No Result
View All Result
ಶಿವಮೊಗ್ಗದಲ್ಲಿ ಕ್ರೀಡಾಪಟುಗಳ ಸಾಧನೆ | ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರಿಗೆ ಚಿನ್ನ
English Articles

Shivamogga: Two Wrestlers Win Gold at South India Championship

by ಕಲ್ಪ ನ್ಯೂಸ್
June 8, 2026
0

Kalpa Media House  |  Shivamogga   | Two athletes from the District Youth Empowerment and Sports Department Sports School in Shivamogga...

Read moreDetails
ಫಿಲಿಪೈನ್ಸ್‌ನಲ್ಲಿ ಭೂಕಂಪ | 7.8 ತೀವ್ರತೆಯ ಕಂಪನಕ್ಕೆ 12 ಸಾವು | ಹಲವು ದೇಶಗಳಲ್ಲಿ ಸುನಾಮಿ ಎಚ್ಚರಿಕೆ

Magnitude 7.8 Earthquake Hits Southern Philippines, Kills 12; Tsunami Alerts Issued

June 8, 2026
ದೇಶದ ಭದ್ರತೆಗೆ ಪೂರಕವಾದ ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ | ಏನಿದರ ವಿಶೇಷತೆ?

Zojila Tunnel Nears Completion | A Milestone in India’s Infrastructure & National Security

June 8, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ | ಭಾರತಕ್ಕೆ ಭರ್ಜರಿ ಜಯ, ಚಿನ್ನದ ಪದಕ ಗೆದ್ದ ಹೀನಾ ರಾಜಗೋರ್!

World Yogasana Championships 2026: Hosts India extend lead at top of medals tally with 22 gold

June 7, 2026
ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?

Heritage Weighing Machine Restored, Unveiled at Mysuru Railway Museum

June 7, 2026
  • Advertise With Us
  • Grievances
  • About Us
  • Contact Us
Monday, June 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಮ್ಮನ ಕನಸುಗಳನ್ನು ನನಸು ಮಾಡಿದ ಸಂಜನಾ | 28ರಂದು ಉದಯೋನ್ಮುಖ ಕಲಾವಿದೆ ರಂಗಪ್ರವೇಶ

ಉದ್ಯಾನ ನಗರಿಯ ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ವೈಭವ | ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಪ್ರಸ್ತುತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 27, 2024
in Special Articles
0
ಅಮ್ಮನ ಕನಸುಗಳನ್ನು ನನಸು ಮಾಡಿದ ಸಂಜನಾ | 28ರಂದು ಉದಯೋನ್ಮುಖ ಕಲಾವಿದೆ ರಂಗಪ್ರವೇಶ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಸಾವಿರಾರು ಪ್ರತಿಭೆಗಳನ್ನು ಕಲಾ ರಂಗಕ್ಕೆ ವಿಶೇಷ ಕಾಣಿಕೆಯಾಗಿ ನೀಡಿದಂತಹ ರಾಜಧಾನಿಯ ಪ್ರತಿಷ್ಠಿತ ನೃತ್ಯ ತರಬೇತಿ ಸಂಸ್ಥೆ ಸಾಯಿ ಆಟ್ಸ್ಸ್‌ಂಟರ್ ನ್ಯಾಷನಲ್‌ನ ಗುರು ಶ್ವೇತಾ ವೆಂಕಟೇಶ್‌ಶಿಷ್ಯೆ ಸಂಜನಾ ರಮೇಶ್ ಈಗ ಕಥಕ್ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.

ಡಿ. 28ರ ಸಂಜೆ 5ಕ್ಕೆ ಬೆಂಗಳೂರಿನ ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ರಂಗಪ್ರವೇಶಕ್ಕೆವೇದಿಕೆ ಸಜ್ಜುಗೊಂಡಿದೆ. ಮುಖ್ಯ ಅತಿಥಿಗಳಾಗಿ ಖ್ಯಾತ ನೃತ್ಯ ವಿದುಷಿ, ಸಂಗೀತ-ನೃತ್ಯ ವಿದುಷಿ ಶುಭಾ ಧನಂಜಯ, ಐಸಿಸಿಆರ್ ವಲಯ ನಿರ್ದೇಶಕ ಪ್ರದೀಪ ಕುಮಾರ್, ವಿದುಷಿ ಸುಪರ್ಣಾ, ಕಲಾವಿದೆ ಡಾ. ಎಲ್. ಸುಬ್ಬುಲಕ್ಷ್ಮೀ, ಇಂಜಿನಿಯರ್ ರಮೇಶ ಸಾಕ್ಷಿಯಾಗಲಿದ್ದಾರೆ.
ಇಷ್ಟಪಟ್ಟು ಮಾಡುವ ಕೆಲಸದಿಂದ ವಿಜಯ:

ಯಾವ ಕೆಲಸವನ್ನು ಮಾಡಿದರೂ ಅದನ್ನು ಸಂಪೂರ್ಣ ಇಷ್ಟಪಟ್ಟು ಮಾಡು. ನಾಲ್ಕು ಜನ ಪ್ರಾಜ್ಞರು ಮೆಚ್ಚುವಂತೆ ಮಾಡು. ಅದು
ವಿಜಯ ತಂದುಕೊಡುತ್ತದೆ. ಜೀವನ ಪೂರ್ಣ ಕೈ ಹಿಡಿದು ನಡೆಸುತ್ತದೆ. ಕೀರ್ತಿ ಮತ್ತು ಆತ್ಮಾನಂದ ತಂದುಕೊಡುತ್ತದೆ- ಹೀಗೆ ಅಮ್ಮ ಬಾಲ್ಯದಲ್ಲಿ ಹೇಳಿದ ಕಿವಿ ಮಾತುಗಳೇ ಒಬ್ಬ ಅತ್ಯುತ್ತಮ ವಿನ್ಯಾಸಗಾರ್ತಿಯನ್ನು, ನೃತ್ಯ ಕಲಾವಿದೆಯನ್ನು ನಾಡಿಗೆ ನೀಡಿದೆ. ಹೌದು ಬೆಂಗಳೂರಿನ ಕಥಕ್ ನೃತ್ಯಪಟು ಸಂಜನಾ ರಮೇಶ್ ಇದಕ್ಕೆ ಒಂದು ದೊಡ್ಡ ಉದಾಹರಣೆ. ಅಮ್ಮನ ಕನಸುಗಳನ್ನು ಎರಡು ಪಟ್ಟು ನನಸಾಗಿಸಿದ ಹೆಮ್ಮೆ ಮಾತೆಗೆ ಪ್ರಾಪ್ತವಾಗಿದೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಮ್ಮ ಡಾ. ಎಲ್. ಸುಬ್ಬುಲಕ್ಷ್ಮೀ. ಮೂಲತಃ ಕಲಾವಿದೆ. ಚಾಮರಾಜನಗರದಲ್ಲಿ ಬೆಳೆದ ಇವರು ಕುಟುಂಬದ ಕೊಡುಗೆಯಾಗಿ ಬಂದ ಕ್ರಿಯಾಶೀಲತೆಯನ್ನು ತಮ್ಮದಾಗಿಸಿಕೊಂಡು ಬೆಂಗಳೂರಿನ ಮನೆಯಲ್ಲಿಯೇ ಸಮೃದ್ಧಿ ಆರ್ಟ್ಸ್ ಫೌಂಡೇಷನ್ ನೆಲೆಗೊಳಿಸಿದ್ದಾರೆ. ರಂಗೋಲಿ ಟೆರಾಕೋಟ, ಕಿನ್ನಾಳ ಕಲೆಗಳನ್ನು ಸಿದ್ಧಿಸಿಕೊಂಡು ಲಿಮ್ಕಾ ದಾಖಲೆಗೂ ಭಾಜನರಾಗಿದ್ದಾರೆ ಡಾ. ಸುಬ್ಬುಲಕ್ಷ್ಮೀ.

ಚೌಕಟ್ಟುಗಳನ್ನು ಹಾಕಲೇ ಇಲ್ಲ:

ಮಗಳಿಗೆ ಎಂದೂ ಬಿಗಿಯಾದ ಚೌಕಟ್ಟುಗಳನ್ನು ಹಾಕಲೇ ಇಲ್ಲ ಅಮ್ಮನನ್ನು ನೋಡಿಯೇ ಮಗಳು ಕಲಾವಿದೆಯಾಗಿ ರೂಪುಗೊಂಡಳು. ಪ್ರಾಥಮಿಕ ಶಾಲಾ ಹಂತದಲ್ಲಿ ಭರತನಾಟ್ಯ ಕಲಿಯಲು ಮುಂದಾದ ಸಂಜನಾ, ಪಿಯು ಹಂತದಲ್ಲಿ ಕಥಕ್ ಕಲಿಕೆಗೆ ತನ್ನನ್ನು ಸಮರ್ಪಿಸಿಕೊಂಡಳು. ಗುರು ಸುಪರ್ಣಾ ವೆಂಕಟೇಶ ಮತ್ತು ಶ್ವೇತಾ ಬಳಿ ಶಿಷ್ಯತ್ವ ಪಡೆದು ಸಾಯಿ ಆರ್ಟ್ಸ್ ಸಂಸ್ಥೆಯಲ್ಲಿ ಪಳಗಿದರು.

Also read: ಡಿ.28ರಂದು ಚಿಣ್ಣರ ನೃತ್ಯ ಸಂಹಿತೆ-2024 | ಮಕ್ಕಳಿಂದ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ
ವಿವಿಧ ವೇದಿಕೆಗಳಲ್ಲಿ ಕಲಾ ಪ್ರದರ್ಶನ:

ಕಥಕ್ ಸೀನಿಯರ್ ಪರೀಕ್ಷೆ ಪೂರ್ಣಗೊಳಿಸಿರುವ ಸಂಜನಾ ಈಗಾಗಲೇ ಉಡುಪಿ, ಧರ್ಮಸ್ಥಳ, ಹಂಪಿ ಉತ್ಸವ, ಸಾಯಿ ನೃತ್ಯೋತ್ಸವ, ಅರ್ಜುನ ಉತ್ಸವ, ನಾಟ್ಯನಿನಾದ ನೃತ್ಯ ಮಹೋತ್ಸವ, ಕಾದಂಬರಿ ಕಲಾಕ್ಷೇತ್ರದ ನರ್ತನ ಸಮಾರಾಧನೆ

ಸೇರಿದಂತೆ ಸೇರಿದಂತೆ ಹಲವು ನೃತ್ಯ ಕಾರ್ಯಕ್ರಮ ನೀಡಿ ರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಪರಶಿವನ ಮೇಲೆ ಸಿದ್ಧಪಡಿಸಿದ ಚಂದ್ರಧಾಕ್ ಎಂಬ ಸಾಕ್ಷ ಚಿತ್ರ (ಸಂಸ್ಕೃತದ ಹಾಡುಗಳನ್ನು ಮರಾಠಿಯಲ್ಲಿ ಪ್ರಸ್ತುತಪಡಿಸಿ) ಲೈವ್ ಪ್ರದರ್ಶನದ ಮೂಲಕ ಪ್ರಸ್ತುತಿ ಮಾಡಿದ್ದಾರೆ. ಲಂಡನ್‌ನಲ್ಲಿ ಆಯೋಜನೆಗೊಂಡಿದ್ದ ಸೆವೆನ್ ಸೀಸ್ ಇಂಟರ್ ನ್ಯಾಷನಲ್ ಫೆಸ್ಟಿವಲ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಸಂಜನಾ ಕಲಾಚಾತುರ್ಯ ಮೂಡಿಸಿದ್ದಾರೆ.

ಗ್ರಾಫಿಕ್ ಡಿಸೈನ್‌ನಲ್ಲಿ ಎಂಎ ಮಾಡಲು ಲಂಡನ್‌ಗೆ ತೆರಳಿದ ಸಂಜನಾ, ಕಲಾ ಹವ್ಯಾಸವನ್ನು ಎಂದಿಗೂ ಮರೆಯಲಿಲ್ಲ. ವಿದ್ಯಾಭ್ಯಾಸ ಮಾಡುವಾಗಲೇ ನೌಕರಿ ದೊರೆತರೂ ಕಥಕ್ ನಲ್ಲಿ ಒಂದಿಷ್ಟು ಸಾಧನೆ ಮಾಡಬೇಕೆಂದು ಭಾರತಕ್ಕೆ ಮರಳಿದರು. ಬೆಳಗಿನಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಿಂಗಪುರದ ಕಂಪನಿಯೊಂದಕ್ಕೆ ಡಿಸೈನರ್ ಆಗಿ ವೃತ್ತಿ . ನಂತರ ತಮ್ಮನ್ನು ನರ್ತನಾಭ್ಯಾಸಕ್ಕೆ ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ. ವಿದ್ವತ್ ಪರೀಕ್ಷೆ ಮಾಡಿಕೊಳ್ಳಬೇಕು ಎಂಬ ಮಹತ್ತರ ಗುರಿ ಇಟ್ಟುಕೊಂಡಿದ್ದು, ದಿನಕ್ಕೆ 4 ತಾಸು ಕಾಲ ಪರಿಶ್ರಮದ ಅಭ್ಯಾಸ ಮಾಡುವಲ್ಲಿ ನಿರತರಾಗಿದ್ದಾರೆ.

ಕಥಕ್ ಕೂಡಾ ವೃತ್ತಿ- ಪ್ರವೃತ್ತಿ:

ಕಥಕ್ ನನಗೆ ವೃತ್ತಿ- ಪ್ರವೃತ್ತಿ ಆಗಿದೆ. ಇದಕ್ಕೆ ತನ್ನದೇ ಆದ ಶೈಲಿ ಮತ್ತು ಘನತೆ ಇದೆ. ಹಾವ, ಭಾವಗಳು ಪ್ರೇಕ್ಷಕರಿಗೂ ಬೇಗ ಅರ್ಥವಾಗುತ್ತದೆ. ನನ್ನ ಮನಸ್ಸಿಗೆ ಮತ್ತು ಅಂಗಿಕ ಅಭಿನಯಕ್ಕೆ ಪೂರಕ ವಾಗಿದೆ. ನಾನುನನ್ನ ಜೀವದಷ್ಟೇ ನೃತ್ಯವನ್ನೂ ಪ್ರೀತಿಸುತ್ತೇನೆ ಎನ್ನುತ್ತಾರೆ ಸಂಜನಾ. ಈ ನಿಟ್ಟಿನಲ್ಲಿ ಅವರ ಕಲಾಯಾನ ಈಗ ರಂಗಪ್ರವೇಶದವರೆಗೂ ಸಾಗಿದೆ. ಮುಂದೆ ಮಹಾ ನದಿಯಾಗಿನೂರಾರು ಯುವ ಪೀಳಿಗೆಗಳಿಗೆ ಮಾದರಿಯಾಗಿ ನಿಲ್ಲುವಂತಹ ವ್ಯಕ್ತಿತ್ವ ಅವರಲ್ಲಿ ಪಡ ಮೂಡಲಿದೆ.

ಕಲೆಗಳು ನಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.ಅದನ್ನು ಮೊದಲು ಇಷ್ಟಪಟ್ಟು ಮಾಡಬೇಕು. ಹಾಗಾಗಿ ನಾನು ನನ್ನ ಮಗಳಿಗೆ ಯಾವುದೇ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡು ಎಂದಷ್ಟೇ ಹೇಳುವೆ. ಒತ್ತಡ ರಹಿತವಾಗಿ, ಮನಸ್ಸಿಗೆ ಖುಷಿ ಕೊಡುವ ಚಟುವಟಿಕೆಗಳನ್ನು ಮಾಡಿದಾಗ ಅವೇ ನಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ . ಈ ನಿಟ್ಟಿನಲ್ಲಿ ಸಂಜನಾ ನನ್ನ ಕನಸುಗಳನ್ನು ಈಡೇರಿಸಿದ್ದಾಳೆ ಎಂಬ ಧನ್ಯತೆ ಇದೆ.

ಡಾ. ಎಲ್. ಸುಬ್ಬುಲಕ್ಷ್ಮೀ, ಕಿನ್ನಾಳ, ರಂಗೋಲಿ ಲಿಮ್ಕಾ ದಾಖಲೆ ಕಲಾವಿದೆ

ಹಿಮ್ಮೇಳ ಕಲಾವಿದರು:

ರಂಗ ಪ್ರವೇಶಕ್ಕೆಖ್ಯಾತ ವಿದ್ವಾಂಸ ಶಂಕರ ಶ್ಯಾನುಭಾಗ್ ಗಾಯನ, ಶ್ವೇತಾ ಅವರ ಪದಾಂತ್, ಗುರುಮೂರ್ತಿ ವೈದ್ಯರ ಪಖ್ವಾಜ್, ಕಾರ್ತಿಕ ಭಟ್ ತಬಲಾ, ಸಮೀರ ರಾವ್ ಕೊಳಲು, ಶ್ರುತಿ ಕಾರಂತರ ಸಿತಾರ ವಾದನ ಸಹಕಾರವಿದೆ.

ಲೇಖನ : ಕೌಸಲ್ಯಾ ರಾಮ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4
Tags: BangaloreKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_Kannada
Share196Tweet123Send
Previous Post

ಡಿ.28ರಂದು ಚಿಣ್ಣರ ನೃತ್ಯ ಸಂಹಿತೆ-2024 | ಮಕ್ಕಳಿಂದ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ

Next Post

ರಾಜ್ಯೋತ್ಸವ ಸಮಾರಂಭ | ‘ಕೆಂಪೇಗೌಡ ಪ್ರಶಸ್ತಿ’ ವಿಜೇತೆ ದಿಯಾ ಭರತನಾಟ್ಯ ಪ್ರದರ್ಶನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ರಾಜ್ಯೋತ್ಸವ ಸಮಾರಂಭ | ‘ಕೆಂಪೇಗೌಡ ಪ್ರಶಸ್ತಿ’ ವಿಜೇತೆ ದಿಯಾ ಭರತನಾಟ್ಯ ಪ್ರದರ್ಶನ

ರಾಜ್ಯೋತ್ಸವ ಸಮಾರಂಭ | 'ಕೆಂಪೇಗೌಡ ಪ್ರಶಸ್ತಿ' ವಿಜೇತೆ ದಿಯಾ ಭರತನಾಟ್ಯ ಪ್ರದರ್ಶನ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
5 ದಿನಗಳ ‘ಕಾಯಕ ಸೇತು’ ಉದ್ಯೋಗ ಮೇಳಕ್ಕೆ ಚಾಲನೆ: 2,000ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ

5 ದಿನಗಳ ‘ಕಾಯಕ ಸೇತು’ ಉದ್ಯೋಗ ಮೇಳಕ್ಕೆ ಚಾಲನೆ: 2,000ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ

June 8, 2026
ಕೆಸಿಇಟಿ ಫಲಿತಾಂಶ | ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಅತ್ಯುತ್ತಮ ಸಾಧನೆ

ಕೆಸಿಇಟಿ ಫಲಿತಾಂಶ | ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಅತ್ಯುತ್ತಮ ಸಾಧನೆ

June 8, 2026
ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ : ನಾಲ್ವರು ಚಾಲಕರ ವಿರುದ್ಧ ಕೇಸ್

ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ : ನಾಲ್ವರು ಚಾಲಕರ ವಿರುದ್ಧ ಕೇಸ್

June 8, 2026
ಶಿವಮೊಗ್ಗದಲ್ಲಿ ಕ್ರೀಡಾಪಟುಗಳ ಸಾಧನೆ | ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರಿಗೆ ಚಿನ್ನ

Shivamogga: Two Wrestlers Win Gold at South India Championship

June 8, 2026
ಪಿಇಎಸ್‌ಐಟಿಎಂನಲ್ಲಿ 16ನೇ ಪದವಿ ಪ್ರದಾನ ಹಾಗೂ ಉದ್ಯೋಗ ನೇಮಕಾತಿ ಪತ್ರ ವಿತರಣೆ

ಪಿಇಎಸ್‌ಐಟಿಎಂನಲ್ಲಿ 16ನೇ ಪದವಿ ಪ್ರದಾನ ಹಾಗೂ ಉದ್ಯೋಗ ನೇಮಕಾತಿ ಪತ್ರ ವಿತರಣೆ

June 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL