ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚನ್ನಸಂದ್ರ ನಿಲ್ದಾಣದಲ್ಲಿ ಯಾರ್ಡ್ ಮರುವಿನ್ಯಾಸ ಕಾಮಗಾರಿ ನಿಮಿತ್ತ ಈ ಕೆಳಕಂಡ ರೈಲುಗಳ ಸೇವೆಗಳಲ್ಲಿ ಭಾಗಶಃ ರದ್ದುಪಡಿಸುವಿಕೆ ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ Railway Department ತಿಳಿಸಿದೆ. ಹೀಗಿದೆ ಡೀಟೇಲ್ಸ್.
ಈ ರೈಲುಗಳ ಭಾಗಶಃ ರದ್ದು
20687 ಸಂಖ್ಯೆಯ ಹುಬ್ಬಳ್ಳಿ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ Hubballi-KSR Bengaluru Express 29ರ ಇಂದಿನಿಂದ ಮೇ 01ರವರೆಗೆ ಹೊರಡುವ ರೈಲು ಯಶವಂತಪುರ ಮತ್ತು ಕೆಎಸ್’ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಯಶವಂತಪುರದಲ್ಲೇ ಕೊನೆಗೊಳ್ಳಲಿದೆ.
20688 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಹುಬ್ಬಳ್ಳಿ ಎಕ್ಸ್’ಪ್ರೆಸ್ ಎಪ್ರಿಲ್ 30ರಿಂದ ಮೇ 02ರವರೆಗೆ ಹೊರಡುವ ರೈಲು ಕೆಎಸ್’ಆರ್ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಕೆಎಸ್’ಆರ್ ಬೆಂಗಳೂರಿನ ಬದಲಿಗೆ ಯಶವಂತಪುರದಿಂದ ತನ್ನ ನಿಗದಿತ ವೇಳೆಗೆ ಹೊರಡಲಿದೆ.
ರೈಲುಗಳ ಮಾರ್ಗ ಬದಲಾವಣೆ
- 12785 ಸಂಖ್ಯೆಯ ಕಾಚಿಗುಡ – ಅಶೋಕಪುರಂ ಎಕ್ಸ್’ಪ್ರೆಸ್ 29ರ ಇಂದಿನಿಂದ ಮೇ 02ರವರೆಗೆ ಹೊರಡುವ ರೈಲು ಯಲಹಂಕ, ಯಶವಂತಪುರ ಹಾಗೂ ಕೆಎಸ್’ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಬೆಂಗಳೂರು ಈಸ್ಟ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- 12786 ಸಂಖ್ಯೆಯ ಅಶೋಕಪುರಂ – ಕಾಚಿಗುಡ ಎಕ್ಸ್’ಪ್ರೆಸ್ ಎಪ್ರಿಲ್ 30ರಿಂದ ಮೇ 02ರವರೆಗೆ ಹೊರಡುವ ರೈಲು ಕೆಎಸ್’ಆರ್ ಬೆಂಗಳೂರು, ಯಶವಂತಪುರ ಹಾಗೂ ಯಲಹಂಕ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ವಿನಂತಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















