ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಹೆಮ್ಮೆ, ಪ್ರತಿಷ್ಠಿತ ನಂದಿನಿ #Nandini ಉತ್ಪನ್ನಗಳ ಪ್ರಚಾರದ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ #Actress Sudharani ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತಂತೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ #D K Suresh ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬಮೂಲ್ ಕುಟುಂಬಕ್ಕೆ ನಟಿ ಸುಧಾರಾಣಿ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ನಂಬಿಕೆಯ ಮೇಲೆ ನಿರ್ಮಿತವಾದ ನಂದಿನಿಯು ರೈತರ ಮೇಲಿನ ಬದ್ಧತೆ, ಶುದ್ಧ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರದೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ತಿಳಿಸಿದ್ದಾರೆ.
ಸ್ಯಾಂಡಲ್’ವುಡ್-ನಂದಿನಿ ನಂಟು
ಇನ್ನು, ರಾಜ್ಯದ ಹೆಮ್ಮ ನಂದಿನಿ ಬ್ರಾಂಡ್ ಮತ್ತು ಸ್ಯಾಂಡಲ್’ವುಡ್ #Sandalwood ನಡುವಿನ ಸಂಬಂಧವು ದೀರ್ಘ ಮತ್ತು ಗೌರವಾನ್ವಿತ ಇತಿಹಾಸವನ್ನು ಹೊಂದಿದೆ.
1996 ರಲ್ಲಿ ವರನಟ ನಟ ಡಾ. ರಾಜಕುಮಾರ್ #Rajkumar ಅವರು ಮೊದಲ ಪ್ರಚಾರ ರಾಯಭಾರಿಯಾಗಿದ್ದರು. ಅವರ ನಂತರ, ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ #Puneeth Rajkumar ಮತ್ತು ಶಿವರಾಜಕುಮಾರ್ #Shivarajkumar ಸಹ ಬ್ರಾಂಡ್ ರಾಯಭಾರಿಗಳಾಗಿ ಸೇವೆ ಸಲ್ಲಿಸಿದರು.
ವಿಶೇಷ ಅಂದರೆ, ಪುನೀತ್ ರಾಜಕುಮಾರ್ ಯಾವುದೇ ಸಂಭಾವನೆಯನ್ನು ಸ್ವೀಕರಿಸದೇ ಉಚಿತವಾಗಿ ನಂದಿನಿ ಪ್ರಚಾರ ರಾಯಭಾಗಿಯಾಗಿ ಸೇವೆ ಸಲ್ಲಿಸಿದ್ದರು.
ಈಗ ಸುಧಾರಾಣಿಯವರ ನೇಮಕದೊಂದಿಗೆ, ಬ್ರಾಂಡ್ ಗ್ರಾಹಕರೊಂದಿಗೆ ತನ್ನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಆಶಿಸುತ್ತದೆ. ಈ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ಸುಧಾರಾಣಿ, ಕನ್ನಡಿಗರ ತಲೆಮಾರುಗಳ ನಂಬಿಕೆಯನ್ನು ಸಂಕೇತಿಸುವ ಬ್ರಾಂಡ್ ಅನ್ನು ಪ್ರತಿನಿಧಿಸುವುದು ಹೆಮ್ಮೆ ಮತ್ತು ಜವಾಬ್ದಾರಿಯ ವಿಷಯ ಎಂದಿದ್ದಾರೆ.
ನಂದಿನಿ ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಸಂಕೇತವಾಗಿದೆ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿಯೊಂದಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯುವುದು ನನಗೆ ದೊಡ್ಡ ಗೌರವವಾಗಿದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ನಂದಿನಿ ಪರಂಪರೆಯನ್ನು ನೆನಪಿಸಿಕೊಂಡಿರುವ ಅವರು, ಡಾ. ರಾಜಕುಮಾರ್, ಶಿವರಾಜಕುಮಾರ್ಮತ್ತು ಪುನೀತ್ ರಾಜಕುಮಾರ್ ಅಂತಹ ದಿಗ್ಗಜರನ್ನು ಬ್ರಾಂಡ್ ರಾಯಭಾರಿಯಾಗಿ ಅನುಸರಿಸುವುದು ಕೇವಲ ಅನುಕರಣೆಯಲ್ಲ, ಸವಲತ್ತು ಮತ್ತು ಹೆಮ್ಮೆಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ದೇಶೀಯ ದನಗಳನ್ನು ರಕ್ಷಿಸುವುದು, ರೈತರಿಗೆ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸುವುದು ಮತ್ತು ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದು ನಂದಿನಿಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಈ ಹೊಸ ಅಧ್ಯಾಯವು ದೇಶೀಯ ಹಸುಗಳಿಂದ ತಯಾರಿಸಿದ ಎ2 ತುಪ್ಪ ಮತ್ತು ಎ2 ಹಾಲಿನಂತಹ ಉತ್ಪನ್ನಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















