Saturday, June 21, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಸಂತಾನ ಭಾಗ್ಯ ಕರುಣಿಸುವ ಬೆಂಗಳೂರಿನ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿಗೆ ಕ್ಷಣಗಣನೆ

March 10, 2021
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬೆಂಗಳೂರು: ಬೆಂಗಳೂರು ನಗರದ ಜನ ದಟ್ಟಣೆಯ ನಡುವೆಯೂ ಮನಸ್ಸಿಗೊಂದಿಷ್ಟು ಆಹ್ಲಾದ ನೀಡುವ, ಮನದ ಬೇಗೆ ತಣಿಸುವ ದೇಗುಲವೊಂದು ಬನಶಂಕರಿ 3 ನೆಯ ಹಂತದ ಹೊಸಕೆರೆಹಳ್ಳಿಯ ಮೂಕಾಂಬಿಕ ನಗರದ 14ನೆಯ ತಿರುವಿನಲ್ಲಿದೆ.

ಬನಶಂಕರಿ 3 ನೆಯ ಹಂತದಲ್ಲಿರುವ ಅಭಿಷೇಕಪ್ರಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ ದೇಗುಲ ತೀರಾ ಪ್ರಾಚೀನವದುದೇನಲ್ಲ. ಚೌಕಾಕಾರ ವಿನ್ಯಾಸದಲ್ಲಿರುವ ದೇವಸ್ಥಾನ 2010ರಲ್ಲಿ ಲೋಕಾರ್ಪಣೆಗೊಂಡಿದೆ. ನವ ನವೀನ ದೇಗುಲವಾದರೂ ಇಂದಿಗೂ ಪಾರಂಪರಿಕ ಸೊಗಡನ್ನು ಉಳಿಸಿಕೊಂಡಿರುವುದು ವಿಶೇಷ.

ಹೊಸಕೆರೆಹಳ್ಳಿಯ ಮೂಕಾಂಬಿಕ ನಗರದ 14 ನೆಯ ತಿರುವಿನಲ್ಲಿ ಇರುವ ಅಭಿಷೇಕ ಪ್ರಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಮಹಾ ಶಿವರಾತ್ರಿಗೆ ಕ್ಷಣಗಣನೆ ಆರಂಭವಾಗಿದೆ.
ದೇವಾಲಯದಲ್ಲಿ ಶಾರ್ವರಿ ಸಂವತ್ಸರದ ಮಾಘ ಕೃಷ್ಣ ತ್ರಯೋದಶಿ ಮಾರ್ಚ್ 11 ರ ಗುರುವಾರ ಮಹಾಶಿವರಾತ್ರಿಯ ಪ್ರಯುಕ್ತ ಮುಂಜಾನೆ 8.30 ಕ್ಕೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ ಮಧ್ಯಾಹ್ನ12 ಗಂಟೆಗೆ ಮಹಾಮಂಗಳಾರತಿ ಜರುಗಲಿದೆ. ಅಂದು ಸಂಜೆ 6 ಗಂಟೆಗೆ ರುದ್ರಾಭಿಷೇಕ ರಾತ್ರಿ 8 ಗಂಟೆಗೆ ರಂಗ ಪೂಜೆ – ದೀಪಾರಾಧನೆ ನಡೆಯಲಿದೆ.

ಮಾರ್ಚ್ 12 ರ ಶುಕ್ರವಾರ ಬೆಳಗ್ಗೆ 9 ರಿಂದ 12 ರವರೆಗೆ ರುದ್ರಯಾಗವನ್ನು ಹಮ್ಮಿಕೊಳ್ಳಲಾಗಿದ್ದು ನಂತರ ಭಕ್ತರಿಗೆ ಅನ್ನದಾನ ಸೇವೆ ನಡೆಯಲಿದೆ.
ಕ್ಷೇತ್ರ ಪರಿಚಯ
2010ರ ಅಕ್ಷಯ ತೃತೀಯ ದಿನದಂದು ಲೋಕಾರ್ಪಣೆಗೊಂಡಿರುವ ದೇವಾಲಯದಲ್ಲಿ ರುದ್ರಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ ಸದಾಶಿವ ಮಂಜುನಾಥ ಹಾಗೂ ಸ್ವಯಂವರ ಶ್ರೀ ಪಾರ್ವತಿ ದೇವಿ ಹಾಗೂ ಶ್ರೀ ಮಹಾಗಣಪತಿ ಸನ್ನಿಧಾನವಿದೆ. ಚೌಕಾಕಾರ ವಿನ್ಯಾಸದಲ್ಲಿರುವ ದೇವಾಲಯದ ಮುಂಭಾಗದಲ್ಲಿ ಗರುಡಗಂಬ ವಿದ್ದು ದೇವಾಲಯದ ಪ್ರಮುಖದ್ವಾರದ ಮೇಲ್ಭಾಗದಲ್ಲಿ ಶಿವ-ಪಾರ್ವತಿ ಮತ್ತು ಗಣಪತಿ ಇದ್ದು ರಾಜ ಗೋಪುರವಿದೆ.

ಮಾಧ್ವ ಸಂಪ್ರದಾಯದಂತೆ ಪ್ರತಿ ನಿತ್ಯ ಪೂಜೆ-ಪುನಸ್ಕಾರ
ಮಾಧ್ವ ಸಂಪ್ರದಾಯದಂತೆ ಪ್ರತಿ ನಿತ್ಯ ಪೂಜೆ – ಪುನಸ್ಕಾರಗಳು ಹಾಗೂ ಅಲಂಕಾರಗಳು ಮಾಡಲಾಗುತ್ತದೆ. ಶ್ರೀ ವರಸಿದ್ದಿ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಶ್ರೀ ಸ್ವಾಮಿಗೆ ಗೋಪಿಚಂದನದ ಅಲಂಕಾರ ಹಾಗೂ ಗಂಧ – ಅಕ್ಷತೆ ಹಾಗೂ ಪುಷ್ಪ ಅಲಂಕಾರ ಮಾಡಲಾಗುತ್ತದೆ. ಪೂಜಾ ವಿಧಾನದಂತೆ ಷೋಡಶಾಂಗ ಪೂಜೆಮಾಡುವುದು ವಾಡಿಕೆ.
ಮನ್ಯು ಸೂಕ್ತ ಪುನಃಶ್ಚರಣದಿಂದ ಅಭಿಷೇಕ
ಮನ್ಯು ಸೂಕ್ತ ಪುನಃಶ್ಚರಣದಿಂದ ಅಭಿಷೇಕ ಮತ್ತು ರುದ್ರಾಭಿಷೇಕದ ಮೂಲಕ ಪ್ರತಿ ನಿತ್ಯ ಪೂಜೆ ನಡೆಯುತ್ತದೆ. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇದ್ದು ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟು ಅದರೊಳಗೆ ನೀರು ತುಂಬಿಸಿದಾಗ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವ ಮೂಲಕ ಮಹಾ ರುದ್ರ ದೇವರಿಗೆ ಅಭಿಷೇಕವಾಗುತ್ತದೆ ಎನ್ನುತ್ತಾರೆ ದೇವಾಲಯದ ಪ್ರಧಾನ ಪುರೋಹಿತರಾದ ವೇದ ಗಿರಿ ಭಟ್.

ಸಂತಾನ ಭಾಗ್ಯಕ್ಕೆ ಪ್ರದಕ್ಷಿಣೆ ಸೇವೆ
ಶ್ರೀಕ್ಷೇತ್ರದಲ್ಲಿ ಪ್ರದಕ್ಷಿಣೆ ರೂಪದಲ್ಲಿ ಸೇವೆ ಸಲ್ಲಿಸಿ ಅನೇಕ ದಂಪತಿಗಳು ಸಂತಾನ ಪಡೆದಿದ್ದಾರೆ ಹಾಗೂ ಉದ್ಯೋಗ ಸಮಸ್ಯೆ ಇದ್ದರೆ ಹಾಗೂ ನೂತನ ಉದ್ಯೋಗದ ಹುಡುಕಾಟದಲ್ಲಿ ಇದ್ದರೆ ಇಲ್ಲಿ ಬೇಡಿದರೆ ಉದ್ಯೋಗವನ್ನು ಭಗವಂತ ದಯ ಪಾಲಿಸುತ್ತಾನೆ. ಆದರಿಂದ ಶ್ರೀ ಕ್ಷೇತ್ರಕ್ಕೆ ಶ್ರೀ ವರಸಿದ್ದಿ ಮಂಜುನಾಥೇಶ್ವರ ಎಂಬ ಹೆಸರು ಎನ್ನುತ್ತಾರೆ.

ಸಣ್ಣ ಮಕ್ಕಳಿಗೆ ಆಗುವ ಭಯ-ಭೀತಿ ನಿವಾರಿಸಲು ಶ್ರೀ ಸ್ವಾಮಿಯ ಸನ್ನಿಧಾನದಲ್ಲಿ ಯಂತ್ರ ಮಾಡಿ ಕೊಡಲಾಗುತ್ತದೆ.
ಅಭಿಷೇಕ ಪ್ರಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ ಸನ್ನಿಧಿಯಲ್ಲಿ ನಡೆಯುವ ಸೇವೆಗಳು
ಪಂಚಾಮೃತ, ಕ್ಷೀರಾಭಿಷೇಕ, ಅರ್ಚನೆ, ರುದ್ರ ಯಾಗ (ಸಾಮೂಹಿಕ) ಸೇವೆ, ರಂಗ ಪೂಜೆ – ದೀಪಾರಾಧನೆ, ಪ್ರದೋಷ ಪೂಜೆ ಏಳೆನೀರು ಅಭಿಷೇಕ, ರುದ್ರಾಭಿಷೇಕ, ಏಕಾದಶ ರುದ್ರಾಭಿಷೇಕ, ಸಂಪೂರ್ಣ ರುದ್ರಾಭಿಷೇಕ ಸೇವೆ, ಸಂಪೂರ್ಣ ರುದ್ರಯಾಗ ಸೇವೆ ಹಾಗೂ ಅನ್ನದಾನ ಸೇವೆ.
ದೇವಾಲಯವು ಬೆಳ್ಳಿಗ್ಗೆ 6 ರಿಂದ 12 ರ ವರೆಗೆ ಹಾಗೂ ಸಂಜೆ 5 ರಿಂದ ರಾತ್ರಿ 8. 30ರವರೆಗೆ ತೆರೆದಿರುತ್ತದೆ.

ಮಹಾರುದ್ರ ದೇವರ ಬಗ್ಗೆ
ಶಿವ ಐಶಾನ್ಯ ದಿಕ್ಕಿಗೆ ಅಧಿಪತಿ. ಈಶಾನನ ದಿಕ್ಕು ಐಶಾನ್ಯ. ಅಲ್ಲಿ ಶಿವ ಏಕೆ ನಿಂತಿದ್ದಾನೆ ಎಂದರೆ ಪೂರ್ವ ದಿಕ್ಕಿನಲ್ಲಿ ಅದರ ಅಧಿಪತಿಯಾದ ಇಂದ್ರನ ಜೊತೆಗೆ ಉಪೇಂದ್ರನೋ ಇದ್ದಾನೆ. ಪೂರ್ವ ದಿಕ್ಕಿನಲ್ಲಿ ಪಾಶ್ಚಿಮಾಭಿಮುಖನಾಗಿ ಕುಳಿತ ಉಪೇಂದ್ರನನ್ನು ಈಶಾನ್ಯ ದಲ್ಲಿರುವ ಶಿವ ಅರಾಧಿಸುತ್ತಾನೆ. ಹೀಗೆ ಶಿವನು ತನ್ನವಾಮ ಭಾಗದಲ್ಲಿ ರುವ ವಾಮನನನ್ನು ಸದಾ ಪೂಜಿಸುತ್ತಿದ್ದುದರಿಂದ ಶಿವ ವಾಮ ದೇವ ಎನಿಸಿದ, ಬ್ರಹ್ಮ ದೇವರ ಭ್ರೂ ಮಧ್ಯದಿಂದಾಗಿ ಜನಿಸಿ ಬಂದಿದ್ದರಿಂದ ಶಿವನು ವಿರಿಂಚಿತನಯ ಎನಿಸಿದ್ದಾನೆ.

ಶಿವನು ಜನಿಸುತ್ತಿದ್ದಂತೆಯೇ ರೋದನ ಮಾಡಿದ್ದರಿಂದ ರುದ್ರ ಎಂದು ಕರೆಸಿಕೊಂಡನು ಎಂಬ ವಿಶೇಷ ಅಂಶವನ್ನು ಭಾಗವತದಲ್ಲಿ ಉಲ್ಲೇಖ ಮಾಡಲಾಗಿದೆ.


ಶಿವ ಶಕ್ತಿ
ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ. ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು.

ಅಭಿಷೇಕ ಪದ್ಧತಿ
ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ.

ಜಾಗರಣೆ, ಹಬ್ಬದ ವಿಶೇಷ ಆಚರಣೆ
ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ.

(ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ ಲೇಖನ ಬರೆಯಲಾಗಿದೆ)


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: BENGALURUKannada News WebsiteLatest News KannadaShivaratriಅಭಿಷೇಕಬೆಂಗಳೂರುಮನ್ಯು ಸೂಕ್ತ ಪುನಃಶ್ಚರಣಶಿವರಾತ್ರಿಶ್ರೀ ಪಾರ್ವತಿ ದೇವಿಶ್ರೀ ವರಸಿದ್ದಿ ಮಂಜುನಾಥೇಶ್ವರ ದೇಗುಲ
Previous Post

ರಾಜ್ಯದಲ್ಲಿ ಸೆಲ್ಫ್ ಡಿಫೆನ್ಸ್ ಆರ್ಮಿ ರಚನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Next Post

ಕಾಂಪ್ಲೆಕ್ಸ್‌ ಲೈಫ್ ಸ್ಟೈಲಲ್ಲಿ ತಂಗಾಳಿಯಂತೆ ಶಿವ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಾಂಪ್ಲೆಕ್ಸ್‌ ಲೈಫ್ ಸ್ಟೈಲಲ್ಲಿ ತಂಗಾಳಿಯಂತೆ ಶಿವ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!