ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬನಶಂಕರಿ 3ನೆಯ ಹಂತದ ಇಟ್ಟಮಡುವಿನಿಂದ ಎಜಿಎಸ್ ಲೇಔಟ್, ಅರೇಹಳ್ಳಿ, ಉತ್ತರಹಳ್ಳಿಗೆ ಸಂಪರ್ಕಿಸುವ ಸೇತುವೆ 150 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಪರ್ಯಾಯ ವ್ಯವಸ್ಥೆಗಾಗಿ ಅಲ್ಲಿಯೇ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಸೇತುವೆ ಶಿಥಿಲಗೊಂಡು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಸೇತುವೆ ಕಾರ್ಯ ಮುಕ್ತಾಯವಾಗುವವರೆಗೂ ಜನರಿಗೆ ಸಹಕಾರಿಯಾಗಲಿ ಎಂಬ ಕಾರಣದಿಂದ ಇಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದು, ಆ ಸೇತುವೆ ಮೇಲ್ಭಾಗದಲ್ಲಿ ಹಾಕಿರುವ ಮರದ ತುಂಡುಗಳಿಂದ ಜನರು ಓಡಾಡುವ ಸಮಯದಲ್ಲಿ ಶಬ್ದಗಳು ಬರುತ್ತದೆ. ಅಲ್ಲದೇ ಕೆಲವೊಂದು ಕಡೆಗಳಲ್ಲಿ ಮರದ ತುಂಡುಗಳು ಬಿರುಕು ಬಿಟ್ಟಿದ್ದು, ಅಪಾಯ ಸಂಭವಿಸುವುದೇ ಎಂಬ ಆತಂಕವನ್ನು ಸೃಷ್ಠಿಸಿದೆ. ಹೀಗಾಗಿ ಸಂಬಂಧಿಸಿದವರು ತತಕ್ಷಣವೇ ಎಚ್ಚೆತ್ತು ಇದನ್ನು ದುರಸ್ಥಿಪಡಿಸಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ಸದ್ಯ ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಭೀತಿಯಿಂದ ಕೆಲಸ ಸ್ಥಗಿತಗೊಂಡಿದೆ. ಆದಷ್ಟು ಶೀಘ್ರ ಕೆಲಸ ಆರಂಭಿಸಿ, ಮುಕ್ತಾಯಗೊಳಿಸಿ ಉತ್ತಮ ಗುಣಮಟ್ಟದ ಸೇತುವೆ ನಿರ್ಮಾಣವಾಗುವಂತೆ ಸಚಿವ ಆರ್. ಅಶೋಕ್ ಅವರು ಗಮನಹರಿಸಬೇಕಿದೆ.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
Get in Touch With Us info@kalpa.news Whatsapp: 9481252093
Discussion about this post