ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ಕನ್ನಡ ಸಾಹಿತ್ಯಕ್ಕೆ, ವೈದ್ಯಕೀಯ ಸಾಹಿತ್ಯಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ 2021-22 ನೆಯ ಸಾಲಿನ ವೈದ್ಯಶ್ರೇಷ್ಠ ಸಾಹಿತಿ ಪ್ರಶಸ್ತಿಯನ್ನು ಡಾ.ಕೆ.ಎಸ್.ಪವಿತ್ರ ಅವರಿಗೆ ನೀಡಲಾಗಿದೆ.
ಭಾರತೀಯ ವೈದ್ಯಕೀಯ ಸಂಘದ ಐಎಂಎ ಕನ್ನಡ ಬರೆಹಗಾರರ ಸಂಘದಿಂದ ಕೊಡಲಾಗುವ ಪ್ರಶಸ್ತಿಗೆ ಈ ಬಾರಿ ಡಾ. ನಾ. ಸೋಮೇಶ್ವರ ಮತ್ತು ಡಾ. ಕೆ.ಎಸ್. ಪವಿತ್ರಾ ಅವರನ್ನು ಆಯ್ಕೆ ಮಾಡಲಾಗಿದೆ.
ಧಾರವಾಡದಲ್ಲಿ ನಡೆಯುವ ವೈದ್ಯಕೀಯ ಬರಹಗಾರರ ರಾಜ್ಯ ಸಮ್ಮೇಳನದಲ್ಲಿ ಆಗಸ್ಟ್ 28 ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಗಳೂರಿನ ಕುಲಾಲ್ ಪ್ರತಿಷ್ಠಾನ ಮತ್ತು ಪೃಥ್ವಿ ಮಕ್ಕಳ ಆಸ್ಪತ್ರೆ ಈ ರಾಜ್ಯ ಪ್ರಶಸ್ತಿಯನ್ನು ಪ್ರಾಯೋಜಿಸಿದೆ.
Also read: ಅಪಘಾತ: ಸಕ್ರೆಬೈಲ್ ಅರಣ್ಯ ರಕ್ಷಕ ಸಂತೋಷ್ ಸಾವು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post