳಿಗೆ ಅಂಕಣಕಾರರಾಗಿ, ಬಾನುಲಿ ರೂಪಕಗಳನ್ನು ರಚಿಸಿ ಜನಮನ್ನಣೆಗಳಿಸಿದ್ದಾರೆ ಎಂದು ತಿಳಿಸಿದರು.
Also read: ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಈ-ಟಿವಿ ಭಾರತ್ನಿಂದ ಕ್ಯಾಂಪಸ್ ಸೆಲೆಕ್ಷನ್
ಪ್ರಾಂಶುಪಾಲ ಡಾ. ಸುಜಯ್ ಕುಮಾರ್, ನಿದೇಶಕ ಯು.ಎಸ್. ಸಾಗರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post