ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುಮಲ ತಿರುಪತಿ ದೇವಸ್ಥಾನಗಳು #Tirumala Tirupati Temples ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ರಾಜಾಜಿನಗರದ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಡಿ.23 ರಿಂದ 26ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ
ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ (ಸಂಜೆ 6 ರಿಂದ 7): ಡಿ.23: ರಾಜಾಜಿನಗರದ ವಾಸವಿ ಮಹಿಳಾ ಮಂಡಲಿ, ಡಿ.24: ರಾಜಾಜಿನಗರದ ವಾಸವಿ ಗಾನ ಲಹರಿ, ಡಿ.25: ಶ್ರೀರಾಮಪುರದ ವೈಷ್ಣವಿ ವಾಸವಿ ಮಹಿಳಾ ಮಂಡಲಿ.
ಪ್ರವಚನ ಕಾರ್ಯಕ್ರಮ : (ಸಂಜೆ 7 ರಿಂದ 8) : ಡಿ.23 ರಿಂದ 25ರ ವರೆಗೆ ಶ್ರೀ ವರದಾರ್ಚಾ ಚಿಟಗುಪ್ಪ ಇವರಿಂದ ಧಾರ್ಮಿಕ ಪ್ರವಚನ. ವಿಷಯ : ಶ್ರೀ ಲಕ್ಷ್ಮೀದೇವಿಯ ಮಹಿಮೆಗಳು
ಹರಿನಾಮ ಸಂಕೀರ್ತನೆ : ಡಿ. 26, ಶುಕ್ರವಾರ ಸಂಜೆ 6:30ಕ್ಕೆ. ಗಾಯನ : ಕು. ಹರ್ಷಿತಾ ಶ್ರೀನಿವಾಸ್, ಹಾರ್ಮೋನಿಯಂ : ಹರೀಶ್ ಕರಣಂ, ತಬಲಾ : ಎಂ.ಕೆ. ಅನಿರುದ್ಧ ದಾಸ್.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, 10ನೇ ಮುಖ್ಯರಸ್ತೆ, ಡಿ ಬ್ಲಾಕ್, 2ನೇ ಹಂತ, ರಾಜಾಜಿನಗರ, ಬೆಂಗಳೂರು-560010
ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ ಪಿ. ಭುಜಂಗರಾವ್ ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















