ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ಬಳ್ಳಾರಿ-ಕೊಪ್ಪಳ ವಲಯ ಕೈಗಾರಿಕಾ ಸುರಕ್ಷತಾ ದಿನಾಚರಣೆ ಅಂಗವಾಗಿ ಆನ್’ಸೈಟ್ ಎಮರ್ಜೆನ್ಸಿ ತರಬೇತಿ ಯಶಸ್ವಿಯಾಗಿ ನೆರವೇರಿತು.
ಹೊಸಪೇಟೆಯ ಪಿಬಿಎಸ್ ಹೊಟೇಲ್ ಸಭಾಂಗಣದಲ್ಲಿ ಕಾರ್ಖಾನೆಯ ಕಾನೂನು ಮತ್ತು ಕಾಯ್ದೆಯಲ್ಲಿ ಬರುವ ಆನ್’ಸೈಟ್ ಎಮರ್ಜೆನ್ಸಿ ಪ್ರೆಪರೆಡ್ನೆಸ್ ಮತ್ತು ರೆಸ್ಪಾನ್ಸ್ ಅಣಕು ಪ್ರದರ್ಶನ ಬಗ್ಗೆ ಉಪಯುಕ್ತ ಮಾಹಿತಿ ವಿಷಯದ (Awareness session -On site emergency preparedness & response) ಮೇಲೆ ತರಬೇತಿಯನ್ನು ಬಳ್ಳಾರಿ ಕಾರ್ಖಾನೆಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀರವೀಂದ್ರನಾಥ್ ರಾಥೋಡ್ ಅವರು ಮಾಹಿತಿ ಮತ್ತು ತಿಳುವಳಿಕೆ ಮೂಡಿಸಿದರು.
ಸತತವಾಗಿ ನಾಲ್ಕು ಗಂಟೆಗಳ ಕಾಲ ಆನ್-ಸೈಟ್ ಎಮರ್ಜೆನ್ಸಿ ಪ್ರೆಪರೆಡ್ನೆಸ್ ಮತ್ತು ರೆಸ್ಪಾನ್ಸ್ ಬಗ್ಗೆ ತಿಳುವಳಿಕೆ ಮೂಡಿಸಿದರು ಕಾರ್ಖಾನೆಗಳಲ್ಲಿ ಸಂಭವಿಸಬಹುದಾದ ಅಪಘಾತಗಳು ಮತ್ತು ಅವಘಡಗಳನ್ನು ತಪ್ಪಿಸುವ ಮತ್ತು ಅದಕ್ಕೆ ಬೇಕಾಗುವ ಅವಶ್ಯಕ ಮಾಹಿತಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವ ಅಂಶಗಳನ್ನು ಮತ್ತು ಹಂತಹಂತವಾಗಿ ಕಾರ್ಯನಿರ್ವಹಿಸುವ ಬಗೆಯನ್ನು ಸುಲಭವಾಗಿ ಅರ್ಥವಾಗುವ ಹಾಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಅಧಿಕಾರಿಗಳೊಂದಿಗೆ ಅಣಕು ಪ್ರದರ್ಶನವನ್ನು ಸಹ ಮಾಡಿ ತೋರಿಸಿದರು.
ಬಳ್ಳಾರಿ ಕೊಪ್ಪಳ ವಲಯ ಎಲ್ಲ ಕಾರ್ಖಾನೆಯ ಸದಸ್ಯರು ಭಾಗವಹಿಸಿದ್ದರು. ಫ್ರಾಕ್ಸ್ ಏರ್ ಕಾರ್ಖಾನೆಯ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳಾದ ಶ್ರೀ ಭೀಮೇಶ್ವರ ರೆಡ್ಡಿಯವರು ಧನ್ಯವಾದಗಳನ್ನು ಅರ್ಪಿಸುವುದರ ಮೂಲಕ ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿಗೆ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಕ್ಕೆ ಕಳುಹಿಸಿದ್ದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದರು.
ಎಸ್’ಎಲ್’ಆರ್ ಕಾರ್ಖಾನೆಯ ಸುರಕ್ಷತಾ ವಿಭಾಗದ ಹಿರಿಯ ಅಧಿಕಾರಿ ಶ್ರೀ ಚಂದ್ರಶೇಖರ್ ಬೆಲ್ಲದ್ ಮತ್ತು ಫ್ರಾಕ್ಸ್ ಏರ್ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊನೆಯಲ್ಲಿ ಎಲ್ಲರಿಗೂ ಪ್ರಶಸ್ತಿಪತ್ರ ವಿತರಿಸಲಾಯಿತು. ಕಾರ್ಯಕ್ರಮವನ್ನು ಆಯೋಜಿಸಿದಂತಹ ಪ್ರಾಕ್ಸಿಂ ಏರ್ ಕಾರ್ಖಾನೆಯ ಆಡಳಿತ ಮಂಡಳಿಗೆ ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ಸಮಿತಿಯ ವತಿಯಿಂದ ಧನ್ಯವಾದಗಳನ್ನು ಅರ್ಪಿಸಲಾಯಿತು.
ವರದಿ: ಮುರಳೀಧರ ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post