ನವದೆಹಲಿ: ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬರೋಡಾ ಬ್ಯಾಂಕ್ಗಳ ವಿಲೀನವನ್ನು ವಿರೋಧಿಸಿ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದೇಶದಾದ್ಯಂತ ಸುಮಾರು ೧೦ ಲಕ್ಷ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಪರಿಣಾಮ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ವ್ಯವಹಾರ ನಡೆಸಲು ತೊಂದರೆಯುಂಟಾಗಿದೆ ಎಂದು ವರದಿಯಾಗಿದೆ.
ರಾಷ್ಟçಮಟ್ಟದಲ್ಲಿ ಹಣ ಪಾವತಿ, ಹಣ ತೆಗೆಯುವುದು, ಡಿಡಿ, ಚೆಕ್ ಕ್ಲೀಯರೆನ್ಸ್ ಸೇರಿದಂತೆ ಬ್ಯಾಂಕ್ ಸಂಬಂಧಿತ ದೈನಂದಿನ ಅಗತ್ಯ ವ್ಯವಹಾರಗಳಿಗೆ ತೊಂದರೆಯುಂಟಾಗಿದೆ. ಅಲ್ಲದೇ, ಎಟಿಎಂಗಳಿಗೆ ಹಣ ತುಂಬದ ಕಾರಣ, ಸಾವಿರಾರು ಎಟಿಎಂಗಳಲ್ಲಿ ಹಣವಿಲ್ಲದೇ ಗ್ರಾಹಕರು ಪರದಾಡುತ್ತಿದ್ದಾರೆ.
ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬರೋಡಾ ಬ್ಯಾಂಕ್ಗಳನ್ನು ವಿಲೀನ ಮಾಡುವುದಾಗಿ ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್ನಲ್ಲಿ ಹೇಳಿತ್ತು.
#MadhyaPradesh: United Forum of Bank Union (UFBU) protesting against the proposed merger of Vijaya Bank and Dena Bank with Bank of Baroda, in Bhopal pic.twitter.com/R0zP2P6BWp
— ANI (@ANI) December 26, 2018
ಆದರೆ, ಬ್ಯಾಂಕ್ ನೌಕರರ ಅಸೋಸಿಯೇಶನ್ ಇದನ್ನು ವಿರೋಧಿಸಿದ್ದು, ಇದು ಬ್ಯಾಂಕ್ಗಳ ಹಿತದೃಷ್ಠಿಯಿಂದ ಸರಿಯಾದ ನಿರ್ಧಾರವಲ್ಲ ಎಂದಿದೆ.
ಕೇಂದ್ರ ಸರ್ಕಾರ ಹೇಳಿದಂತೆ ಮೂರೂ ಬ್ಯಾಂಕ್ಗಳನ್ನು ವಿಲೀನಗೊಳಿಸಿದರೆ ಒಟ್ಟಾರೆಯಾಗಿ 14.82 ಟ್ರಿಲಿಯನ್ ರೂ. ವ್ಯವಹಾರವಾಗುವ ಮೂಲಕ ದೇಶದ ಮೂರನೆಯ ಅತಿದೊಡ್ಡ ಬ್ಯಾಂಕ್ ವ್ಯವಸ್ಥೆ ಎಂದು ಹೆಸರಾಗುತ್ತದೆ. ಸದ್ಯ ಭಾರತೀಯ ಸ್ಟೇಟ್ ಬ್ಯಾಂಕ್ ಮೊದಲನೆಯ ಸ್ಥಾನದಲ್ಲಿದ್ದು, ಎಚ್ಡಿಎಫ್ಸಿ ಬ್ಯಾಂಕ್ ಎರಡನೆಯ ಸ್ಥಾನದಲ್ಲಿದೆ.
Discussion about this post